<p><strong>ಬೆಂಗಳೂರು: </strong>ನಗರದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಸೋಮವಾರವೂ ನೂರಾರು ಕಾರ್ಮಿಕರು ಜಮಾಯಿಸಿದ್ದರು. ಸರ್ಕಾರ ಉಚಿತ ಬಸ್ ಸೇವೆ ಒದಗಿಸಿದ್ದರಿಂದ ತವರಿಗೆ ಮರಳುವ ಉತ್ಸಾಹ ಅವರ ಮುಖದಲ್ಲಿ ಮನೆ ಮಾಡಿತ್ತು. ನಗರದಿಂದ 24 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕುಟುಂಬದೊಂದಿಗೆ ಊರಿಗೆ ಮರಳಿದರು.</p>.<p>ಕೆಲಸ ಕೊಟ್ಟ ಬೆಂಗಳೂರಿನ ಬಗ್ಗೆ ಅವರಲ್ಲಿ ಗೌರವ ಇತ್ತಾದರೂ, ಕೊರೊನಾ ಸೋಂಕಿನ ಕಾರಣದಿಂದ ಪಟ್ಟಿರುವ ಸಂಕಷ್ಟ ಅವರನ್ನು ಹೈರಾಣು ಮಾಡಿತ್ತು. ತವರೂರಿಗೆ ಹೋಗಿ ತಲುಪಿದರೆ ಸಾಕು ಎಂಬ ಭಾವನೆ ಹಲವರಲ್ಲಿತ್ತು.</p>.<p>‘ಲಾಕ್ಡೌನ್ ಅಂತೇನೋ ಚಾಲೂ ಆದಾಗಿಂದ ನಮ್ಮನ್ನ ನೋಡಿದ್ರ ಸಾಕು ಕಳ್ರನ್ನ ನೋಡ್ದಂಗ ಮಾಡ್ತಾರ. ಯಾರೂ ಹತ್ರ ಸೇರಸಾವಲ್ರು.. ಇಲ್ಲಿಗಿಂತ ಕೂಲಿ ಕಡಿಮಿ ಆದ್ರೂ ನಮ್ಮೂರಾಗ ಹೊಲ–ಮನಿ ಕೆಲಸ ಮಾಡ್ಕೊಂತ ಇರ್ತೀನಿ’ ಎಂದು ರಾಯಚೂರಿನ ಸಂಗಮೇಶಪ್ಪ ಬಸ್ ಏರಿ ಹೊರಟರು.</p>.<p>ಕಾರ್ಮಿಕರಿಗೆ ಪ್ರಯಾಣದ ವ್ಯವಸ್ಥೆ ಮಾಡಿದ ಮೊದಲ ದಿನ ಉಂಟಾದ ಸಮಸ್ಯೆಗಳು ಮರುಕಳಿಸದಂತೆ ಕೆಎಸ್ಆರ್ಟಿಸಿ ಸಿಬ್ಬಂದಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರು.</p>.<p><strong>ಆಹಾರ ವ್ಯವಸ್ಥೆ:</strong>ನಗರದ ನಾನಾ ಭಾಗಗಳಿಂದ ಕಾಲ್ನಡಿಗೆಯಲ್ಲೇ ಬಂದು ಬಸ್ ನಿಲ್ದಾಣ ಸೇರುತ್ತಿದ್ದ ಪ್ರಯಾಣಿಕರಿಗೆ ವಿವಿಧ ಸಂಘ–ಸಂಸ್ಥೆಗಳು ಹಾಗೂ ಸಾಮಾಜಿಕ ಕಾರ್ಯಕರ್ತರ ಮೂಲಕ ಆಹಾರ ವ್ಯವಸ್ಥೆ ಮಾಡಲಾಗಿತ್ತು. ಉಚಿತವಾಗಿ ಆಹಾರ ವಿತರಿಸಲಾಯಿತು.</p>.<p><strong>ಮೂರು ದಿನಗಳಲ್ಲಿ 60 ಸಾವಿರ ಜನರ ಪ್ರಯಾಣ</strong><br />ರಾಜ್ಯದಲ್ಲಿ ಕಳೆದ ಮೂರು ದಿನಗಳಲ್ಲಿ ಸರ್ಕಾರದ ವತಿಯಿಂದ 60 ಸಾವಿರ ಕಾರ್ಮಿಕರನ್ನು ಅವರ ಸ್ವಂತ ಊರಿಗೆ ಕಳುಹಿಸಲಾಗಿದೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.</p>.