ಕೆಆರ್ಡಿಸಿಎಲ್ ಕೈಗೆತ್ತಿಕೊಂಡಿರುವ ರಸ್ತೆ ವಿಸ್ತರಣೆ ಕಾಮಗಾರಿಗಳಿಗಾಗಿ ತೆರವುಗೊಳಿಸಬೇಕಾಗುವ ಮರಗಳ ಕುರಿತು ಅಧ್ಯಯನ ಕೈಗೊಳ್ಳಲು ಹೈಕೋರ್ಟ್ ಆದೇಶದ ಮೇರೆಗೆ ತಜ್ಞರ ಸಮಿತಿಯನ್ನು ರಚಿಸಲಾಗಿತ್ತು. ಅನೇಕ ಬಾರಿ ಕ್ಷೇತ್ರ ಪರಿವೀಕ್ಷಣೆ ನಡೆಸಿ ಅಧ್ಯಯನ ಕೈಗೊಂಡಿರುವ ತಜ್ಞರ ಬಳಿಕ ಸಮಿತಿಯು ಉಳಿಸಿಕೊಳ್ಳಬಹುದಾದ ಹಾಗೂ ಸ್ಥಳಾಂತರ ಮಾಡಬಹುದಾದ ಮರಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಸಮಿತಿಯ ವರದಿ ಪ್ರಕಾರ, ನಗರದ ಹೊರವಲಯದಲ್ಲಿ ವಿವಿಧ ರಸ್ತೆ ವಿಸ್ತರಣೆ ಕಾಮಗಾರಿಗಳ ಸಲುವಾಗಿ ಕೆ.ಆರ್.ಪುರ, ಯಲಹಂಕ, ದೇವನಹಳ್ಳಿ, ನೆಲಮಂಗಲ, ದೊಡ್ಡಬಳ್ಳಾಪುರ, ಮಲ್ಲೇಶ್ವರ ಹಾಗೂ ರಾಮನಗರವೂ ಸೇರಿದಂತೆ ವಿವಿಧ ಅರಣ್ಯ ವಲಯಗಳಲ್ಲಿ 2,347 ಮರಗಳು ರಸ್ತೆ ಪಕ್ಕದಲ್ಲಿವೆ.