<p><strong>ಬೆಂಗಳೂರು: </strong>ಪಂಚೆ ಕಟ್ಟಿ ಕುಸ್ತಿಯ ಅಖಾಡಕ್ಕಿಳಿದ ಯುವತಿಯರು ಕಸರತ್ತು ಪ್ರದರ್ಶಿಸಿದರು. ಪುರುಷರಿಗಿಂತ ತಾವೇನು ಕಡಿಮೆ ಇಲ್ಲ ಎಂಬುದನ್ನು ಸಾಬೀತುಪಡಿಸಿ, ಗ್ರಾಮ ದೇವತೆಯ ತೇರನ್ನು ಎಳೆದರು. ಜಾನಪದ ಗೀತೆಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.</p>.<p>ಬಸವನಗುಡಿಯ ಬಿಎಂಎಸ್ ಮಹಿಳಾ ಕಾಲೇಜು ಆಯೋಜಿಸಿದ್ದ ‘ಜಾನಪದ ಜಾತ್ರೆ’ಯಲ್ಲಿ ವಿದ್ಯಾರ್ಥಿನಿಯರು ಗ್ರಾಮೀಣ ಪ್ರಪಂಚ ಅನಾವರಣ ಮಾಡಿದರು. ಜಾನಪದ ನೃತ್ಯ ವೈಭವಕ್ಕೆ ಮನಸೋತ ವಿದ್ಯಾರ್ಥಿನಿಯರು ಗೋ ಶಾಲೆ, ಸಂತೆ, ಪಂಚಾಯಿತಿ ಕಟ್ಟೆ, ಅರವಟ್ಟಿಕೆ, ಒಟ್ಟು ಕುಟುಂಬದ ಮನೆಯನ್ನು ಬೆರಗು ಕಣ್ಣಿನಿಂದ ವೀಕ್ಷಿಸಿದರು.</p>.<p>ದೇಸಿ ಆಹಾರ ಮಳಿಗೆಗಳಲ್ಲಿನ ಬಗೆ ಬಗೆಯ ಖಾದ್ಯಗಳು ಬಾಯಲ್ಲಿ ನೀರೂರಿಸುತ್ತಿದ್ದವು. ಸೋಲಿಗರ ಕುಣಿತ, ಸುಗ್ಗಿ ಕುಣಿತ, ಜೋಗತಿ ಕುಣಿತ, ಲಂಬಾಣಿ ನೃತ್ಯ, ಕರಗ, ಪೂಜಾ ಕುಣಿತ, ಯಕ್ಷಗಾನ ಸೇರಿದಂತೆ ವಿವಿಧ ಜಾನಪದ ಕಲಾ ಪ್ರಕಾರಗಳು ಮನಸೂರೆಗೊಂಡವು.</p>.<p class="Subhead">ಜನರನ್ನು ಒಗ್ಗೂಡಿಸುವ ಕಲೆ: ‘ರಾಜಕಾರಣ ಜನರನ್ನು ಒಡೆದರೆ, ಜಾನಪದ ಕಲೆ ಜನರನ್ನು ಒಗ್ಗೂಡಿಸುತ್ತದೆ. ಬಹುತ್ವದ ಪ್ರಜ್ಞೆಯನ್ನು ಬೆಳೆಸುವ ಜಾನಪದ ಸಂಸ್ಕೃತಿಯನ್ನು ಉಳಿಸಬೇಕು. ಬರಹರಹಿತ ಸಂಸ್ಕೃತಿಯಾಗಿರುವಜಾನಪದದಂತಹ ಅಪೂರ್ವ ಶಕ್ತಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು’ ಎಂದುಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದರು.</p>.