<p><strong>ಬೆಂಗಳೂರು:</strong> ಇಂಡಿಗೊ ವಿಮಾನಗಳ ಸಂಚಾರದಲ್ಲಿನ ವ್ಯತ್ಯಯದಿಂದ ಪ್ರಯಾಣಿಕರಿಗೆ ತೊಂದರೆ ಆಗಿರುವುದು ಅಷ್ಟೇ ಅಲ್ಲದೆ, ವಾಸ್ತವ್ಯಕ್ಕೆ ಹೋಟೆಲ್ಗಳು ದುಬಾರಿ ಹಣ ನಿಗದಿ ಮಾಡಿರುವುದರಿಂದ ಪ್ರಯಾಣಿಕರಿಗೆ ಹೊರೆಯಾಗಿದೆ. ಕೆಲವು ಹೋಟೆಲ್, ಲಾಡ್ಜ್ಗಳಲ್ಲಿ ಸಾಮಾನ್ಯಕ್ಕಿಂತ ಮೂರು ಪಟ್ಟು ದರ ಹೆಚ್ಚಿಸಿರುವ ಆರೋಪ ಕೇಳಿ ಬಂದಿದೆ.</p>.<p>6–7 ದಿನದಿಂದ ಇಂಡಿಗೊ ವಿಮಾನ ಸಂಚಾರ ರದ್ದುಪಡಿಸಿದ್ದರಿಂದ ಬೆಂಗಳೂರಿನಿಂದ ವಿವಿಧ ನಗರಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ತೊಂದರೆ ಅನುಭವಿಸಿದರು. ರಾತ್ರಿ ವೇಳೆ ಪ್ರಯಾಣ ಮಾಡಬೇಕಾಗಿದ್ದವರು ಪರ್ಯಾಯ ವಿಮಾನ ಸಂಚಾರಕ್ಕೆ ಅವಕಾಶವೂ ಇಲ್ಲದ ಕಾರಣ ವಾಸ್ತವ್ಯಕ್ಕೆ ಮುಂದಾದರು.</p>.<p>ಈ ವೇಳೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಹೋಟೆಲ್ಗಳಲ್ಲಿ ದರ ವಿಚಾರಿಸಿದಾಗ ಮೂರು ಪಟ್ಟು ಏರಿಕೆಯಾಗಿರುವುದು ಕಂಡು ಬಂದಿದೆ.</p>.<p>ಸಾಮಾನ್ಯ ದಿನಗಳಲ್ಲಿ ₹3,938ಕ್ಕೆ ಲಭ್ಯವಿರುವ ಕೊಠಡಿ ದರ ₹11,000ಕ್ಕೆ ಏರಿಕೆಯಾಗಿತ್ತು. ಮತ್ತೊಂದು ಹೋಟೆಲ್ನಲ್ಲಿ ₹3,000 ಇದ್ದ ದರವನ್ನು ಈಗ ₹10,000ಕ್ಕೆ ಹೆಚ್ಚಿಸಲಾಗಿದೆ. ಕೆಲವು ಪ್ರಯಾಣಿಕರು ಅನಿವಾರ್ಯವಾಗಿ ಹೆಚ್ಚಿನ ದರ ಪಾವತಿಸಿ ಕೊಠಡಿ ಪಡೆದಿದ್ದಾರೆ.</p>.<p>‘ಕುಟುಂಬದ ಕಾರ್ಯಕ್ರಮದಲ್ಲಿ ಭಾಗವಹಿಸಲು ದೆಹಲಿಗೆ ಹೊರಟಿದ್ದೆ. ಆದರೆ, ವಿಮಾನ ಸಂಚಾರ ರದ್ದಾದ ಕಾರಣ ಇಲ್ಲಿಯೇ ಉಳಿಯಲು ಕೊಠಡಿ ವಿಚಾರಿಸಿದರೆ ₹7,000ದಿಂದ ₹10,000 ಆಗಬಹುದು ಎಂದು ಹೋಟೆಲ್ ಸಿಬ್ಬಂದಿ ತಿಳಿಸಿದರು. ಕೊನೆಗೆ ಬೆಂಗಳೂರಿಗೆ ವಾಪಸಾಗಲು ಕ್ಯಾಬ್ ಬುಕ್ ಮಾಡಿದರೆ ₹2,500 ಪಾವತಿಸಬೇಕಾಯಿತು. ನಮ್ಮದಲ್ಲದ ತಪ್ಪಿಗೆ ಹೊರೆ ಅನುಭವಿಸಿದ್ದೇವೆ. ಈ ವೆಚ್ಚವನ್ನು ಇಂಡಿಗೊ ವಿಮಾನಯಾನ ಸಂಸ್ಥೆಯವರು ಭರಿಸಬೇಕು’ ಎಂದು ಸಾಫ್ಟ್ವೇರ್ ಎಂಜಿನಿಯರ್ ಪ್ರೀತಿ ಒತ್ತಾಯಿಸಿದರು.