<p><strong>ಬೆಂಗಳೂರು: </strong>ಸಿ.ಡಿ.ಪ್ರಕರಣದ ಸಂತ್ರಸ್ತೆಗಿಂತಲೂ ಅವರ ಪರ ವಕೀಲ ಕೆ.ಎನ್.ಜಗದೀಶ್ ಕುಮಾರ್ ಬಗ್ಗೆಯೇ ಹೆಚ್ಚು ಸುದ್ದಿಯಾಗುತ್ತಿದ್ದು, ಅವರ ವಕೀಲ ವೃತ್ತಿ ನೋಂದಣಿ ಬಗ್ಗೆ ಇದೀಗ ಚರ್ಚೆಯಾಗುತ್ತಿದೆ.</p>.<p>‘ಕರ್ನಾಟಕ ವಕೀಲರ ಪರಿಷತ್ನಲ್ಲಿ ಕೆ.ಎನ್. ಜಗದೀಶ್ಕುಮಾರ್ ನೋಂದಣಿ ಮಾಡಿಸಿದ್ದಾರೆಯೇ? ಇಲ್ಲ, ನೋಂದಣಿ ವರ್ಗಾವಣೆ ಮಾಡಿಕೊಂಡಿದ್ದಾರೆಯೇ ? ಇದರ ಮಾಹಿತಿ ಇದ್ದರೆ ತಿಳಿಸಿ. ಆಕಸ್ಮಾತ್ ಎಲ್ಲಾದರೂ ನೋಂದಣಿ ಮಾಡಿಸಿದ್ದರೆ, ಕರ್ನಾಟಕದಲ್ಲಿ ವಕಾಲತ್ತು ಮಾಡಲು ಬರುವುದಿಲ್ಲ’ ಎಂದು ವಕೀಲ ಎಸ್. ಬಸವರಾಜ್ ಎಂಬುವರು ಪರಿಷತ್ಗೆ ಪತ್ರ ಬರೆದಿದ್ದಾರೆ.</p>.<p>ಅದಕ್ಕೆ ಉತ್ತರಿಸಿರುವ ಪರಿಷತ್ ವ್ಯವಸ್ಥಾಪಕ ಅರುಣ್ ಪೂಜಾರ, ‘ಕೆ.ಎನ್. ಜಗದೀಶ್ಕುಮಾರ್ ನಮ್ಮ ಪರಿಷತ್ನಲ್ಲಿ ನೋಂದಣಿ ಮಾಡಿಸಿಲ್ಲ. ನೋಂದಣಿ ವರ್ಗಾವಣೆಯನ್ನೂ ಪಡೆದಿಲ್ಲ’ ಎಂದಿದ್ದಾರೆ.</p>.<p>ಇದಕ್ಕೆ ಪ್ರತಿಕ್ರಿಯಿಸಿರುವ ಜಗದೀಶ್ಕುಮಾರ್, ‘ನಾನು ದೆಹಲಿ ವಕೀಲರ ಪರಿಷತ್ ಸದಸ್ಯ. ಭಾರತೀಯ ವಕೀಲರ ಪರಿಷತ್ ಪರೀಕ್ಷೆ ಸಹ ಎದುರಿಸಿ ವಕೀಲನಾಗಲು ಅರ್ಹತೆ ಪಡೆದಿದ್ದೇನೆ. ವಕೀಲರ ಕಾಯ್ದೆ ಪ್ರಕಾರ, ದೇಶದ ಯಾವುದೇ ನ್ಯಾಯಾಲಯದಲ್ಲಿ ವಕಾಲತ್ತು ಮಾಡಬಹುದು’ ಎಂದಿದ್ದಾರೆ.</p>.<p>‘ಅತ್ಯಾಚಾರ ಸಂತ್ರಸ್ತೆ ಪರ ನಿಂತಿದ್ದಕ್ಕೆ ನನ್ನ ತೇಜೋವಧೆ ಮಾಡುವ ಕೆಲಸ ನಡೆದಿದೆ. ಇದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಸಂತ್ರಸ್ತೆಗೆ ನ್ಯಾಯ ಸಿಗುವವರೆಗೂ ಪ್ರಕರಣ ಕೈಬಿಡುವುದಿಲ್ಲ’ ಎಂದರು.</p>.