<p><strong>ಬೆಂಗಳೂರು:</strong> ‘ಅಂಗವಿಕಲರಿಗೆ ಕೆಲಸ ಇಲ್ಲವೇ ಜೀವನಾವಶ್ಯಕ ಭತ್ಯೆ ಕೊಡಬೇಕು’ ಎನ್ನುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಅಂಗವಿಕಲರು ಪ್ರತಿಭಟನೆ ನಡೆಸಿದರು.</p>.<p>‘ಏಳು ರೀತಿಯ ಅಂಗವೈಕಲ್ಯ ಇರುವ ಆರೈಕೆದಾರರಿಗೆ ರಾಜ್ಯ ಸರ್ಕಾರವು ಮಾಸಿಕ ₹ 1000 ಪ್ರೋತ್ಸಾಹಧನ ನೀಡಿರುವುದು ಸ್ವಾಗತಾರ್ಹ. ಇದನ್ನು ₹3000ಕ್ಕೆ ಏರಿಸಬೇಕು. ಮಾಸಿಕ ಪಿಂಚಣಿ ಈಗಲೂ ₹1400 ಇದೆ. ಇದರಲ್ಲಿ ಕೇಂದ್ರದ ಪಾಲು ಬರೀ ₹300 ಮಾತ್ರ. 15 ವರ್ಷದಿಂದ ಪಿಂಚಣಿ ಏರಿಕೆಯಾಗದೇ ಅಂಗವಿಕಲರಿಗೆ ತೊಂದರೆಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ಆಂಧ್ರದಲ್ಲಿ ಮಾಸಿಕ ₹ 6000, ತೆಲಂಗಾಣದಲ್ಲಿ ₹4000, ದೆಹಲಿ, ಹರಿಯಾಣದಲ್ಲಿ ₹3000 ಪಿಂಚಣಿ ದೊರೆಯುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ತಲಾ ₹5000 ನೀಡಿ ಮಾಸಿಕ ಪಿಂಚಣಿಯನ್ನು ₹10 ಸಾವಿರ ಏರಿಕೆ ಮಾಡಬೇಕು. ರಾಜಸ್ಥಾನದ ಮಾದರಿಯಲ್ಲಿ ವಾರ್ಷಿಕ ಶೇ 15ರಷ್ಟು ಹೆಚ್ಚಳದ ಪಿಂಚಣಿ ಹಕ್ಕು ಕಾಯಿದೆ ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.</p>.<p>ಪಂಚಾಯಿತಿಗಳಲ್ಲಿ ಮೀಸಲಿಟ್ಟಿರುವ ಅಂಗವಿಕಲರ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಬೇಕು. ಬಸ್ ಪಾಸ್ ರಾಜ್ಯದಾದ್ಯಂತ ವಿಸ್ತರಿಸಬೇಕು. ಅಂಗವಿಕಲರನ್ನು ಮದುವೆಯಾದರೆ ನೀಡುವ ಪ್ರೋತ್ಸಾಹಧನ ಹೆಚ್ಚಿಸಬೇಕು. ಉಚಿತ ಆರೋಗ್ಯ ಸೇವೆ ನೀಡಬೇಕು ಎಂದು ಒತ್ತಾಯಿಸಿದರು.</p>.<p>ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನಿರ್ದೇಶಕ ಟಿ.ರಾಘವೇಂದ್ರ ಹಾಗೂ ರಾಜ್ಯ ಅಂಗವಿಕಲರ ಹಕ್ಕುಗಳ ಸಮಿತಿಯ ಆಯುಕ್ತ ದಾಸ್ ಸೂರ್ಯವಂಶಿ ಅವರು ಪ್ರತಿಭಟನಕಾರರ ಮನವಿ ಸ್ವೀಕರಿಸಿ ಸರ್ಕಾರದ ಗಮನಕ್ಕೆ ತರುವ ಭರವಸೆ ನೀಡಿದರು. </p>.