<p><strong>ಬೆಂಗಳೂರು</strong>: ಎಟಿಎಂಗೆ ತುಂಬಲು ಕೊಂಡೊಯ್ಯುತ್ತಿದ್ದ ಹಣ ಲಪಟಾಯಿಸಿ ₹ 10 ಲಕ್ಷ ಕಮಿಷನ್ ಪಡೆಯಬಹುದೆಂಬ ಆಸೆ ಪಟ್ಟು ವಂಚಿಸಿದ್ದ ಮೂವರನ್ನು ಕಬ್ಬನ್ ಪಾರ್ಕ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.</p>.<p>ಅಶೋಕ್, ಶ್ರೀನಿವಾಸ್ ಮತ್ತು ಸಂತೋಷ್ ಪೊಲೀಸರ ಬಲೆಗೆ ಬಿದ್ದವರು. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ರಾಮುಗಾಗಿ ಹುಡು<br />ಕಾಟ ನಡೆಸುತ್ತಿದ್ದಾರೆ. ಸಂತೋಷ್ ಹೊರತುಪಡಿಸಿ ಉಳಿದವರು ಎಟಿಎಂಗೆ ಹಣ ತುಂಬಿಸುವ ಸೆಕ್ಯೂರ್ ವ್ಯಾಲ್ಯೂ ಇಂಡಿಯಾ ಕಂಪನಿಯ ನೌಕರರು.</p>.<p>‘ಎಟಿಎಂಗಳಿಗೆ ತುಂಬಲು ಅಶೋಕ್, ರಾಮು ಮತ್ತು ಶ್ರೀನಿವಾಸ್ ಮೇ 14ರಂದು ಸೈಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಎಸ್ಬಿಐ ಬ್ಯಾಂಕಿನಿಂದ ₹ 4.5 ಕೋಟಿ ಡ್ರಾ ಮಾಡಿದ್ದರು. ಈ ಹಣದಲ್ಲಿ ₹ 3.5 ಕೋಟಿಯನ್ನು ರಾಮು ಮತ್ತು ಶ್ರೀನಿವಾಸ್ ಅವರ ಬಳಿ ನೀಡಿದ್ದ ಅಶೋಕ, ₹ 1 ಕೋಟಿ ಸಮೇತ ಪರಾರಿಯಾಗಿದ್ದಾನೆ’ ಎಂದು ಕಂಪನಿಯ ವ್ಯವಸ್ಥಾಪಕ ರಾಜು ಕಬ್ಬನ್ ಪಾರ್ಕ್ ಠಾಣೆಯಲ್ಲಿ ಮೇ 14ರಂದು ದೂರು ನೀಡಿದ್ದರು.</p>.<p>‘ದೂರು ದಾಖಲಾಗುತ್ತಿದ್ದಂತೆ ಅಶೋಕ್ ಮತ್ತು ಶ್ರೀನಿವಾಸ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಆಗ ಕಮಿಷನ್ ಆಸೆಯಿಂದ ಸಂತೋಷ್ ಎಂಬಾತನಿಗೆ ಹಣ ನೀಡಿರುವ ಮಾಹಿತಿ ಸಿಕ್ಕಿತು’ ಎಂದು ಪೊಲೀಸರು ತಿಳಿಸಿದರು.</p>.<p>‘ನನಗೆ ₹ 1 ಕೋಟಿ ನೀಡಿದರೆ ಒಂದು ಗಂಟೆಯಲ್ಲಿ ₹ 10 ಲಕ್ಷ ಸೇರಿಸಿ ₹ 1.10 ಕೋಟಿ ವಾಪಸು ನೀಡುತ್ತೇನೆ’ ಎಂದು ಸಂತೋಷ್ ಎಂಬಾತ ಅಶೋಕ್ನನ್ನು ಪುಸಲಾಯಿಸಿದ್ದ. ₹ 10 ಲಕ್ಷ ಕಮಿಷನ್ ಆಸೆಗೆ ಬಿದ್ದ ಆರೋಪಿಗಳು, ಸಂತೋಷ್ಗೆ ₹ 1 ಕೋಟಿ ಕೊಟ್ಟಿದ್ದರು. ಹಣ ಪಡೆದ ಬಳಿಕ ಸಂತೋಷ್ ಪರಾರಿಯಾಗಿದ್ದ. ತನ್ನ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದ. ಅರ್ಧ ದಿನ ಕಳೆದರೂ ಸಂತೋಷ್ ಪತ್ತೆಯಾಗಿರಲಿಲ್ಲ. ಈ ಮಧ್ಯೆ, ಕಂಪನಿಯ ವ್ಯವಸ್ಥಾಪಕ ದೂರು ನೀಡಿದ್ದರು.</p>.