<p><strong>ವಕೀಲರ ಪರಿಷತ್ನಲ್ಲಿ ಅಭಿವೃದ್ಧಿ ಸ್ಟಾಂಪ್ ಹಗರಣ’</strong><br />‘ವಕೀಲರ ಪರಿಷತ್ನಿಂದ ₹ 20 ಹಾಗೂ ₹ 30 ಅಭಿವೃದ್ಧಿ ಸ್ಟಾಂಪ್ ಮುದ್ರಿಸಲಾಗುತ್ತದೆ. ಅದನ್ನು ವಕಾಲತ್ತು ಸಮಯದಲ್ಲಿ ಲಗತ್ತಿಸಬೇಕು. ಆದರೆ, ಅದೇ ಸ್ಟಾಂಪ್ ಹೆಸರಿನಲ್ಲೇ ದೊಡ್ಡ ಹಗರಣವೇ ನಡೆದಿದೆ’ ಎಂದು ವಕೀಲರಾದ ಜಗದೀಶ್ಕುಮಾರ್ ಹಾಗೂ ಮಂಜುನಾಥ್ ಆರೋಪಿಸಿದರು.</p>.<p>ಸಾಮಾಜಿಕ ಜಾಲತಾಣದಲ್ಲಿ ನೇರಪ್ರಸಾರದಲ್ಲಿ ಮಾತನಾಡಿದ ಅವರು, ‘ವಕೀಲರಿಗೆ ಯಾವುದೇ ಸೌಕರ್ಯವಿಲ್ಲ. ಅವರ ಕಷ್ಟಕ್ಕೆ ಆರ್ಥಿಕವಾಗಿ ಸ್ಪಂದಿಸಲು ಅಭಿವೃದ್ಧಿ ಸ್ಟಾಂಪ್ ಮಾರಾಟ ಮಾಡಲಾಗುತ್ತಿದೆ. ಆದರೆ, ಸ್ಟಾಂಪ್ ಮುದ್ರಣ ಹಾಗೂ ಮಾರಾಟ ಬಗ್ಗೆ ಯಾವುದೇ ಲೆಕ್ಕ ಪರಿಶೋಧನೆಯೂ ಇದುವರೆಗೂ ಆಗಿಲ್ಲ. ಆ ಬಗ್ಗೆ ದೂರುಗಳೂ ಸಲ್ಲಿಕೆಯಾಗಿವೆ’ ಎಂದರು.</p>.<p>‘ಲಾಕ್ಡೌನ್ ವೇಳೆ ವಕೀಲರು ಕೆಲಸವಿಲ್ಲದೆ ನರಳಿದ್ದಾರೆ. ಸ್ಟಾಂಪ್ ಮಾರಾಟದ ಹಣದಿಂದ ವಕೀಲರಿಗೆ ಸಹಾಯ ಮಾಡಬಹುದಿತ್ತು. ಆದರೆ, ಪರಿಷತ್ನಿಂದ ಯಾವುದೇ ಸಹಾಯವೂ ಆಗಲಿಲ್ಲ. ಹೀಗಾದರೆ, ವಕೀಲರು ಸ್ಟಾಂಪ್ ಏಕೆ ಖರೀದಿಸಬೇಕು. ಇದರಲ್ಲಿ ದೊಡ್ಡ ಅಕ್ರಮವಿದ್ದು, ಅದನ್ನು ವಕೀಲರು ಪ್ರಶ್ನಿಸಬೇಕು’ ಎಂದೂ ಒತ್ತಾಯಿಸಿದರು.</p>.<p>‘ಸಿ.ಡಿ. ಪ್ರಕರಣ ಮುಗಿಯುತ್ತ ಬಂದಿದೆ. ಮುಗಿದ ಕೂಡಲೇ ಪರಿಷತ್ ಅಕ್ರಮಗಳ ವಿರುದ್ಧ ಹೋರಾಟ ಶುರು ಮಾಡುತ್ತೇವೆ. ನಾನು ವಕೀಲನಲ್ಲನೆಂದು ನನ್ನ ನೋಂದಣಿಯನ್ನೇ ನೀವು ಪ್ರಶ್ನಿಸಿದ್ದಿರಲ್ಲ ಬಸವರಾಜ್ ಅವರೇ, ನಿಮ್ಮ ಬಗ್ಗೆಯೂ ನಾನು ಪ್ರಶ್ನಿಸುತ್ತೇನೆ. ದಾಖಲೆ ಸಮೇತ’ ಎಂದೂ ಹೇಳಿದರು.</p>.