<p><strong>ಕೆ.ಆರ್.ಪುರ:</strong> ‘ಪರಿಸರ ಸಂರಕ್ಷಣೆ ಜೊತೆಗೆ ಪರಿಸರ ಸಾಹಿತ್ಯ ಕ್ಷೇತ್ರವೂ ವಿಸ್ತರಿಸಲಿ’ ಎಂದು ಶಾಸಕ ಬೈರತಿ ಬಸವರಾಜ ಆಶಿಸಿದರು.</p>.<p>ಕೆ.ಆರ್.ಪುರ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಮಿಡಿತ ಫೌಂಡೇಶನ್ ಸಹಯೋಗದಲ್ಲಿ ಏರ್ಪಡಿಸಿದ್ದ ಲೇಖಕ ಪರಿಸರ ಮಂಜು ಅವರ ಮೂರನೇ ಕೃತಿ ‘ಮಿಡಿದ ಮರಗಳು’ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು.</p>.<p>‘ಬೆಂಗಳೂರಿನಲ್ಲಿ ಪರಿಸರ ಸಂರಕ್ಷಣೆ ಬಹಳ ಮುಖ್ಯ. ಅಭಿವೃದ್ಧಿಗಾಗಿ ಮರ ಕಡಿಯುವುದು ಅನಿವಾರ್ಯ. ಮರ ಕಡಿದರೆ ಪ್ರತಿಯಾಗಿ ಹನ್ನೊಂದು ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.</p>.<p>ಸಾಹಿತಿ ಪರಿಸರ ಮಂಜು ಅವರು, ಅನಧಿಕೃತವಾಗಿ ಮರಗಳನ್ನು ಕಡಿದವರಿಗೆ ತಕ್ಕ ಶಿಕ್ಷೆಯಾಗಬೇಕು. ಮರ ಸಂರಕ್ಷಣೆ ಕಾಯ್ದೆ ಬಲಿಷ್ಠವಾಗಬೇಕು’ ಎಂದು ಅಭಿಪ್ರಾಯಪಟ್ಟರು. 501 ಔಷಧೀಯ ಗಿಡ ವಿತರಿಸಲಾಯಿತು.</p>.<p>ಮಾಜಿ ಪಾಲಿಕೆ ಸದಸ್ಯ ಪಿ.ಜೆ.ಅಂತೋಣಿಸ್ವಾಮಿ, ಮುಖಂಡರಾದ ಶಿವಪ್ಪ, ಭಾಗ್ಯಮ್ಮ, ಎಂ.ಆರ್.ವೆಂಕಟೇಶ್, ವಿಕ್ರಮ್, ಪಟಾಕಿ ರವಿ, ಗಂಧರ್ವ ರಮೇಶ್, ಉಪೇಂದ್ರಕುಮಾರ್, ಮಿಡಿತ ಫೌಂಡೇಶನ್ ಸದಸ್ಯರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆ.ಆರ್.ಪುರ:</strong> ‘ಪರಿಸರ ಸಂರಕ್ಷಣೆ ಜೊತೆಗೆ ಪರಿಸರ ಸಾಹಿತ್ಯ ಕ್ಷೇತ್ರವೂ ವಿಸ್ತರಿಸಲಿ’ ಎಂದು ಶಾಸಕ ಬೈರತಿ ಬಸವರಾಜ ಆಶಿಸಿದರು.</p>.<p>ಕೆ.ಆರ್.ಪುರ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಮಿಡಿತ ಫೌಂಡೇಶನ್ ಸಹಯೋಗದಲ್ಲಿ ಏರ್ಪಡಿಸಿದ್ದ ಲೇಖಕ ಪರಿಸರ ಮಂಜು ಅವರ ಮೂರನೇ ಕೃತಿ ‘ಮಿಡಿದ ಮರಗಳು’ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು.</p>.<p>‘ಬೆಂಗಳೂರಿನಲ್ಲಿ ಪರಿಸರ ಸಂರಕ್ಷಣೆ ಬಹಳ ಮುಖ್ಯ. ಅಭಿವೃದ್ಧಿಗಾಗಿ ಮರ ಕಡಿಯುವುದು ಅನಿವಾರ್ಯ. ಮರ ಕಡಿದರೆ ಪ್ರತಿಯಾಗಿ ಹನ್ನೊಂದು ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.</p>.<p>ಸಾಹಿತಿ ಪರಿಸರ ಮಂಜು ಅವರು, ಅನಧಿಕೃತವಾಗಿ ಮರಗಳನ್ನು ಕಡಿದವರಿಗೆ ತಕ್ಕ ಶಿಕ್ಷೆಯಾಗಬೇಕು. ಮರ ಸಂರಕ್ಷಣೆ ಕಾಯ್ದೆ ಬಲಿಷ್ಠವಾಗಬೇಕು’ ಎಂದು ಅಭಿಪ್ರಾಯಪಟ್ಟರು. 501 ಔಷಧೀಯ ಗಿಡ ವಿತರಿಸಲಾಯಿತು.</p>.<p>ಮಾಜಿ ಪಾಲಿಕೆ ಸದಸ್ಯ ಪಿ.ಜೆ.ಅಂತೋಣಿಸ್ವಾಮಿ, ಮುಖಂಡರಾದ ಶಿವಪ್ಪ, ಭಾಗ್ಯಮ್ಮ, ಎಂ.ಆರ್.ವೆಂಕಟೇಶ್, ವಿಕ್ರಮ್, ಪಟಾಕಿ ರವಿ, ಗಂಧರ್ವ ರಮೇಶ್, ಉಪೇಂದ್ರಕುಮಾರ್, ಮಿಡಿತ ಫೌಂಡೇಶನ್ ಸದಸ್ಯರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>