<p><strong>ಬೆಂಗಳೂರು:</strong> ವಿದ್ಯಾರ್ಥಿನಿಯೊಬ್ಬಳ ತಲೆ ಮೇಲೆ ಇಟ್ಟ ಕರ್ಪೂರ ಕೂದಲನ್ನು ಸುಡಲಿಲ್ಲ. ಕಣ್ಣಿನ ಎದುರಿಗೆ ಇಟ್ಟ ನಿಂಬೆಹಣ್ಣು ಮಾಯವಾಯಿತು. ಖಾಲಿ ಕೊಡದಲ್ಲಿ ನೀರು ಬರುತ್ತಿತ್ತು. ಹೀಗೆ ಪವಾಡಗಳ ಮೇಲೆ ಪವಾಡ ಮಾಡುತ್ತಿದ್ದರೆ ಗ್ರಾಮಸ್ಥರು ಮೂಕ ವಿಸ್ಮಯದಿಂದ ನೋಡುತ್ತಿದ್ದರು.</p>.<p>ಇದು ಕಾಮಾಕ್ಷಿಪುರ ಗ್ರಾಮದ, ಮಾರಸಂದ್ರದ ಪಿಕೆಬಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಎನ್ಎಸ್ಎಸ್ ಶಿಬಿರದಲ್ಲಿ ಹುಲಿಕಲ್ ನಟರಾಜ್ ಪವಾಡಗಳ ಹಿಂದಿನ ರಹಸ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ದೃಶ್ಯ.</p>.<p>‘ಮಾಟ, ಮಂತ್ರಗಳಿಂದ ಮನುಷ್ಯರನ್ನು ದುರ್ಬಲರಾಗಿ ಮಾಡುತ್ತೇವೆ ಎನ್ನುವುದು ಸತ್ಯಕ್ಕೆ ದೂರವಾದದ್ದು. ಯಾವ ಮಾಟ ಮಂತ್ರಗಳು ಮನುಷ್ಯನನ್ನು ಏನೂ ಮಾಡಲಾರವು. ಡೊಂಗಿಕೋರರು ನಿಮ್ಮಲ್ಲಿ ಭಯವನ್ನು ಹುಟ್ಟು ಹಾಕುತ್ತಾರೆ. ಅದನ್ನು ನಂಬಬೇಡಿ. ಮಾನಸಿಕವಾಗಿ ನಾವು ಗಟ್ಟಿಯಾಗಬೇಕು’ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.</p>.<p>‘ಸುಲಭವಾಗಿ ಮಾಡಬಹುದಾದ ತಂತ್ರಗಳನ್ನು ಬಳಸಿ ಅದಕ್ಕೆ ಪವಾಡದ ಹೆಸರಿಡುತ್ತಾರೆ. ಇದನ್ನು ಜನರು ನಂಬಬಾರದು’ ಎಂದು ಉದಾಹರಣೆ ಸಹಿತ ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ವಿದ್ಯಾರ್ಥಿನಿಯೊಬ್ಬಳ ತಲೆ ಮೇಲೆ ಇಟ್ಟ ಕರ್ಪೂರ ಕೂದಲನ್ನು ಸುಡಲಿಲ್ಲ. ಕಣ್ಣಿನ ಎದುರಿಗೆ ಇಟ್ಟ ನಿಂಬೆಹಣ್ಣು ಮಾಯವಾಯಿತು. ಖಾಲಿ ಕೊಡದಲ್ಲಿ ನೀರು ಬರುತ್ತಿತ್ತು. ಹೀಗೆ ಪವಾಡಗಳ ಮೇಲೆ ಪವಾಡ ಮಾಡುತ್ತಿದ್ದರೆ ಗ್ರಾಮಸ್ಥರು ಮೂಕ ವಿಸ್ಮಯದಿಂದ ನೋಡುತ್ತಿದ್ದರು.</p>.<p>ಇದು ಕಾಮಾಕ್ಷಿಪುರ ಗ್ರಾಮದ, ಮಾರಸಂದ್ರದ ಪಿಕೆಬಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಎನ್ಎಸ್ಎಸ್ ಶಿಬಿರದಲ್ಲಿ ಹುಲಿಕಲ್ ನಟರಾಜ್ ಪವಾಡಗಳ ಹಿಂದಿನ ರಹಸ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ದೃಶ್ಯ.</p>.<p>‘ಮಾಟ, ಮಂತ್ರಗಳಿಂದ ಮನುಷ್ಯರನ್ನು ದುರ್ಬಲರಾಗಿ ಮಾಡುತ್ತೇವೆ ಎನ್ನುವುದು ಸತ್ಯಕ್ಕೆ ದೂರವಾದದ್ದು. ಯಾವ ಮಾಟ ಮಂತ್ರಗಳು ಮನುಷ್ಯನನ್ನು ಏನೂ ಮಾಡಲಾರವು. ಡೊಂಗಿಕೋರರು ನಿಮ್ಮಲ್ಲಿ ಭಯವನ್ನು ಹುಟ್ಟು ಹಾಕುತ್ತಾರೆ. ಅದನ್ನು ನಂಬಬೇಡಿ. ಮಾನಸಿಕವಾಗಿ ನಾವು ಗಟ್ಟಿಯಾಗಬೇಕು’ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.</p>.<p>‘ಸುಲಭವಾಗಿ ಮಾಡಬಹುದಾದ ತಂತ್ರಗಳನ್ನು ಬಳಸಿ ಅದಕ್ಕೆ ಪವಾಡದ ಹೆಸರಿಡುತ್ತಾರೆ. ಇದನ್ನು ಜನರು ನಂಬಬಾರದು’ ಎಂದು ಉದಾಹರಣೆ ಸಹಿತ ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>