<p>ನಕಲಿ ಸ್ಟಾಂಪ್: ವಕೀಲ ಮಂಜುನಾಥ್, ‘ನ್ಯಾಯಾಲಯದಲ್ಲಿ ನಕಲಿ ಸ್ಟಾಂಪ್ಗಳೂ ಸಿಗುತ್ತಿವೆ. ಅದು ಎಲ್ಲ ಸದಸ್ಯರಿಗೂ ಗೊತ್ತಿದೆ. ತೆಲಗಿ ರೀತಿಯಲ್ಲೇ ಈ ಹಗರಣವಿದೆ’ ಎಂದು ಆರೋಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಸಿ.ಡಿ.ಪ್ರಕರಣದ ಸಂತ್ರಸ್ತೆಗಿಂತಲೂ ಅವರ ಪರ ವಕೀಲ ಕೆ.ಎನ್.ಜಗದೀಶ್ ಕುಮಾರ್ ಬಗ್ಗೆಯೇ ಹೆಚ್ಚು ಸುದ್ದಿಯಾಗುತ್ತಿದ್ದು, ಅವರ ವಕೀಲ ವೃತ್ತಿ ನೋಂದಣಿ ಬಗ್ಗೆ ಇದೀಗ ಚರ್ಚೆಯಾಗುತ್ತಿದೆ.</p>.<p>‘ಕರ್ನಾಟಕ ವಕೀಲರ ಪರಿಷತ್ನಲ್ಲಿ ಕೆ.ಎನ್. ಜಗದೀಶ್ಕುಮಾರ್ ನೋಂದಣಿ ಮಾಡಿಸಿದ್ದಾರೆಯೇ? ಇಲ್ಲ, ನೋಂದಣಿ ವರ್ಗಾವಣೆ ಮಾಡಿಕೊಂಡಿದ್ದಾರೆಯೇ ? ಇದರ ಮಾಹಿತಿ ಇದ್ದರೆ ತಿಳಿಸಿ. ಆಕಸ್ಮಾತ್ ಎಲ್ಲಾದರೂ ನೋಂದಣಿ ಮಾಡಿಸಿದ್ದರೆ, ಕರ್ನಾಟಕದಲ್ಲಿ ವಕಾಲತ್ತು ಮಾಡಲು ಬರುವುದಿಲ್ಲ’ ಎಂದು ವಕೀಲ ಎಸ್. ಬಸವರಾಜ್ ಎಂಬುವರು ಪರಿಷತ್ಗೆ ಪತ್ರ ಬರೆದಿದ್ದಾರೆ.</p>.<p>ಅದಕ್ಕೆ ಉತ್ತರಿಸಿರುವ ಪರಿಷತ್ ವ್ಯವಸ್ಥಾಪಕ ಅರುಣ್ ಪೂಜಾರ, ‘ಕೆ.ಎನ್. ಜಗದೀಶ್ಕುಮಾರ್ ನಮ್ಮ ಪರಿಷತ್ನಲ್ಲಿ ನೋಂದಣಿ ಮಾಡಿಸಿಲ್ಲ. ನೋಂದಣಿ ವರ್ಗಾವಣೆಯನ್ನೂ ಪಡೆದಿಲ್ಲ’ ಎಂದಿದ್ದಾರೆ.</p>.<p>ಇದಕ್ಕೆ ಪ್ರತಿಕ್ರಿಯಿಸಿರುವ ಜಗದೀಶ್ಕುಮಾರ್, ‘ನಾನು ದೆಹಲಿ ವಕೀಲರ ಪರಿಷತ್ ಸದಸ್ಯ. ಭಾರತೀಯ ವಕೀಲರ ಪರಿಷತ್ ಪರೀಕ್ಷೆ ಸಹ ಎದುರಿಸಿ ವಕೀಲನಾಗಲು ಅರ್ಹತೆ ಪಡೆದಿದ್ದೇನೆ. ವಕೀಲರ ಕಾಯ್ದೆ ಪ್ರಕಾರ, ದೇಶದ ಯಾವುದೇ ನ್ಯಾಯಾಲಯದಲ್ಲಿ ವಕಾಲತ್ತು ಮಾಡಬಹುದು’ ಎಂದಿದ್ದಾರೆ.</p>.<p>‘ಅತ್ಯಾಚಾರ ಸಂತ್ರಸ್ತೆ ಪರ ನಿಂತಿದ್ದಕ್ಕೆ ನನ್ನ ತೇಜೋವಧೆ ಮಾಡುವ ಕೆಲಸ ನಡೆದಿದೆ. ಇದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಸಂತ್ರಸ್ತೆಗೆ ನ್ಯಾಯ ಸಿಗುವವರೆಗೂ ಪ್ರಕರಣ ಕೈಬಿಡುವುದಿಲ್ಲ’ ಎಂದರು.