‘ಎಟಿಎಂಗಳಿಗೆ ತುಂಬಲು ಅಶೋಕ್, ರಾಮು ಮತ್ತು ಶ್ರೀನಿವಾಸ್ ಮೇ 14ರಂದು ಸೈಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಎಸ್ಬಿಐ ಬ್ಯಾಂಕಿನಿಂದ ₹ 4.5 ಕೋಟಿ ಡ್ರಾ ಮಾಡಿದ್ದರು. ಈ ಹಣದಲ್ಲಿ ₹ 3.5 ಕೋಟಿಯನ್ನು ರಾಮು ಮತ್ತು ಶ್ರೀನಿವಾಸ್ ಅವರ ಬಳಿ ನೀಡಿದ್ದ ಅಶೋಕ, ₹ 1 ಕೋಟಿ ಸಮೇತ ಪರಾರಿಯಾಗಿದ್ದಾನೆ’ ಎಂದು ಕಂಪನಿಯ ವ್ಯವಸ್ಥಾಪಕ ರಾಜು ಕಬ್ಬನ್ ಪಾರ್ಕ್ ಠಾಣೆಯಲ್ಲಿ ಮೇ 14ರಂದು ದೂರು ನೀಡಿದ್ದರು.