‘ಜಂಟಿ ಆಯುಕ್ತ ನಾಗರಾಜ್ ಬಳಕೆಗೆ ನೀಡಿದ್ದ ಕಾರನ್ನು ಶಿವಶಂಕರ್ ಚಲಾಯಿಸುತ್ತಿದ್ದರು. ರಾಜರಾಜೇಶ್ವರಿ ನಗರದ ಪ್ರವೇಶ ದ್ವಾರದ ಬಳಿ ಸೋಮವಾರ ತಡರಾತ್ರಿ ಅಪಘಾತ ಮಾಡಿದ್ದ ಶಿವಶಂಕರ್ ಅವರನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಮದ್ಯದ ಅಂಶ ಕಂಡುಬಂದಿದ್ದರಿಂದ ಕಾರು ಜಪ್ತಿ ಮಾಡಿ, ನ್ಯಾಯಾಲಯದಲ್ಲಿ ದಂಡ ಪಾವತಿಸುವಂತೆ ನೋಟಿಸ್ ನೀಡಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.