‘ದೂರದ ಊರುಗಳಿಗೆ ರೈಲುಗಳು ಹೆಚ್ಚು ಸಂಚರಿಸುತ್ತಿಲ್ಲ. ಪ್ರಯಾಣಿಕರ ಸಂಖ್ಯೆಯೂ ಕಡಿಮೆ ಇದೆ. ಇದರಿಂದ ರೈಲುಗಳು ಹಾಗೂ ಲಭ್ಯವಿರುವ ಮೂಲಸೌಲಭ್ಯಗಳು ಪೂರ್ಣಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ. ಆದರೆ, ನಗರ ಮತ್ತು ನಗರದ ಸುತ್ತ–ಮುತ್ತ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಸುಮಾರು 2 ಕೋಟಿ ಜನ ಬೆಂಗಳೂರು ಮತ್ತು ಸುತ್ತ–ಮುತ್ತ ಇದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯ ರೈಲು ಸಂಚಾರ ಸೇವೆ ನೀಡಿದರೆ ಇಲಾಖೆಗೂ ವರಮಾನ ಬರುತ್ತದೆ, ಸ್ಥಳೀಯರಿಗೂ ಅನುಕೂಲವಾಗುತ್ತದೆ’ ಎಂದು ಸಿಟಿಜನ್ಸ್ ಫಾರ್ ಸಿಟಿಜನ್ಸ್ ಸಂಘಟನೆಯ ಸಂಚಾಲಕ ರಾಜಕುಮಾರ್ ದುಗರ್ ‘ಪ್ರಜಾವಾಣಿ’ಗೆ ಹೇಳಿದರು.