<p><strong>ಬೆಂಗಳೂರು</strong>: ಇಂದಿರಾನಗರದ ಕದಿರಯ್ಯನ ಪಾಳ್ಯದಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ರಿಶಾನ್ ಎಂಬ ನಾಲ್ಕು ವರ್ಷದ ಮಗುವಿನ ಮೇಲೆ ನಾಯಿ ದಾಳಿ ನಡೆಸಿ, ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ.</p>.<p>ಮಗುವಿನ ರಕ್ಷಣೆಗೆ ಧಾವಿಸಿದ ತಂದೆಗೂ ಕಚ್ಚಿದೆ. ಗಾಯಗೊಂಡಿರುವ ಇಬ್ಬರಿಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.</p>.<p>ಜನವರಿ 5ರಂದು ಘಟನೆ ನಡೆದಿದ್ದು, ನಾಯಿ ಸಾಕಿಕೊಂಡಿದ್ದ ಮಂಗೇಶ್ವರಿ ಹಾಗೂ ಅವರ ಪುತ್ರ ಸಂಜಯ್ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಕದಿರಯ್ಯನ ಪಾಳ್ಯದಲ್ಲಿ ಕೇರಳದ ರಿಶಾದ್ ದಂಪತಿ, ಪುತ್ರ ರಿಶಾನ್ ವಾಸವಿದ್ದಾರೆ. ಅದೇ ಕಟ್ಟಡದಲ್ಲಿ ವಾಸವಿದ್ದ ಮಂಗೇಶ್ವರಿ ಹಾಗೂ ಅವರ ಪುತ್ರ ಸಂಜಯ್ ನಾಯಿ ಸಾಕಿದ್ದರು. ಜನವರಿ 5ರಂದು ಮನೆ ಬಳಿ ಆಟವಾಡುತ್ತಿದ್ದ ರಿಶಾನ್ನನ್ನು ಮೆಟ್ಟಿಲು ಮೇಲೆ ಎಳೆದೊಯ್ದ ನಾಯಿ, ಕಚ್ಚಲಾರಂಭಿಸಿದೆ.</p>.<p>ಮಗನ ಚೀರಾಟ ಕೇಳಿದ ತಂದೆ ರಿಶಾದ್ ಓಡಿ ಹೋಗಿ ನಾಯಿಯ ಬಾಯಿಯಿಂದ ಮಗುವನ್ನು ರಕ್ಷಿಸಿದ್ದಾರೆ. ಈ ವೇಳೆ ರಿಶಾದ್ ಅವರಿಗೂ ಸಹ ಕಚ್ಚಿ ಗಾಯಗೊಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಇಂದಿರಾನಗರದ ಕದಿರಯ್ಯನ ಪಾಳ್ಯದಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ರಿಶಾನ್ ಎಂಬ ನಾಲ್ಕು ವರ್ಷದ ಮಗುವಿನ ಮೇಲೆ ನಾಯಿ ದಾಳಿ ನಡೆಸಿ, ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ.</p>.<p>ಮಗುವಿನ ರಕ್ಷಣೆಗೆ ಧಾವಿಸಿದ ತಂದೆಗೂ ಕಚ್ಚಿದೆ. ಗಾಯಗೊಂಡಿರುವ ಇಬ್ಬರಿಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.</p>.<p>ಜನವರಿ 5ರಂದು ಘಟನೆ ನಡೆದಿದ್ದು, ನಾಯಿ ಸಾಕಿಕೊಂಡಿದ್ದ ಮಂಗೇಶ್ವರಿ ಹಾಗೂ ಅವರ ಪುತ್ರ ಸಂಜಯ್ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಕದಿರಯ್ಯನ ಪಾಳ್ಯದಲ್ಲಿ ಕೇರಳದ ರಿಶಾದ್ ದಂಪತಿ, ಪುತ್ರ ರಿಶಾನ್ ವಾಸವಿದ್ದಾರೆ. ಅದೇ ಕಟ್ಟಡದಲ್ಲಿ ವಾಸವಿದ್ದ ಮಂಗೇಶ್ವರಿ ಹಾಗೂ ಅವರ ಪುತ್ರ ಸಂಜಯ್ ನಾಯಿ ಸಾಕಿದ್ದರು. ಜನವರಿ 5ರಂದು ಮನೆ ಬಳಿ ಆಟವಾಡುತ್ತಿದ್ದ ರಿಶಾನ್ನನ್ನು ಮೆಟ್ಟಿಲು ಮೇಲೆ ಎಳೆದೊಯ್ದ ನಾಯಿ, ಕಚ್ಚಲಾರಂಭಿಸಿದೆ.</p>.<p>ಮಗನ ಚೀರಾಟ ಕೇಳಿದ ತಂದೆ ರಿಶಾದ್ ಓಡಿ ಹೋಗಿ ನಾಯಿಯ ಬಾಯಿಯಿಂದ ಮಗುವನ್ನು ರಕ್ಷಿಸಿದ್ದಾರೆ. ಈ ವೇಳೆ ರಿಶಾದ್ ಅವರಿಗೂ ಸಹ ಕಚ್ಚಿ ಗಾಯಗೊಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>