ವಿಚಾರಣೆ ವೇಳೆ ಪೊಲೀಸರ ನಡೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ‘ಈ ವಿಷಯದಲ್ಲಿ ರಾಜ್ಯ ಸರ್ಕಾರದ ಪ್ರತಿಕ್ರಿಯೆ ಆಘಾತಕಾರಿಯಾಗಿದೆ. ತನಿಖೆಯನ್ನೇ ನಡೆಸದೆ ಏನೂ ನಡೆದೇ ಇಲ್ಲ ಎಂದು ಹೇಳುವುದನ್ನು ಹೇಗೆ ನಂಬುವುದು, ಈ ರೀತಿ ಹೇಳುವುದಾದರೆ ಹಿರಿಯ ಅಧಿಕಾರಿಯೇ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ನಿರ್ದೇಶಿಸಬೇಕಾಗುತ್ತದೆ’ ಎಂದು ಹೇಳಿತು.