ಪುರಭವನದ ಎದುರು ಸೇರಿದ್ದ ನೂರಾರು ಕಾರ್ಯಕರ್ತರು, ‘ಮಹಾರಾಷ್ಟ್ರ ಸರ್ಕಾರದ ಗುಲಾಮ ಸಂಘಟನೆ ಎಂಇಎಸ್ಗೆ ಧಿಕ್ಕಾರ’, ‘ಸಂವಿಧಾನ ವಿರೋಧಿ ಎಂಇಎಸ್ಗೆ ಧಿಕ್ಕಾರ’, ‘ಒಕ್ಕೂಟ ವ್ಯವಸ್ಥೆಯ ವಿರೋಧಿ ಶಿವಸೇನಾಗೆ ಧಿಕ್ಕಾರ’, ‘ಎಂಇಎಸ್ ವಿಚಾರದಲ್ಲಿ ಮೌನ ಧೋರಣೆ ತಳೆದಿರುವ ಬೆಳಗಾವಿಯ ರಾಜಕಾರಣಿಗಳಿಗೆ ಧಿಕ್ಕಾರ’, ‘ಬೆಳಗಾವಿ ನಮ್ಮದು’ ಎಂಬ ಘೋಷಣೆಗಳನ್ನು ಕೂಗಿದರು. ಮೆರವಣಿಗೆ ಸಾಗಿದ ಮಾರ್ಗದಲ್ಲಿ ಕನ್ನಡ ಧ್ವಜಗಳು ರಾರಾಜಿಸಿದವು.