</p>.<p>‘ಬೆಂಗಳೂರು ವಿಶ್ವ ದರ್ಜೆಯ ನಗರ. ವಿಮಾನಯಾನ ಇಲ್ಲವೇ ಸಾರಿಗೆ ಸಮಸ್ಯೆಯಾದರೆ ಹೋಟೆಲ್ಗಳಲ್ಲಿ ಕೊಠಡಿಗಳ ದರ ಏರಿಕೆ ಮಾಡಲಾಗುತ್ತದೆ. ಇದೊಂದು ರೀತಿಯ ಹಗಲು ದರೋಡೆ ’ ಎಂದು ರಾಜಸ್ಥಾನದ ಜೈಸಲ್ಮೇರ್ಗೆ ಹೋಗಬೇಕಿದ್ದ ಉದ್ಯಮಿ ಸೆಂಥಿಲ್ ಕುಮಾರ್ ಬೇಸರ ವ್ಯಕ್ತಪಡಿಸಿದರು.</p>.<h2>ಬಸ್ ದರದಲ್ಲೂ ಏರಿಕೆ</h2><p>ಕ್ರಿಸ್ಮಸ್ ಹಾಗೂ ಹೊಸ ವರ್ಷದ ರಜೆ ವೇಳೆ ಊರಿಗೆ ಹೋಗುವವರಿಗೆ ಖಾಸಗಿ ಬಸ್ಗಳ ಪ್ರಯಾಣ ದರದ ಬಿಸಿ ತಟ್ಟಿದೆ.</p><p>ಈ ವಾರದಲ್ಲಿ ಸಂಚರಿಸುವವರು ಸಾಮಾನ್ಯಕ್ಕಿಂತ ₹200ರಿಂದ ₹300 ಹೆಚ್ಚಿಗೆ ಪಾವತಿಸಿ ಮುಂಗಡ ಬುಕ್ಕಿಂಗ್ ಮಾಡುತ್ತಿದ್ದಾರೆ. ಡಿಸೆಂಬರ್ 20ರ ನಂತರ ದರವು ₹2000 ದಿಂದ ₹3000ಕ್ಕೆ ಏರಿಕೆಯಾಗಬಹುದು ಎನ್ನುವ ಆತಂಕ ಎದುರಾಗಿದೆ.</p><p>ಕೇರಳದ ಹಲವು ನಗರಗಳು, ಮುಂಬೈ, ಹೈದರಾಬಾದ್, ಚೆನ್ನೈ ಸೇರಿದಂತೆ ಪ್ರಮುಖ ನಗರಗಳಿಗೆ ಸಂಚರಿಸಲು ಪ್ರಯಾಣ ದರ ದುಬಾರಿಯಾಗಲಿದೆ.</p><p>‘ಈಗಾಗಲೇ ರೈಲುಗಳಲ್ಲಿ ಟಿಕೆಟ್ ಬುಕ್ಕಿಂಗ್ ಆಗಿದೆ. ವಿಮಾನ ಸಂಚಾರದಲ್ಲೂ ವ್ಯತ್ಯಯ ಉಂಟಾಗಿರುವುದರಿಂದ ಪ್ರಯಾಣಿಕರಿಂದ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಅನಿವಾರ್ಯವಾಗಿ ದರ ಏರಿಕೆ ಮಾಡಿದ್ದೇವೆ’ ಎಂದು ಖಾಸಗಿ ಬಸ್ ವ್ಯವಸ್ಥಾಪಕರೊಬ್ಬರು ತಿಳಿಸಿದರು.</p><p>‘ಬೇಡಿಕೆ ಇರುವ ಜತೆಗೆ ವಿಮಾನ ಸಂಚಾರ ರದ್ದು ಸನ್ನಿವೇಶ ಎದುರಾದಾಗ ಸರ್ಕಾರ ಮಧ್ಯ ಪ್ರವೇಶಿಸಿ ದರಕ್ಕೆ ಮಿತಿ ಹಾಕಬೇಕು. ಹೆಚ್ಚು ದರ ವಸೂಲಿ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಬೇಕು’ ಎಂದು ಬೆಂಗಳೂರಲ್ಲಿ ನೆಲಸಿರುವ ಕೇರಳದ ಕೆ. ಶ್ರೀಜಯ ಹೇಳಿದರು.</p>.ವಿಮಾನ ಸಂಚಾರದಲ್ಲಿ ವ್ಯತ್ಯಯ: ಇಂಡಿಗೊ ಮಾಲೀಕರು ಯಾರು?