<p><strong>ಬೆಂಗಳೂರು</strong>: ಮಾರತ್ತಹಳ್ಳಿ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಚಿನ್ನಾಭರಣ ಹಾಗೂ ನಗದು ಕದ್ದು ಪರಾರಿಯಾಗಿದ್ದ ಆರೋಪದಡಿ ಮಹಿಳೆ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.</p>.<p>‘ಛತ್ತೀಸ್ಗಢದ ಸುನೈನಾ (25), ಅಸ್ಸಾಂನ ಮೀನ್ಹಾಜುದ್ದೀನ್ ಬಾರ್ಬುಯ್ಯ (27) ಹಾಗೂ ಬಿಹಾರದ ಚಂದನ್ ಕುಮಾರ್ ಮೊಹತೋ ಅಲಿಯಾಸ್ ಚಂದನ್ (19) ಬಂಧಿತರು. ಅವರಿಂದ 1 ಕೆ.ಜಿ 5 ಗ್ರಾಂ ತೂಕದ ಚಿನ್ನಾಭರಣ, 21 ಬೆಳ್ಳಿ ನಾಣ್ಯಗಳು, ₹ 55,000 ನಗದು, ಕಾರು, ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಇವುಗಳ ಒಟ್ಟು ಮೌಲ್ಯ ₹ 50 ಲಕ್ಷ’ ಎಂದು ವೈಟ್ಫೀಲ್ಡ್ ವಿಭಾಗದ ಡಿಸಿಪಿ ದೇವರಾಜ್ ಹೇಳಿದರು.</p>.<p class="Subhead"><strong>ಮನೆ ಕೆಲಸಕ್ಕೆ ಸೇರಿ ಕೃತ್ಯ:</strong> ‘ಆರೋಪಿಗಳಾದ ಸುನೈನಾ ಹಾಗೂ ಚಂದನ್, ಮಾರತ್ತಹಳ್ಳಿ ಠಾಣೆ ವ್ಯಾಪ್ತಿಯ ನಿವಾಸಿ ನಿತಿನ್ ಅಗರವಾಲ್ ಎಂಬುವರ ಮನೆಯಲ್ಲಿ ಕೆಲಸಕ್ಕೆ ಇದ್ದರು. ಅದೇ ಸಮಯದಲ್ಲಿ ಚಿನ್ನಾಭರಣ ಹಾಗೂ ನಗದು ಇದ್ದ ಲಾಕರ್ ನೋಡಿದ್ದರು’ ಎಂದು ದೇವರಾಜ್ ತಿಳಿಸಿದರು.</p>.<p>‘ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಲಾಕರ್ ಕದ್ದು ಆರೋಪಿಗಳು ಪರಾರಿಯಾಗಿದ್ದರು. ಈ ಬಗ್ಗೆ ಮನೆ ಮಾಲೀಕ ದೂರು ನೀಡಿದ್ದರು. ಅಷ್ಟರಲ್ಲೇ ಆರೋಪಿಗಳು ಬೆಂಗಳೂರು ತೊರೆದಿದ್ದರು. ಲಾಕರ್ನಲ್ಲಿದ್ದ ಚಿನ್ನಾಭರಣವನ್ನು ಆರೋಪಿ ಮೀನ್ಹಾಜುದ್ದೀನ್ಗೆ ನೀಡಿ ಮಾರಾಟ ಮಾಡಲು ತಿಳಿಸಿದ್ದರು.’</p>.<p>‘ಬೆಂಗಳೂರು ಹಾಗೂ ಅಸ್ಸಾಂನಲ್ಲಿ ಚಿನ್ನಾಭರಣ ಮಾರಿದ್ದ ಮೀನ್ಹಾಜುದ್ದೀನ್, ಹಣವನ್ನು ಸುನೈನಾ ಹಾಗೂ ಚಂದನ್ಗೆ ನೀಡಿದ್ದ. ನಂತರ ಹಣವನ್ನು ಆರೋಪಿಗಳು ಹಂಚಿಕೊಂಡಿದ್ದರು’ ಎಂದೂ ದೇವರಾಜ್ ವಿವರಿಸಿದರು.</p>.<p>‘ಕೃತ್ಯದ ನಂತರ ಮನೆ ಕೆಲಸದವರು ನಾಪತ್ತೆಯಾಗಿದ್ದರಿಂದ ಅವರ ಮೇಲೆ ಅನುಮಾನ ಬಂದಿತ್ತು. ಆದರೆ, ಸುಳಿವು ಸಿಕ್ಕಿರಲಿಲ್ಲ. ವಿಶೇಷ ತಂಡದ ಪೊಲೀಸರು, ಆರೋಪಿಗಳ ವಿಳಾಸ ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದೂ ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಮಾರತ್ತಹಳ್ಳಿ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಚಿನ್ನಾಭರಣ ಹಾಗೂ ನಗದು ಕದ್ದು ಪರಾರಿಯಾಗಿದ್ದ ಆರೋಪದಡಿ ಮಹಿಳೆ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.