‘ಸೋಮವಾರ ಬೆಳಿಗ್ಗೆ 9ರ ಸುಮಾರಿಗೆ ಹೇಮಾಂಶು, ಕಾರಿನಲ್ಲಿ ಸಿಟಿಓ ವೃತ್ತಕ್ಕೆ ಬಂದಿದ್ದರು. ಕೆಂಪು ಸಿಗ್ನಲ್ ಇದ್ದಿದ್ದರಿಂದ ಕಾಯುತ್ತ ನಿಂತಿದ್ದರು. ಅದೇ ವೇಳೆ ಬೈಕ್ನಲ್ಲಿ ಬಂದಿದ್ದ ಇಬ್ಬರು, ‘ನಿಮ್ಮ ಕಾರಿನಿಂದ ದಟ್ಟಣೆ ಉಂಟಾಗುತ್ತಿದೆಮುಂದಕ್ಕೆ ಹೋಗಿ’ ಎಂದು ಹೇಳಿ ಗಮನ ಬೇರೆಡೆ ಸೆಳೆದು ಕಿಟಕಿ ಮೂಲಕ ಮೊಬೈಲ್ ಕದ್ದುಕೊಂಡು ಹೋಗಿದ್ದಾರೆ’ ಎಂದು ಪೊಲೀಸರು ತಿಳಿಸಿದರು.