<p>ರಾಜ್ಯದಲ್ಲಿ ಶನಿವಾರ 192 ಬಸ್ಗಳ ಮೂಲಕ 5,760 ಕಾರ್ಮಿಕರನ್ನು, ಭಾನುವಾರ 863 ಬಸ್ಗಳ ಮೂಲಕ 25,890 ಹಾಗೂ ಸೋಮವಾರ 941 ಬಸ್ಗಳಲ್ಲಿ 28,230 ಕಾರ್ಮಿಕರನ್ನು ತವರಿಗೆ ಕಳುಹಿಸಲಾಗಿದೆ ಎಂದು ನಿಗಮ ಹೇಳಿದೆ.</p>.<p><strong>ಉಚಿತ ಬಸ್: ಎರಡು ದಿನ ವಿಸ್ತರಣೆ</strong><br />ಮಂಗಳವಾರದವರೆಗೆ ಮಾತ್ರ ಇದ್ದ ಉಚಿತ ಬಸ್ ಸೇವೆಯನ್ನು ಸರ್ಕಾರವು ಗುರುವಾರದವರೆಗೆ ವಿಸ್ತರಿಸಿದೆ.</p>.<p>‘ವಲಸೆ ಕಾರ್ಮಿಕರ ಅನುಕೂಲಕ್ಕಾಗಿ ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ಎರಡು ದಿನ ವಿಸ್ತರಿಸಲಾಗಿದೆ. ಕಾರ್ಮಿಕರು ಅಥವಾ ಇತರೆ ಜನ ನಿಲ್ದಾಣಗಳಲ್ಲಿ ಜಮಾವಣೆಯಾಗದೆ, ನೆಮ್ಮದಿಯಿಂದ ಪ್ರಯಾಣಿಸಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.</p>.<p>ಕಾರ್ಮಿಕರಿಗಾಗಿ ಮಂಗಳವಾರ ಬೆಳಿಗೆ 9ರಿಂದ ಸಂಜೆಯ 6ರವರೆಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಇರುತ್ತದೆ ಎಂದು ನಿಗಮ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ನಗರದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಸೋಮವಾರವೂ ನೂರಾರು ಕಾರ್ಮಿಕರು ಜಮಾಯಿಸಿದ್ದರು. ಸರ್ಕಾರ ಉಚಿತ ಬಸ್ ಸೇವೆ ಒದಗಿಸಿದ್ದರಿಂದ ತವರಿಗೆ ಮರಳುವ ಉತ್ಸಾಹ ಅವರ ಮುಖದಲ್ಲಿ ಮನೆ ಮಾಡಿತ್ತು. ನಗರದಿಂದ 24 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕುಟುಂಬದೊಂದಿಗೆ ಊರಿಗೆ ಮರಳಿದರು.</p>.<p>ಕೆಲಸ ಕೊಟ್ಟ ಬೆಂಗಳೂರಿನ ಬಗ್ಗೆ ಅವರಲ್ಲಿ ಗೌರವ ಇತ್ತಾದರೂ, ಕೊರೊನಾ ಸೋಂಕಿನ ಕಾರಣದಿಂದ ಪಟ್ಟಿರುವ ಸಂಕಷ್ಟ ಅವರನ್ನು ಹೈರಾಣು ಮಾಡಿತ್ತು. ತವರೂರಿಗೆ ಹೋಗಿ ತಲುಪಿದರೆ ಸಾಕು ಎಂಬ ಭಾವನೆ ಹಲವರಲ್ಲಿತ್ತು.</p>.<p>‘ಲಾಕ್ಡೌನ್ ಅಂತೇನೋ ಚಾಲೂ ಆದಾಗಿಂದ ನಮ್ಮನ್ನ ನೋಡಿದ್ರ ಸಾಕು ಕಳ್ರನ್ನ ನೋಡ್ದಂಗ ಮಾಡ್ತಾರ. ಯಾರೂ ಹತ್ರ ಸೇರಸಾವಲ್ರು.. ಇಲ್ಲಿಗಿಂತ ಕೂಲಿ ಕಡಿಮಿ ಆದ್ರೂ ನಮ್ಮೂರಾಗ ಹೊಲ–ಮನಿ ಕೆಲಸ ಮಾಡ್ಕೊಂತ ಇರ್ತೀನಿ’ ಎಂದು ರಾಯಚೂರಿನ ಸಂಗಮೇಶಪ್ಪ ಬಸ್ ಏರಿ ಹೊರಟರು.