ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ರೈತರು, ರ್ಯಾಲಿಗೆ ಚಾಲನೆ ನೀಡಿದರು. ರಾಮಗೊಂಡನಹಳ್ಳಿಯಿಂದ ಆರಂಭವಾದ ಬೈಕ್ ರ್ಯಾಲಿ ಆವಲಹಳ್ಳಿ, ನಾಗೇನಹಳ್ಳಿ, ಕೆಂಪನಹಳ್ಳಿ, ವೀರಸಾಗರ, ಬೆಟ್ಟಹಳ್ಳಿ, ಶಾಮರಾಜಪುರ, ಬ್ಯಾಲಕೆರೆ, ಮುದ್ದಿನಪಾಳ್ಯ, ಕಾಳತಮ್ಮನ ಹಳ್ಳಿ, ಕೆಂಪಾಪುರ, ಗಾಣಿಗರಹಳ್ಳಿ, ಸೋಮಶೆಟ್ಟಿಹಳ್ಳಿ, ಗುಣಿ ಅಗ್ರಹಾರ, ಮೇಟಿ ಅಗ್ರಹಾರ ಲಕ್ಷ್ಮೀಪುರ ಗ್ರಾಮಗಳಲ್ಲಿ ಸಂಚರಿಸಿ, ವಡೇರಹಳ್ಳಿಯಲ್ಲಿ ಸಂಜೆ 4 ಗಂಟೆಗೆ ಕೊನೆಗೊಂಡಿತು.