‘ರಾಸಾಯನಿಕ ಬಣ್ಣಗಳು ಚರ್ಮದ ಜತೆಗೆ ಕಣ್ಣಿಗೂ ಅಪಾಯಕಾರಿ. ಹಾನಿಕಾರಕ ಬಣ್ಣವು ಕಣ್ಣಿಗೆ ಬಿದ್ದರೆ ಸೋಂಕು ಕಾಣಿಸಿಕೊಳ್ಳಲಿದೆ. ಬಣ್ಣಗಳಲ್ಲಿರುವ ಸೀಸದಿಂದ ಕಣ್ಣಿನ ಉರಿಯೂತ, ಅಲರ್ಜಿ, ತಾತ್ಕಾಲಿಕ ಅಂಧತ್ವ ಸೇರಿ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಹೂವುಗಳು, ತರಕಾರಿಗಳು ಮತ್ತು ಇತರ ನೈಸರ್ಗಿಕ ಮೂಲಗಳಿಂದ ತಯಾರಿಸಿದ ಬಣ್ಣಗಳನ್ನೇ ಬಳಸಬೇಕು. ಇವು ಚರ್ಮ ಮತ್ತು ಕಣ್ಣುಗಳಿಗೆ ಸುರಕ್ಷಿತವಾಗಿರುವ ಜತೆಗೆ ಪರಿಸರ ಸ್ನೇಹಿಯೂ ಹೌದು’ ಎಂದು ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆಯ ಕ್ಲಿನಿಕಲ್ ಸೇವೆಗಳ ಮುಖ್ಯಸ್ಥ ಡಾ. ದೇವರಾಜ್ ತಿಳಿಸಿದ್ದಾರೆ.