<p><strong>ಬೆಂಗಳೂರು</strong>: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಹೇಳಿ ಉದ್ಯಮಿಗೆ ₹81 ಲಕ್ಷ ವಂಚಿಸಿದ ಆರೋಪದಡಿ ದಂಪತಿ ವಿರುದ್ಧ ಅಮೃತಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.</p>.<p>ಬೆಂಗಳೂರು ಉತ್ತರ ವಿಭಾಗದ ನಿವಾಸಿ ಶ್ವೇತಾ ಜೈನ್ ಅವರು ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಖಾಸಗಿ ದೂರು ಆಧರಿಸಿ ರಮ್ಯಾ ಮತ್ತು ಡಾ.ಪ್ರಮೋದ್ ಅವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.</p>.<p>‘ಸಹಕಾರ ನಗರದಲ್ಲಿ ಚಿಕಿತ್ಸೆಗೆ ತೆರಳಿದ್ದ ವೇಳೆ ಶಸ್ತ್ರಚಿಕಿತ್ಸಕ ಪ್ರಮೋದ್ ದಂಪತಿಯ ಪರಿಚಯವಾಯಿತು. ಈ ನಡುವೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿರುವುದಾಗಿ ಪ್ರಮೋದ್ ಅವರ ಪತ್ನಿ ಹೇಳಿದರು. ಆಗ ಅವರ ಖಾತೆಗೆ ₹25 ಲಕ್ಷ ವರ್ಗಾವಣೆ ಮಾಡಲಾಯಿತು. ಹಂತ ಹಂತವಾಗಿ ₹81 ಲಕ್ಷ ವರ್ಗಾವಣೆ ಮಾಡಲಾಗಿತ್ತು. ₹20 ಲಕ್ಷ ಲಾಭ ಬಂದಿರುವುದಾಗಿ ಹೇಳಿದರು. ಬಳಿಕ 2024ರ ನವೆಂಬರ್ ವರೆಗೂ ಹಣ ತೆಗೆಯದಂತೆ ಸಲಹೆ ನೀಡಿದರು’ ಎಂದು ಶ್ವೇತಾ ಅವರ ಪತಿ ಆನಂದ್ ಜೈನ್ ತಿಳಿಸಿದರು.</p>.<p>ಕೆಲ ದಿನಗಳ ಬಳಿಕ ಹಣ ಮತ್ತು ಲಾಭಾಂಶ ನೀಡುವಂತೆ ಕೇಳಿದಾಗ ವಾಪಸ್ ನೀಡಲಿಲ್ಲ. ಹೀಗಾಗಿ ದೂರು ನೀಡಲಾಯಿತು ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಹೇಳಿ ಉದ್ಯಮಿಗೆ ₹81 ಲಕ್ಷ ವಂಚಿಸಿದ ಆರೋಪದಡಿ ದಂಪತಿ ವಿರುದ್ಧ ಅಮೃತಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.</p>.<p>ಬೆಂಗಳೂರು ಉತ್ತರ ವಿಭಾಗದ ನಿವಾಸಿ ಶ್ವೇತಾ ಜೈನ್ ಅವರು ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಖಾಸಗಿ ದೂರು ಆಧರಿಸಿ ರಮ್ಯಾ ಮತ್ತು ಡಾ.ಪ್ರಮೋದ್ ಅವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.</p>.<p>‘ಸಹಕಾರ ನಗರದಲ್ಲಿ ಚಿಕಿತ್ಸೆಗೆ ತೆರಳಿದ್ದ ವೇಳೆ ಶಸ್ತ್ರಚಿಕಿತ್ಸಕ ಪ್ರಮೋದ್ ದಂಪತಿಯ ಪರಿಚಯವಾಯಿತು. ಈ ನಡುವೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿರುವುದಾಗಿ ಪ್ರಮೋದ್ ಅವರ ಪತ್ನಿ ಹೇಳಿದರು. ಆಗ ಅವರ ಖಾತೆಗೆ ₹25 ಲಕ್ಷ ವರ್ಗಾವಣೆ ಮಾಡಲಾಯಿತು. ಹಂತ ಹಂತವಾಗಿ ₹81 ಲಕ್ಷ ವರ್ಗಾವಣೆ ಮಾಡಲಾಗಿತ್ತು. ₹20 ಲಕ್ಷ ಲಾಭ ಬಂದಿರುವುದಾಗಿ ಹೇಳಿದರು. ಬಳಿಕ 2024ರ ನವೆಂಬರ್ ವರೆಗೂ ಹಣ ತೆಗೆಯದಂತೆ ಸಲಹೆ ನೀಡಿದರು’ ಎಂದು ಶ್ವೇತಾ ಅವರ ಪತಿ ಆನಂದ್ ಜೈನ್ ತಿಳಿಸಿದರು.</p>.<p>ಕೆಲ ದಿನಗಳ ಬಳಿಕ ಹಣ ಮತ್ತು ಲಾಭಾಂಶ ನೀಡುವಂತೆ ಕೇಳಿದಾಗ ವಾಪಸ್ ನೀಡಲಿಲ್ಲ. ಹೀಗಾಗಿ ದೂರು ನೀಡಲಾಯಿತು ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>