</p>.<p>ಕಾರ್ಮಿಕರಿಗೆ ಪ್ರಯಾಣದ ವ್ಯವಸ್ಥೆ ಮಾಡಿದ ಮೊದಲ ದಿನ ಉಂಟಾದ ಸಮಸ್ಯೆಗಳು ಮರುಕಳಿಸದಂತೆ ಕೆಎಸ್ಆರ್ಟಿಸಿ ಸಿಬ್ಬಂದಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರು.</p>.<p><strong>ಆಹಾರ ವ್ಯವಸ್ಥೆ:</strong>ನಗರದ ನಾನಾ ಭಾಗಗಳಿಂದ ಕಾಲ್ನಡಿಗೆಯಲ್ಲೇ ಬಂದು ಬಸ್ ನಿಲ್ದಾಣ ಸೇರುತ್ತಿದ್ದ ಪ್ರಯಾಣಿಕರಿಗೆ ವಿವಿಧ ಸಂಘ–ಸಂಸ್ಥೆಗಳು ಹಾಗೂ ಸಾಮಾಜಿಕ ಕಾರ್ಯಕರ್ತರ ಮೂಲಕ ಆಹಾರ ವ್ಯವಸ್ಥೆ ಮಾಡಲಾಗಿತ್ತು. ಉಚಿತವಾಗಿ ಆಹಾರ ವಿತರಿಸಲಾಯಿತು.</p>.<p><strong>ಮೂರು ದಿನಗಳಲ್ಲಿ 60 ಸಾವಿರ ಜನರ ಪ್ರಯಾಣ</strong><br />ರಾಜ್ಯದಲ್ಲಿ ಕಳೆದ ಮೂರು ದಿನಗಳಲ್ಲಿ ಸರ್ಕಾರದ ವತಿಯಿಂದ 60 ಸಾವಿರ ಕಾರ್ಮಿಕರನ್ನು ಅವರ ಸ್ವಂತ ಊರಿಗೆ ಕಳುಹಿಸಲಾಗಿದೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.</p>.<p>ರಾಜ್ಯದಲ್ಲಿ ಶನಿವಾರ 192 ಬಸ್ಗಳ ಮೂಲಕ 5,760 ಕಾರ್ಮಿಕರನ್ನು, ಭಾನುವಾರ 863 ಬಸ್ಗಳ ಮೂಲಕ 25,890 ಹಾಗೂ ಸೋಮವಾರ 941 ಬಸ್ಗಳಲ್ಲಿ 28,230 ಕಾರ್ಮಿಕರನ್ನು ತವರಿಗೆ ಕಳುಹಿಸಲಾಗಿದೆ ಎಂದು ನಿಗಮ ಹೇಳಿದೆ.</p>.<p><strong>ಉಚಿತ ಬಸ್: ಎರಡು ದಿನ ವಿಸ್ತರಣೆ</strong><br />ಮಂಗಳವಾರದವರೆಗೆ ಮಾತ್ರ ಇದ್ದ ಉಚಿತ ಬಸ್ ಸೇವೆಯನ್ನು ಸರ್ಕಾರವು ಗುರುವಾರದವರೆಗೆ ವಿಸ್ತರಿಸಿದೆ.</p>.<p>‘ವಲಸೆ ಕಾರ್ಮಿಕರ ಅನುಕೂಲಕ್ಕಾಗಿ ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ಎರಡು ದಿನ ವಿಸ್ತರಿಸಲಾಗಿದೆ. ಕಾರ್ಮಿಕರು ಅಥವಾ ಇತರೆ ಜನ ನಿಲ್ದಾಣಗಳಲ್ಲಿ ಜಮಾವಣೆಯಾಗದೆ, ನೆಮ್ಮದಿಯಿಂದ ಪ್ರಯಾಣಿಸಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.</p>.<p>ಕಾರ್ಮಿಕರಿಗಾಗಿ ಮಂಗಳವಾರ ಬೆಳಿಗೆ 9ರಿಂದ ಸಂಜೆಯ 6ರವರೆಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಇರುತ್ತದೆ ಎಂದು ನಿಗಮ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>