<p><strong>ಬೆಂಗಳೂರು:</strong>‘ವಿಜ್ಞಾನಕ್ಕಾಗಿ ಭಾರತ ನಡಿಗೆ’ ಕಾರ್ಯಕ್ರಮದ ಮೂರನೇ ಆವೃತ್ತಿಯ ಕಾರ್ಯಕ್ರಮ ನಗರದಲ್ಲಿ ಶನಿವಾರ ನಡೆಯಿತು.</p>.<p>ಬನ್ನಪ್ಪ ಪಾರ್ಕ್ನಿಂದ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಸೆನೆಟ್ ಹಾಲ್ನವರೆಗೆ ಸಾಗಿದ ಈ ನಡಿಗೆಗೆ ಕುಲಸಚಿವ ವಿ. ಶಿವರಾಂ ಚಾಲನೆ ನೀಡಿದರು.</p>.<p>ಜನಹಿತವನ್ನು ಗಮನದಲ್ಲಿಟ್ಟುಕೊಂಡು ವೈಜ್ಞಾನಿಕ ಪುರಾವೆಗಳ ಆಧಾರದ ಮೇಲೆ ಸರ್ಕಾರಗಳು ನೀತಿ ರೂಪಿಸಬೇಕು. ಸಂಶೋಧನಾ ಕಾರ್ಯ ಗಳಿಗೆ ಸಮರ್ಪಕವಾಗಿ ಅನುದಾನ ಒದಗಿಸಬೇಕು ಎಂದು ನಡಿಗೆಯಲ್ಲಿ ಪಾಲ್ಗೊಂಡ ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳು ಒತ್ತಾಯಿಸಿದರು.</p>.<p>ಕುಲಪತಿ ಪ್ರೊ. ಎಸ್. ಜಾಫೆಟ್, ‘ವೈಜ್ಞಾನಿಕ ಚಿಂತನೆಗಳು ನಮ್ಮ ಸಂವಿಧಾನದ ಭಾಗ ಮಾತ್ರವಲ್ಲ, ಅವು ನಮ್ಮ ಜೀವನದ ಭಾಗವೂ ಆಗಬೇಕು’ ಎಂದರು.</p>.<p>ಖಭೌತ ವಿಜ್ಞಾನಿ ಪ್ರಜ್ವಲ ಶಾಸ್ತ್ರಿ, ‘ಅನೇಕ ವಿಜ್ಞಾನಿಗಳು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡಿರು ವುದಿಲ್ಲ. ಸಂಸ್ಥೆಯೊಂದು ವಿಜ್ಞಾನಿಗಳನ್ನು ನೇಮಿಸಿಕೊಳ್ಳುವಾಗ, ಅವರು ವೈಜ್ಞಾನಿಕ ಯೋಚನಾ ವಿಧಾನವನ್ನು ಜೀವನದ ಭಾಗವಾಗಿಸಿಕೊಂಡಿದ್ದಾರೆಯೇ ಎಂದು ಪರಿಶೀಲಿಸಬೇಕಾದ ಅಗತ್ಯವಿದೆ’ ಎಂದರು.</p>.<p>‘ಧರ್ಮವು ನಮ್ಮ ಮತ್ತು ಸುತ್ತಲಿನ ಮನುಷ್ಯರೊಂದಿಗಿನ ಪರಸ್ಪರ ಸಂಬಂಧಗಳ ಬಗ್ಗೆ ತಿಳಿಸುವ ಸಾಧನ ವಾಗಬಹುದೇ ಹೊರತು, ನಮ್ಮ ಸುತ್ತಲಿನ ವಿದ್ಯಮಾನಗಳ ಕಾರಣ ಹುಡುಕುವ ಅಥವಾ ಅದಕ್ಕೆ ಪರಿಹಾರ ನೀಡುವ ಸಾಧನವಾಗಲಾರದು’ ಎಂದು ಅಭಿಪ್ರಾಯಪಟ್ಟರು.</p>.<p class="Subhead">ನೀರಿನ ಕೊರತೆ ಮತ್ತು ವೈಜ್ಞಾನಿಕ ಪರಿಹಾರ ಕುರಿತು ಮಾತನಾಡಿದ ಪ್ರೊ.ಭಕ್ತಿದೇವಿ, ‘ನೀರಿನ ಹೊಸ ಮೂಲಗಳ ಅನ್ವೇಷಣೆಯ ಬದ ಲಾಗಿ, ಇರುವ ನೀರನ್ನೇ ಮರುಬಳಕೆ ಯೋಗ್ಯವನ್ನಾಗಿಸುವ ಆವಿಷ್ಕಾರಗಳಿಗೆ ವಿಜ್ಞಾನಿಗಳು ಮುಂದಾಗಬೇಕಿದೆ’ ಎಂದು ಸಲಹೆ ನೀಡಿದರು.</p>.<p>ಜಲಸಂರಕ್ಷಣಾ ತಜ್ಞ ಎಸ್. ವಿಶ್ವನಾಥ್, ‘ನೀರನ್ನು ಒಂದು ಖಾಸಗಿ ಆಸ್ತಿಯನ್ನಾಗಿ ನೋಡದೆ, ಸಾರ್ವಜನಿಕ ಆಸ್ತಿಯನ್ನಾಗಿಸಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>‘ವಿಜ್ಞಾನಕ್ಕಾಗಿ ಭಾರತ ನಡಿಗೆ’ ಕಾರ್ಯಕ್ರಮದ ಮೂರನೇ ಆವೃತ್ತಿಯ ಕಾರ್ಯಕ್ರಮ ನಗರದಲ್ಲಿ ಶನಿವಾರ ನಡೆಯಿತು.