</p>.<p>‘ಛತ್ತೀಸ್ಗಢದ ಸುನೈನಾ (25), ಅಸ್ಸಾಂನ ಮೀನ್ಹಾಜುದ್ದೀನ್ ಬಾರ್ಬುಯ್ಯ (27) ಹಾಗೂ ಬಿಹಾರದ ಚಂದನ್ ಕುಮಾರ್ ಮೊಹತೋ ಅಲಿಯಾಸ್ ಚಂದನ್ (19) ಬಂಧಿತರು. ಅವರಿಂದ 1 ಕೆ.ಜಿ 5 ಗ್ರಾಂ ತೂಕದ ಚಿನ್ನಾಭರಣ, 21 ಬೆಳ್ಳಿ ನಾಣ್ಯಗಳು, ₹ 55,000 ನಗದು, ಕಾರು, ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಇವುಗಳ ಒಟ್ಟು ಮೌಲ್ಯ ₹ 50 ಲಕ್ಷ’ ಎಂದು ವೈಟ್ಫೀಲ್ಡ್ ವಿಭಾಗದ ಡಿಸಿಪಿ ದೇವರಾಜ್ ಹೇಳಿದರು.</p>.<p class="Subhead"><strong>ಮನೆ ಕೆಲಸಕ್ಕೆ ಸೇರಿ ಕೃತ್ಯ:</strong> ‘ಆರೋಪಿಗಳಾದ ಸುನೈನಾ ಹಾಗೂ ಚಂದನ್, ಮಾರತ್ತಹಳ್ಳಿ ಠಾಣೆ ವ್ಯಾಪ್ತಿಯ ನಿವಾಸಿ ನಿತಿನ್ ಅಗರವಾಲ್ ಎಂಬುವರ ಮನೆಯಲ್ಲಿ ಕೆಲಸಕ್ಕೆ ಇದ್ದರು. ಅದೇ ಸಮಯದಲ್ಲಿ ಚಿನ್ನಾಭರಣ ಹಾಗೂ ನಗದು ಇದ್ದ ಲಾಕರ್ ನೋಡಿದ್ದರು’ ಎಂದು ದೇವರಾಜ್ ತಿಳಿಸಿದರು.</p>.<p>‘ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಲಾಕರ್ ಕದ್ದು ಆರೋಪಿಗಳು ಪರಾರಿಯಾಗಿದ್ದರು. ಈ ಬಗ್ಗೆ ಮನೆ ಮಾಲೀಕ ದೂರು ನೀಡಿದ್ದರು. ಅಷ್ಟರಲ್ಲೇ ಆರೋಪಿಗಳು ಬೆಂಗಳೂರು ತೊರೆದಿದ್ದರು. ಲಾಕರ್ನಲ್ಲಿದ್ದ ಚಿನ್ನಾಭರಣವನ್ನು ಆರೋಪಿ ಮೀನ್ಹಾಜುದ್ದೀನ್ಗೆ ನೀಡಿ ಮಾರಾಟ ಮಾಡಲು ತಿಳಿಸಿದ್ದರು.’</p>.<p>‘ಬೆಂಗಳೂರು ಹಾಗೂ ಅಸ್ಸಾಂನಲ್ಲಿ ಚಿನ್ನಾಭರಣ ಮಾರಿದ್ದ ಮೀನ್ಹಾಜುದ್ದೀನ್, ಹಣವನ್ನು ಸುನೈನಾ ಹಾಗೂ ಚಂದನ್ಗೆ ನೀಡಿದ್ದ. ನಂತರ ಹಣವನ್ನು ಆರೋಪಿಗಳು ಹಂಚಿಕೊಂಡಿದ್ದರು’ ಎಂದೂ ದೇವರಾಜ್ ವಿವರಿಸಿದರು.</p>.<p>‘ಕೃತ್ಯದ ನಂತರ ಮನೆ ಕೆಲಸದವರು ನಾಪತ್ತೆಯಾಗಿದ್ದರಿಂದ ಅವರ ಮೇಲೆ ಅನುಮಾನ ಬಂದಿತ್ತು. ಆದರೆ, ಸುಳಿವು ಸಿಕ್ಕಿರಲಿಲ್ಲ. ವಿಶೇಷ ತಂಡದ ಪೊಲೀಸರು, ಆರೋಪಿಗಳ ವಿಳಾಸ ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದೂ ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>