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಇಂಡಿಗೊ ವಿಮಾನಗಳ ಸಂಚಾರದಲ್ಲಿನ ವ್ಯತ್ಯಯದಿಂದ ಪ್ರಯಾಣಿಕರಿಗೆ ತೊಂದರೆ ಆಗಿರುವುದು ಅಷ್ಟೇ ಅಲ್ಲದೆ, ವಾಸ್ತವ್ಯಕ್ಕೆ ಹೋಟೆಲ್ಗಳು ದುಬಾರಿ ಹಣ ನಿಗದಿ ಮಾಡಿರುವುದರಿಂದ ಪ್ರಯಾಣಿಕರಿಗೆ ಹೊರೆಯಾಗಿದೆ. ಕೆಲವು ಹೋಟೆಲ್, ಲಾಡ್ಜ್ಗಳಲ್ಲಿ ಸಾಮಾನ್ಯಕ್ಕಿಂತ ಮೂರು ಪಟ್ಟು ದರ ಹೆಚ್ಚಿಸಿರುವ ಆರೋಪ ಕೇಳಿ ಬಂದಿದೆ.</p>.<p>6–7 ದಿನದಿಂದ ಇಂಡಿಗೊ ವಿಮಾನ ಸಂಚಾರ ರದ್ದುಪಡಿಸಿದ್ದರಿಂದ ಬೆಂಗಳೂರಿನಿಂದ ವಿವಿಧ ನಗರಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ತೊಂದರೆ ಅನುಭವಿಸಿದರು. ರಾತ್ರಿ ವೇಳೆ ಪ್ರಯಾಣ ಮಾಡಬೇಕಾಗಿದ್ದವರು ಪರ್ಯಾಯ ವಿಮಾನ ಸಂಚಾರಕ್ಕೆ ಅವಕಾಶವೂ ಇಲ್ಲದ ಕಾರಣ ವಾಸ್ತವ್ಯಕ್ಕೆ ಮುಂದಾದರು.</p>.<p>ಈ ವೇಳೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಹೋಟೆಲ್ಗಳಲ್ಲಿ ದರ ವಿಚಾರಿಸಿದಾಗ ಮೂರು ಪಟ್ಟು ಏರಿಕೆಯಾಗಿರುವುದು ಕಂಡು ಬಂದಿದೆ.</p>.<p>ಸಾಮಾನ್ಯ ದಿನಗಳಲ್ಲಿ ₹3,938ಕ್ಕೆ ಲಭ್ಯವಿರುವ ಕೊಠಡಿ ದರ ₹11,000ಕ್ಕೆ ಏರಿಕೆಯಾಗಿತ್ತು. ಮತ್ತೊಂದು ಹೋಟೆಲ್ನಲ್ಲಿ ₹3,000 ಇದ್ದ ದರವನ್ನು ಈಗ ₹10,000ಕ್ಕೆ ಹೆಚ್ಚಿಸಲಾಗಿದೆ. ಕೆಲವು ಪ್ರಯಾಣಿಕರು ಅನಿವಾರ್ಯವಾಗಿ ಹೆಚ್ಚಿನ ದರ ಪಾವತಿಸಿ ಕೊಠಡಿ ಪಡೆದಿದ್ದಾರೆ.</p>.<p>‘ಕುಟುಂಬದ ಕಾರ್ಯಕ್ರಮದಲ್ಲಿ ಭಾಗವಹಿಸಲು ದೆಹಲಿಗೆ ಹೊರಟಿದ್ದೆ. ಆದರೆ, ವಿಮಾನ ಸಂಚಾರ ರದ್ದಾದ ಕಾರಣ ಇಲ್ಲಿಯೇ ಉಳಿಯಲು ಕೊಠಡಿ ವಿಚಾರಿಸಿದರೆ ₹7,000ದಿಂದ ₹10,000 ಆಗಬಹುದು ಎಂದು ಹೋಟೆಲ್ ಸಿಬ್ಬಂದಿ ತಿಳಿಸಿದರು. ಕೊನೆಗೆ ಬೆಂಗಳೂರಿಗೆ ವಾಪಸಾಗಲು ಕ್ಯಾಬ್ ಬುಕ್ ಮಾಡಿದರೆ ₹2,500 ಪಾವತಿಸಬೇಕಾಯಿತು. ನಮ್ಮದಲ್ಲದ ತಪ್ಪಿಗೆ ಹೊರೆ ಅನುಭವಿಸಿದ್ದೇವೆ. ಈ ವೆಚ್ಚವನ್ನು ಇಂಡಿಗೊ ವಿಮಾನಯಾನ ಸಂಸ್ಥೆಯವರು ಭರಿಸಬೇಕು’ ಎಂದು ಸಾಫ್ಟ್ವೇರ್ ಎಂಜಿನಿಯರ್ ಪ್ರೀತಿ ಒತ್ತಾಯಿಸಿದರು.