<p>ಬೆಂಗಳೂರು: ‘ದೇಹ ಹಾಗೂ ಚರ್ಮಕ್ಕೆ ಬರಬಹುದಾದ ರೋಗಗಳನ್ನು ತಡೆಯಲು ಸಹಾಯಕವಾಗಿರುವ ಗಾಯತ್ರಿ ಮಂತ್ರವು ನಮ್ಮಲ್ಲಿನರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ’ ಎಂದು ವಿದ್ವಾಂಸ ಅರಳು ಮಲ್ಲಿಗೆಪಾರ್ಥಸಾರಥಿ ತಿಳಿಸಿದರು.</p>.<p>ಅಖಿಲ ಹವ್ಯಕ ಮಹಾಸಭಾ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಗಾಯತ್ರಿ ಮಹೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಗಾಯತ್ರಿ ಮಂತ್ರವು ಮನುಷ್ಯನ ದೇಹದ ಮೇಲೆ ಬೀರುವ ಪರಿಣಾಮದ ಬಗ್ಗೆ ವೈಜ್ಞಾನಿಕ ಅಧ್ಯಯನಗಳು ನಡೆದಿವೆ. ಆಲ್ ಇಂಡಿಯಾ<br />ಮೆಡಿಕಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸಸ್ ನಡೆಸಿದ ವರದಿಯೇ ಇದಕ್ಕೆ ಉದಾಹರಣೆ. ಈ ಮಂತ್ರವನ್ನುನಿರಂತರವಾಗಿ ಪಠಣೆ ಮಾಡುವುದರಿಂದ ಬುದ್ಧಿಶಕ್ತಿಯೂ ಚುರುಕಾಗುತ್ತದೆ. ಮಕ್ಕಳು ನಿತ್ಯಕನಿಷ್ಠ 10 ನಿಮಿಷ ಮಂತ್ರ ಪಠಿಸಬೇಕು’ ಎಂದು ಕಿವಿಮಾತು ಹೇಳಿದರು.</p>.<p class="Subhead"><strong>ಮೆರವಣಿಗೆ</strong>:ಗಾಯತ್ರಿ ಮಹೋತ್ಸವದ ಅಂಗವಾಗಿ ಬೆಳಿಗ್ಗೆ 7.30ಕ್ಕೆ ಗಾಯತ್ರಿ ಹವನ ಹಾಗೂ ಗಾಯತ್ರಿ ದೇವಿಯ ಮೆರವಣಿಗೆ ನಡೆಯಿತು.</p>.<p class="Subhead">ಈ ವೇಳೆ ಶಶಿಧರ ಕೋಟೆ ಅವರು ಗಾಯತ್ರಿ ನಮನ ಸಲ್ಲಿಸಿದರು. ಬಳಿಕ ಶತಾವಧಾನಿ ಆರ್.ಗಣೇಶ್ ಗಾಯತ್ರಿ ತತ್ವಗಳ ಬಗ್ಗೆ ತಿಳಿಸಿಕೊಟ್ಟರು.</p>.<p class="Subhead">ಕಾರ್ಯಕ್ರಮದಲ್ಲಿ ಮಹಾಸಭೆ ಅಧ್ಯಕ್ಷ ಗಿರಿಧರ ಕಜೆ, ಪ್ರಧಾನ ಕಾರ್ಯದರ್ಶಿ ಸಿ.ಎ. ವೇಣುವಿಘ್ನೇಶ ಸಂಪ, ಸಂಚಾಲಕ ಕೃಷ್ಣಮೂರ್ತಿ ಹೆಗಡೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ‘ದೇಹ ಹಾಗೂ ಚರ್ಮಕ್ಕೆ ಬರಬಹುದಾದ ರೋಗಗಳನ್ನು ತಡೆಯಲು ಸಹಾಯಕವಾಗಿರುವ ಗಾಯತ್ರಿ ಮಂತ್ರವು ನಮ್ಮಲ್ಲಿನರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ’ ಎಂದು ವಿದ್ವಾಂಸ ಅರಳು ಮಲ್ಲಿಗೆಪಾರ್ಥಸಾರಥಿ ತಿಳಿಸಿದರು.</p>.<p>ಅಖಿಲ ಹವ್ಯಕ ಮಹಾಸಭಾ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಗಾಯತ್ರಿ ಮಹೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಗಾಯತ್ರಿ ಮಂತ್ರವು ಮನುಷ್ಯನ ದೇಹದ ಮೇಲೆ ಬೀರುವ ಪರಿಣಾಮದ ಬಗ್ಗೆ ವೈಜ್ಞಾನಿಕ ಅಧ್ಯಯನಗಳು ನಡೆದಿವೆ. ಆಲ್ ಇಂಡಿಯಾ<br />ಮೆಡಿಕಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸಸ್ ನಡೆಸಿದ ವರದಿಯೇ ಇದಕ್ಕೆ ಉದಾಹರಣೆ. ಈ ಮಂತ್ರವನ್ನುನಿರಂತರವಾಗಿ ಪಠಣೆ ಮಾಡುವುದರಿಂದ ಬುದ್ಧಿಶಕ್ತಿಯೂ ಚುರುಕಾಗುತ್ತದೆ. ಮಕ್ಕಳು ನಿತ್ಯಕನಿಷ್ಠ 10 ನಿಮಿಷ ಮಂತ್ರ ಪಠಿಸಬೇಕು’ ಎಂದು ಕಿವಿಮಾತು ಹೇಳಿದರು.</p>.<p class="Subhead"><strong>ಮೆರವಣಿಗೆ</strong>:ಗಾಯತ್ರಿ ಮಹೋತ್ಸವದ ಅಂಗವಾಗಿ ಬೆಳಿಗ್ಗೆ 7.30ಕ್ಕೆ ಗಾಯತ್ರಿ ಹವನ ಹಾಗೂ ಗಾಯತ್ರಿ ದೇವಿಯ ಮೆರವಣಿಗೆ ನಡೆಯಿತು.</p>.<p class="Subhead">ಈ ವೇಳೆ ಶಶಿಧರ ಕೋಟೆ ಅವರು ಗಾಯತ್ರಿ ನಮನ ಸಲ್ಲಿಸಿದರು. ಬಳಿಕ ಶತಾವಧಾನಿ ಆರ್.ಗಣೇಶ್ ಗಾಯತ್ರಿ ತತ್ವಗಳ ಬಗ್ಗೆ ತಿಳಿಸಿಕೊಟ್ಟರು.</p>.<p class="Subhead">ಕಾರ್ಯಕ್ರಮದಲ್ಲಿ ಮಹಾಸಭೆ ಅಧ್ಯಕ್ಷ ಗಿರಿಧರ ಕಜೆ, ಪ್ರಧಾನ ಕಾರ್ಯದರ್ಶಿ ಸಿ.ಎ. ವೇಣುವಿಘ್ನೇಶ ಸಂಪ, ಸಂಚಾಲಕ ಕೃಷ್ಣಮೂರ್ತಿ ಹೆಗಡೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>