</p>.<p>ಬನ್ನಪ್ಪ ಪಾರ್ಕ್ನಿಂದ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಸೆನೆಟ್ ಹಾಲ್ನವರೆಗೆ ಸಾಗಿದ ಈ ನಡಿಗೆಗೆ ಕುಲಸಚಿವ ವಿ. ಶಿವರಾಂ ಚಾಲನೆ ನೀಡಿದರು.</p>.<p>ಜನಹಿತವನ್ನು ಗಮನದಲ್ಲಿಟ್ಟುಕೊಂಡು ವೈಜ್ಞಾನಿಕ ಪುರಾವೆಗಳ ಆಧಾರದ ಮೇಲೆ ಸರ್ಕಾರಗಳು ನೀತಿ ರೂಪಿಸಬೇಕು. ಸಂಶೋಧನಾ ಕಾರ್ಯ ಗಳಿಗೆ ಸಮರ್ಪಕವಾಗಿ ಅನುದಾನ ಒದಗಿಸಬೇಕು ಎಂದು ನಡಿಗೆಯಲ್ಲಿ ಪಾಲ್ಗೊಂಡ ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳು ಒತ್ತಾಯಿಸಿದರು.</p>.<p>ಕುಲಪತಿ ಪ್ರೊ. ಎಸ್. ಜಾಫೆಟ್, ‘ವೈಜ್ಞಾನಿಕ ಚಿಂತನೆಗಳು ನಮ್ಮ ಸಂವಿಧಾನದ ಭಾಗ ಮಾತ್ರವಲ್ಲ, ಅವು ನಮ್ಮ ಜೀವನದ ಭಾಗವೂ ಆಗಬೇಕು’ ಎಂದರು.</p>.<p>ಖಭೌತ ವಿಜ್ಞಾನಿ ಪ್ರಜ್ವಲ ಶಾಸ್ತ್ರಿ, ‘ಅನೇಕ ವಿಜ್ಞಾನಿಗಳು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡಿರು ವುದಿಲ್ಲ. ಸಂಸ್ಥೆಯೊಂದು ವಿಜ್ಞಾನಿಗಳನ್ನು ನೇಮಿಸಿಕೊಳ್ಳುವಾಗ, ಅವರು ವೈಜ್ಞಾನಿಕ ಯೋಚನಾ ವಿಧಾನವನ್ನು ಜೀವನದ ಭಾಗವಾಗಿಸಿಕೊಂಡಿದ್ದಾರೆಯೇ ಎಂದು ಪರಿಶೀಲಿಸಬೇಕಾದ ಅಗತ್ಯವಿದೆ’ ಎಂದರು.</p>.<p>‘ಧರ್ಮವು ನಮ್ಮ ಮತ್ತು ಸುತ್ತಲಿನ ಮನುಷ್ಯರೊಂದಿಗಿನ ಪರಸ್ಪರ ಸಂಬಂಧಗಳ ಬಗ್ಗೆ ತಿಳಿಸುವ ಸಾಧನ ವಾಗಬಹುದೇ ಹೊರತು, ನಮ್ಮ ಸುತ್ತಲಿನ ವಿದ್ಯಮಾನಗಳ ಕಾರಣ ಹುಡುಕುವ ಅಥವಾ ಅದಕ್ಕೆ ಪರಿಹಾರ ನೀಡುವ ಸಾಧನವಾಗಲಾರದು’ ಎಂದು ಅಭಿಪ್ರಾಯಪಟ್ಟರು.</p>.<p class="Subhead">ನೀರಿನ ಕೊರತೆ ಮತ್ತು ವೈಜ್ಞಾನಿಕ ಪರಿಹಾರ ಕುರಿತು ಮಾತನಾಡಿದ ಪ್ರೊ.ಭಕ್ತಿದೇವಿ, ‘ನೀರಿನ ಹೊಸ ಮೂಲಗಳ ಅನ್ವೇಷಣೆಯ ಬದ ಲಾಗಿ, ಇರುವ ನೀರನ್ನೇ ಮರುಬಳಕೆ ಯೋಗ್ಯವನ್ನಾಗಿಸುವ ಆವಿಷ್ಕಾರಗಳಿಗೆ ವಿಜ್ಞಾನಿಗಳು ಮುಂದಾಗಬೇಕಿದೆ’ ಎಂದು ಸಲಹೆ ನೀಡಿದರು.</p>.<p>ಜಲಸಂರಕ್ಷಣಾ ತಜ್ಞ ಎಸ್. ವಿಶ್ವನಾಥ್, ‘ನೀರನ್ನು ಒಂದು ಖಾಸಗಿ ಆಸ್ತಿಯನ್ನಾಗಿ ನೋಡದೆ, ಸಾರ್ವಜನಿಕ ಆಸ್ತಿಯನ್ನಾಗಿಸಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>