</p>.<p>‘ಬೆಂಗಳೂರು ವಿಶ್ವ ದರ್ಜೆಯ ನಗರ. ವಿಮಾನಯಾನ ಇಲ್ಲವೇ ಸಾರಿಗೆ ಸಮಸ್ಯೆಯಾದರೆ ಹೋಟೆಲ್ಗಳಲ್ಲಿ ಕೊಠಡಿಗಳ ದರ ಏರಿಕೆ ಮಾಡಲಾಗುತ್ತದೆ. ಇದೊಂದು ರೀತಿಯ ಹಗಲು ದರೋಡೆ ’ ಎಂದು ರಾಜಸ್ಥಾನದ ಜೈಸಲ್ಮೇರ್ಗೆ ಹೋಗಬೇಕಿದ್ದ ಉದ್ಯಮಿ ಸೆಂಥಿಲ್ ಕುಮಾರ್ ಬೇಸರ ವ್ಯಕ್ತಪಡಿಸಿದರು.</p>.<h2>ಬಸ್ ದರದಲ್ಲೂ ಏರಿಕೆ</h2><p>ಕ್ರಿಸ್ಮಸ್ ಹಾಗೂ ಹೊಸ ವರ್ಷದ ರಜೆ ವೇಳೆ ಊರಿಗೆ ಹೋಗುವವರಿಗೆ ಖಾಸಗಿ ಬಸ್ಗಳ ಪ್ರಯಾಣ ದರದ ಬಿಸಿ ತಟ್ಟಿದೆ.</p><p>ಈ ವಾರದಲ್ಲಿ ಸಂಚರಿಸುವವರು ಸಾಮಾನ್ಯಕ್ಕಿಂತ ₹200ರಿಂದ ₹300 ಹೆಚ್ಚಿಗೆ ಪಾವತಿಸಿ ಮುಂಗಡ ಬುಕ್ಕಿಂಗ್ ಮಾಡುತ್ತಿದ್ದಾರೆ. ಡಿಸೆಂಬರ್ 20ರ ನಂತರ ದರವು ₹2000 ದಿಂದ ₹3000ಕ್ಕೆ ಏರಿಕೆಯಾಗಬಹುದು ಎನ್ನುವ ಆತಂಕ ಎದುರಾಗಿದೆ.</p><p>ಕೇರಳದ ಹಲವು ನಗರಗಳು, ಮುಂಬೈ, ಹೈದರಾಬಾದ್, ಚೆನ್ನೈ ಸೇರಿದಂತೆ ಪ್ರಮುಖ ನಗರಗಳಿಗೆ ಸಂಚರಿಸಲು ಪ್ರಯಾಣ ದರ ದುಬಾರಿಯಾಗಲಿದೆ.</p><p>‘ಈಗಾಗಲೇ ರೈಲುಗಳಲ್ಲಿ ಟಿಕೆಟ್ ಬುಕ್ಕಿಂಗ್ ಆಗಿದೆ. ವಿಮಾನ ಸಂಚಾರದಲ್ಲೂ ವ್ಯತ್ಯಯ ಉಂಟಾಗಿರುವುದರಿಂದ ಪ್ರಯಾಣಿಕರಿಂದ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಅನಿವಾರ್ಯವಾಗಿ ದರ ಏರಿಕೆ ಮಾಡಿದ್ದೇವೆ’ ಎಂದು ಖಾಸಗಿ ಬಸ್ ವ್ಯವಸ್ಥಾಪಕರೊಬ್ಬರು ತಿಳಿಸಿದರು.</p><p>‘ಬೇಡಿಕೆ ಇರುವ ಜತೆಗೆ ವಿಮಾನ ಸಂಚಾರ ರದ್ದು ಸನ್ನಿವೇಶ ಎದುರಾದಾಗ ಸರ್ಕಾರ ಮಧ್ಯ ಪ್ರವೇಶಿಸಿ ದರಕ್ಕೆ ಮಿತಿ ಹಾಕಬೇಕು. ಹೆಚ್ಚು ದರ ವಸೂಲಿ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಬೇಕು’ ಎಂದು ಬೆಂಗಳೂರಲ್ಲಿ ನೆಲಸಿರುವ ಕೇರಳದ ಕೆ. ಶ್ರೀಜಯ ಹೇಳಿದರು.</p>.ವಿಮಾನ ಸಂಚಾರದಲ್ಲಿ ವ್ಯತ್ಯಯ: ಇಂಡಿಗೊ ಮಾಲೀಕರು ಯಾರು?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>