<p>ಗಾಯಕರಾದ ಗುರುರಾಜ ಹೊಸಕೋಟೆ, ಸವಿತಾ ಗಣೇಶ್, ಪಿಚ್ಚಳ್ಳಿ ಶ್ರೀನಿವಾಸ್ ಜಾನಪದ ಗೀತೆಗಳನ್ನು ಪ್ರಸ್ತುತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಪಂಚೆ ಕಟ್ಟಿ ಕುಸ್ತಿಯ ಅಖಾಡಕ್ಕಿಳಿದ ಯುವತಿಯರು ಕಸರತ್ತು ಪ್ರದರ್ಶಿಸಿದರು. ಪುರುಷರಿಗಿಂತ ತಾವೇನು ಕಡಿಮೆ ಇಲ್ಲ ಎಂಬುದನ್ನು ಸಾಬೀತುಪಡಿಸಿ, ಗ್ರಾಮ ದೇವತೆಯ ತೇರನ್ನು ಎಳೆದರು. ಜಾನಪದ ಗೀತೆಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.</p>.<p>ಬಸವನಗುಡಿಯ ಬಿಎಂಎಸ್ ಮಹಿಳಾ ಕಾಲೇಜು ಆಯೋಜಿಸಿದ್ದ ‘ಜಾನಪದ ಜಾತ್ರೆ’ಯಲ್ಲಿ ವಿದ್ಯಾರ್ಥಿನಿಯರು ಗ್ರಾಮೀಣ ಪ್ರಪಂಚ ಅನಾವರಣ ಮಾಡಿದರು. ಜಾನಪದ ನೃತ್ಯ ವೈಭವಕ್ಕೆ ಮನಸೋತ ವಿದ್ಯಾರ್ಥಿನಿಯರು ಗೋ ಶಾಲೆ, ಸಂತೆ, ಪಂಚಾಯಿತಿ ಕಟ್ಟೆ, ಅರವಟ್ಟಿಕೆ, ಒಟ್ಟು ಕುಟುಂಬದ ಮನೆಯನ್ನು ಬೆರಗು ಕಣ್ಣಿನಿಂದ ವೀಕ್ಷಿಸಿದರು.</p>.<p>ದೇಸಿ ಆಹಾರ ಮಳಿಗೆಗಳಲ್ಲಿನ ಬಗೆ ಬಗೆಯ ಖಾದ್ಯಗಳು ಬಾಯಲ್ಲಿ ನೀರೂರಿಸುತ್ತಿದ್ದವು. ಸೋಲಿಗರ ಕುಣಿತ, ಸುಗ್ಗಿ ಕುಣಿತ, ಜೋಗತಿ ಕುಣಿತ, ಲಂಬಾಣಿ ನೃತ್ಯ, ಕರಗ, ಪೂಜಾ ಕುಣಿತ, ಯಕ್ಷಗಾನ ಸೇರಿದಂತೆ ವಿವಿಧ ಜಾನಪದ ಕಲಾ ಪ್ರಕಾರಗಳು ಮನಸೂರೆಗೊಂಡವು.</p>.<p class="Subhead">ಜನರನ್ನು ಒಗ್ಗೂಡಿಸುವ ಕಲೆ: ‘ರಾಜಕಾರಣ ಜನರನ್ನು ಒಡೆದರೆ, ಜಾನಪದ ಕಲೆ ಜನರನ್ನು ಒಗ್ಗೂಡಿಸುತ್ತದೆ. ಬಹುತ್ವದ ಪ್ರಜ್ಞೆಯನ್ನು ಬೆಳೆಸುವ ಜಾನಪದ ಸಂಸ್ಕೃತಿಯನ್ನು ಉಳಿಸಬೇಕು. ಬರಹರಹಿತ ಸಂಸ್ಕೃತಿಯಾಗಿರುವಜಾನಪದದಂತಹ ಅಪೂರ್ವ ಶಕ್ತಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು’ ಎಂದುಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದರು.</p>.<p>ಗಾಯಕರಾದ ಗುರುರಾಜ ಹೊಸಕೋಟೆ, ಸವಿತಾ ಗಣೇಶ್, ಪಿಚ್ಚಳ್ಳಿ ಶ್ರೀನಿವಾಸ್ ಜಾನಪದ ಗೀತೆಗಳನ್ನು ಪ್ರಸ್ತುತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>