ಕೋವಿಡ್–19ನಿಂದಾಗಿ ಅರ್ಚಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಆರ್ಥಿಕ ವರ್ಷದಲ್ಲಿ ಯಾವುದೇ ನಿರ್ಬಂಧ ವಿಧಿಸದೇ ಸಂಬಂಧಪಟ್ಟ ದೇವಾಲಯಗಳಿಗೆ ತಡ ಮಾಡದೇ ತಹಶೀಲ್ದಾರರು ದೇವಸ್ಥಾನಗಳ ಖಾತೆಯಿಂದ ಅರ್ಚಕರ ಖಾತೆಗಳಿಗೆ ಜಮೆ ಮಾಡಲು ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ. 2020–21 ನೇ ಸಾಲಿನ ಆಯವ್ಯಯದಲ್ಲಿ ತಸ್ತೀಕ್ ಭತ್ಯೆ ಯೋಜನೆಯಡಿ ₹134.62 ಕೋಟಿ ಅನುದಾನ ನಿಗದಿ ಮಾಡಲಾಗಿತ್ತು.