‘ಕಳೆದ ವರ್ಷ ಗಣೇಶ ಚತುರ್ಥಿಗೆ ಕೋವಿಡ್ ಅಡ್ಡಿಪಡಿಸಿತು. ಸಿದ್ಧಪಡಿಸಿದ್ದ ಗಣೇಶ ಮೂರ್ತಿಗಳು ಖರೀದಿಯಾಗದೆ, ನಷ್ಟ ಅನುಭವಿಸಿದೆವು. ಈ ವರ್ಷದ ಹಬ್ಬಕ್ಕೂ ಮೂರನೇ ಅಲೆಯ ಕರಿನೆರಳು ಬಿದ್ದಿದೆ. ಈಗಾಗಲೇ ತಯಾರಿಸಿರುವ ದೊಡ್ಡ ಮೂರ್ತಿಗಳನ್ನು ಏನು ಮಾಡುವುದು‘ ಎನ್ನುತ್ತಾರೆ ಜಕ್ಕೂರಿನ ಗಣೇಶ ಮೂರ್ತಿ ತಯಾರಕ ಮಹೇಶ್ ಕುಮಾರ್.