<p>ಇದಕ್ಕೆ ಒಪ್ಪದ ಒಕ್ಕೂಟದ ಪ್ರತಿನಿಧಿಗಳು, ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಆಗಮಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ಅನಾರೋಗ್ಯದಿಂದ ಬರಲು ಆಗುತ್ತಿಲ್ಲ. ಭರವಸೆ ಈಡೇರಿಸಲು ಕ್ರಮ ವಹಿಸುವುದಾಗಿ ಸಚಿವರು ದೂರವಾಣಿ ಮೂಲಕ ತಿಳಿಸಿದರು. ನಂತರ ಪ್ರತಿಭಟನೆ ಕೈ ಬಿಡಲಾಯಿತು.</p>.<p>ಒಕ್ಕೂಟದ ಅಧ್ಯಕ್ಷ ಜಿ.ಎನ್.ನಾಗರಾಜ್, ಪ್ರಧಾನ ಕಾರ್ಯದರ್ಶಿ ರಂಗಪ್ಪ ದಾಸರ್, ಕಾರ್ಯದರ್ಶಿ ಯಶಸ್ವಿ, ವೆಂಕಟೇಶ್, ಅರ್ಪುದ ರಾಜನ್ ಹಾಜರಿದ್ದರು.</p>.<p>Quote - ಒಕ್ಕೂಟದ ಪ್ರತಿನಿಧಿಗಳನ್ನು ಕರೆಯಿಸಿ ಮಾತುಕತೆ ನಡೆಸುವುದಾಗಿ ಸಚಿವರು ತಿಳಿಸಿದ್ದಾರೆ. ಆನಂತರವೂ ಕ್ರಮ ಆಗದೇ ಇದ್ದರೆ ಡಿಸೆಂಬರ್ 3ರ ವಿಶ್ವ ಅಂಗವಿಕಲರ ದಿನವನ್ನು ಬಹಿಷ್ಕರಿಸಿ ಕಪ್ಪು ಪಟ್ಟಿ ಹೋರಾಟ ಮಾಡುತ್ತೇವೆ ಜಿ.ಎನ್.ನಾಗರಾಜ್ ಒಕ್ಕೂಟದ ಅಧ್ಯಕ್ಷ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಅಂಗವಿಕಲರಿಗೆ ಕೆಲಸ ಇಲ್ಲವೇ ಜೀವನಾವಶ್ಯಕ ಭತ್ಯೆ ಕೊಡಬೇಕು’ ಎನ್ನುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಅಂಗವಿಕಲರು ಪ್ರತಿಭಟನೆ ನಡೆಸಿದರು.</p>.<p>‘ಏಳು ರೀತಿಯ ಅಂಗವೈಕಲ್ಯ ಇರುವ ಆರೈಕೆದಾರರಿಗೆ ರಾಜ್ಯ ಸರ್ಕಾರವು ಮಾಸಿಕ ₹ 1000 ಪ್ರೋತ್ಸಾಹಧನ ನೀಡಿರುವುದು ಸ್ವಾಗತಾರ್ಹ. ಇದನ್ನು ₹3000ಕ್ಕೆ ಏರಿಸಬೇಕು. ಮಾಸಿಕ ಪಿಂಚಣಿ ಈಗಲೂ ₹1400 ಇದೆ. ಇದರಲ್ಲಿ ಕೇಂದ್ರದ ಪಾಲು ಬರೀ ₹300 ಮಾತ್ರ. 15 ವರ್ಷದಿಂದ ಪಿಂಚಣಿ ಏರಿಕೆಯಾಗದೇ ಅಂಗವಿಕಲರಿಗೆ ತೊಂದರೆಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ಆಂಧ್ರದಲ್ಲಿ ಮಾಸಿಕ ₹ 6000, ತೆಲಂಗಾಣದಲ್ಲಿ ₹4000, ದೆಹಲಿ, ಹರಿಯಾಣದಲ್ಲಿ ₹3000 ಪಿಂಚಣಿ ದೊರೆಯುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ತಲಾ ₹5000 ನೀಡಿ ಮಾಸಿಕ ಪಿಂಚಣಿಯನ್ನು ₹10 ಸಾವಿರ ಏರಿಕೆ ಮಾಡಬೇಕು. ರಾಜಸ್ಥಾನದ ಮಾದರಿಯಲ್ಲಿ ವಾರ್ಷಿಕ ಶೇ 15ರಷ್ಟು ಹೆಚ್ಚಳದ ಪಿಂಚಣಿ ಹಕ್ಕು ಕಾಯಿದೆ ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.