<p>ಮೊಬೈಲ್ ಕರೆ ಆಧರಿಸಿ ಸಂತೋಷ್ನನ್ನು ವಶಕ್ಕೆ ಪಡೆದು ₹ 1 ಕೋಟಿ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಎಟಿಎಂಗೆ ತುಂಬಲು ಕೊಂಡೊಯ್ಯುತ್ತಿದ್ದ ಹಣ ಲಪಟಾಯಿಸಿ ₹ 10 ಲಕ್ಷ ಕಮಿಷನ್ ಪಡೆಯಬಹುದೆಂಬ ಆಸೆ ಪಟ್ಟು ವಂಚಿಸಿದ್ದ ಮೂವರನ್ನು ಕಬ್ಬನ್ ಪಾರ್ಕ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.</p>.<p>ಅಶೋಕ್, ಶ್ರೀನಿವಾಸ್ ಮತ್ತು ಸಂತೋಷ್ ಪೊಲೀಸರ ಬಲೆಗೆ ಬಿದ್ದವರು. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ರಾಮುಗಾಗಿ ಹುಡು<br />ಕಾಟ ನಡೆಸುತ್ತಿದ್ದಾರೆ. ಸಂತೋಷ್ ಹೊರತುಪಡಿಸಿ ಉಳಿದವರು ಎಟಿಎಂಗೆ ಹಣ ತುಂಬಿಸುವ ಸೆಕ್ಯೂರ್ ವ್ಯಾಲ್ಯೂ ಇಂಡಿಯಾ ಕಂಪನಿಯ ನೌಕರರು.</p>.<p>‘ಎಟಿಎಂಗಳಿಗೆ ತುಂಬಲು ಅಶೋಕ್, ರಾಮು ಮತ್ತು ಶ್ರೀನಿವಾಸ್ ಮೇ 14ರಂದು ಸೈಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಎಸ್ಬಿಐ ಬ್ಯಾಂಕಿನಿಂದ ₹ 4.5 ಕೋಟಿ ಡ್ರಾ ಮಾಡಿದ್ದರು. ಈ ಹಣದಲ್ಲಿ ₹ 3.5 ಕೋಟಿಯನ್ನು ರಾಮು ಮತ್ತು ಶ್ರೀನಿವಾಸ್ ಅವರ ಬಳಿ ನೀಡಿದ್ದ ಅಶೋಕ, ₹ 1 ಕೋಟಿ ಸಮೇತ ಪರಾರಿಯಾಗಿದ್ದಾನೆ’ ಎಂದು ಕಂಪನಿಯ ವ್ಯವಸ್ಥಾಪಕ ರಾಜು ಕಬ್ಬನ್ ಪಾರ್ಕ್ ಠಾಣೆಯಲ್ಲಿ ಮೇ 14ರಂದು ದೂರು ನೀಡಿದ್ದರು.</p>.<p>‘ದೂರು ದಾಖಲಾಗುತ್ತಿದ್ದಂತೆ ಅಶೋಕ್ ಮತ್ತು ಶ್ರೀನಿವಾಸ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಆಗ ಕಮಿಷನ್ ಆಸೆಯಿಂದ ಸಂತೋಷ್ ಎಂಬಾತನಿಗೆ ಹಣ ನೀಡಿರುವ ಮಾಹಿತಿ ಸಿಕ್ಕಿತು’ ಎಂದು ಪೊಲೀಸರು ತಿಳಿಸಿದರು.</p>.<p>‘ನನಗೆ ₹ 1 ಕೋಟಿ ನೀಡಿದರೆ ಒಂದು ಗಂಟೆಯಲ್ಲಿ ₹ 10 ಲಕ್ಷ ಸೇರಿಸಿ ₹ 1.10 ಕೋಟಿ ವಾಪಸು ನೀಡುತ್ತೇನೆ’ ಎಂದು ಸಂತೋಷ್ ಎಂಬಾತ ಅಶೋಕ್ನನ್ನು ಪುಸಲಾಯಿಸಿದ್ದ. ₹ 10 ಲಕ್ಷ ಕಮಿಷನ್ ಆಸೆಗೆ ಬಿದ್ದ ಆರೋಪಿಗಳು, ಸಂತೋಷ್ಗೆ ₹ 1 ಕೋಟಿ ಕೊಟ್ಟಿದ್ದರು. ಹಣ ಪಡೆದ ಬಳಿಕ ಸಂತೋಷ್ ಪರಾರಿಯಾಗಿದ್ದ. ತನ್ನ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದ. ಅರ್ಧ ದಿನ ಕಳೆದರೂ ಸಂತೋಷ್ ಪತ್ತೆಯಾಗಿರಲಿಲ್ಲ. ಈ ಮಧ್ಯೆ, ಕಂಪನಿಯ ವ್ಯವಸ್ಥಾಪಕ ದೂರು ನೀಡಿದ್ದರು.</p>.<p>ಮೊಬೈಲ್ ಕರೆ ಆಧರಿಸಿ ಸಂತೋಷ್ನನ್ನು ವಶಕ್ಕೆ ಪಡೆದು ₹ 1 ಕೋಟಿ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>