</p>.<p>ಪಂಚಾಯಿತಿಗಳಲ್ಲಿ ಮೀಸಲಿಟ್ಟಿರುವ ಅಂಗವಿಕಲರ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಬೇಕು. ಬಸ್ ಪಾಸ್ ರಾಜ್ಯದಾದ್ಯಂತ ವಿಸ್ತರಿಸಬೇಕು. ಅಂಗವಿಕಲರನ್ನು ಮದುವೆಯಾದರೆ ನೀಡುವ ಪ್ರೋತ್ಸಾಹಧನ ಹೆಚ್ಚಿಸಬೇಕು. ಉಚಿತ ಆರೋಗ್ಯ ಸೇವೆ ನೀಡಬೇಕು ಎಂದು ಒತ್ತಾಯಿಸಿದರು.</p>.<p>ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನಿರ್ದೇಶಕ ಟಿ.ರಾಘವೇಂದ್ರ ಹಾಗೂ ರಾಜ್ಯ ಅಂಗವಿಕಲರ ಹಕ್ಕುಗಳ ಸಮಿತಿಯ ಆಯುಕ್ತ ದಾಸ್ ಸೂರ್ಯವಂಶಿ ಅವರು ಪ್ರತಿಭಟನಕಾರರ ಮನವಿ ಸ್ವೀಕರಿಸಿ ಸರ್ಕಾರದ ಗಮನಕ್ಕೆ ತರುವ ಭರವಸೆ ನೀಡಿದರು. </p>.<p>ಇದಕ್ಕೆ ಒಪ್ಪದ ಒಕ್ಕೂಟದ ಪ್ರತಿನಿಧಿಗಳು, ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಆಗಮಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ಅನಾರೋಗ್ಯದಿಂದ ಬರಲು ಆಗುತ್ತಿಲ್ಲ. ಭರವಸೆ ಈಡೇರಿಸಲು ಕ್ರಮ ವಹಿಸುವುದಾಗಿ ಸಚಿವರು ದೂರವಾಣಿ ಮೂಲಕ ತಿಳಿಸಿದರು. ನಂತರ ಪ್ರತಿಭಟನೆ ಕೈ ಬಿಡಲಾಯಿತು.</p>.<p>ಒಕ್ಕೂಟದ ಅಧ್ಯಕ್ಷ ಜಿ.ಎನ್.ನಾಗರಾಜ್, ಪ್ರಧಾನ ಕಾರ್ಯದರ್ಶಿ ರಂಗಪ್ಪ ದಾಸರ್, ಕಾರ್ಯದರ್ಶಿ ಯಶಸ್ವಿ, ವೆಂಕಟೇಶ್, ಅರ್ಪುದ ರಾಜನ್ ಹಾಜರಿದ್ದರು.</p>.<p>Quote - ಒಕ್ಕೂಟದ ಪ್ರತಿನಿಧಿಗಳನ್ನು ಕರೆಯಿಸಿ ಮಾತುಕತೆ ನಡೆಸುವುದಾಗಿ ಸಚಿವರು ತಿಳಿಸಿದ್ದಾರೆ. ಆನಂತರವೂ ಕ್ರಮ ಆಗದೇ ಇದ್ದರೆ ಡಿಸೆಂಬರ್ 3ರ ವಿಶ್ವ ಅಂಗವಿಕಲರ ದಿನವನ್ನು ಬಹಿಷ್ಕರಿಸಿ ಕಪ್ಪು ಪಟ್ಟಿ ಹೋರಾಟ ಮಾಡುತ್ತೇವೆ ಜಿ.ಎನ್.ನಾಗರಾಜ್ ಒಕ್ಕೂಟದ ಅಧ್ಯಕ್ಷ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>