</p>.<p><strong>ವಕೀಲರ ಪರಿಷತ್ನಲ್ಲಿ ಅಭಿವೃದ್ಧಿ ಸ್ಟಾಂಪ್ ಹಗರಣ’</strong><br />‘ವಕೀಲರ ಪರಿಷತ್ನಿಂದ ₹ 20 ಹಾಗೂ ₹ 30 ಅಭಿವೃದ್ಧಿ ಸ್ಟಾಂಪ್ ಮುದ್ರಿಸಲಾಗುತ್ತದೆ. ಅದನ್ನು ವಕಾಲತ್ತು ಸಮಯದಲ್ಲಿ ಲಗತ್ತಿಸಬೇಕು. ಆದರೆ, ಅದೇ ಸ್ಟಾಂಪ್ ಹೆಸರಿನಲ್ಲೇ ದೊಡ್ಡ ಹಗರಣವೇ ನಡೆದಿದೆ’ ಎಂದು ವಕೀಲರಾದ ಜಗದೀಶ್ಕುಮಾರ್ ಹಾಗೂ ಮಂಜುನಾಥ್ ಆರೋಪಿಸಿದರು.</p>.<p>ಸಾಮಾಜಿಕ ಜಾಲತಾಣದಲ್ಲಿ ನೇರಪ್ರಸಾರದಲ್ಲಿ ಮಾತನಾಡಿದ ಅವರು, ‘ವಕೀಲರಿಗೆ ಯಾವುದೇ ಸೌಕರ್ಯವಿಲ್ಲ. ಅವರ ಕಷ್ಟಕ್ಕೆ ಆರ್ಥಿಕವಾಗಿ ಸ್ಪಂದಿಸಲು ಅಭಿವೃದ್ಧಿ ಸ್ಟಾಂಪ್ ಮಾರಾಟ ಮಾಡಲಾಗುತ್ತಿದೆ. ಆದರೆ, ಸ್ಟಾಂಪ್ ಮುದ್ರಣ ಹಾಗೂ ಮಾರಾಟ ಬಗ್ಗೆ ಯಾವುದೇ ಲೆಕ್ಕ ಪರಿಶೋಧನೆಯೂ ಇದುವರೆಗೂ ಆಗಿಲ್ಲ. ಆ ಬಗ್ಗೆ ದೂರುಗಳೂ ಸಲ್ಲಿಕೆಯಾಗಿವೆ’ ಎಂದರು.</p>.<p>‘ಲಾಕ್ಡೌನ್ ವೇಳೆ ವಕೀಲರು ಕೆಲಸವಿಲ್ಲದೆ ನರಳಿದ್ದಾರೆ. ಸ್ಟಾಂಪ್ ಮಾರಾಟದ ಹಣದಿಂದ ವಕೀಲರಿಗೆ ಸಹಾಯ ಮಾಡಬಹುದಿತ್ತು. ಆದರೆ, ಪರಿಷತ್ನಿಂದ ಯಾವುದೇ ಸಹಾಯವೂ ಆಗಲಿಲ್ಲ. ಹೀಗಾದರೆ, ವಕೀಲರು ಸ್ಟಾಂಪ್ ಏಕೆ ಖರೀದಿಸಬೇಕು. ಇದರಲ್ಲಿ ದೊಡ್ಡ ಅಕ್ರಮವಿದ್ದು, ಅದನ್ನು ವಕೀಲರು ಪ್ರಶ್ನಿಸಬೇಕು’ ಎಂದೂ ಒತ್ತಾಯಿಸಿದರು.</p>.<p>‘ಸಿ.ಡಿ. ಪ್ರಕರಣ ಮುಗಿಯುತ್ತ ಬಂದಿದೆ. ಮುಗಿದ ಕೂಡಲೇ ಪರಿಷತ್ ಅಕ್ರಮಗಳ ವಿರುದ್ಧ ಹೋರಾಟ ಶುರು ಮಾಡುತ್ತೇವೆ. ನಾನು ವಕೀಲನಲ್ಲನೆಂದು ನನ್ನ ನೋಂದಣಿಯನ್ನೇ ನೀವು ಪ್ರಶ್ನಿಸಿದ್ದಿರಲ್ಲ ಬಸವರಾಜ್ ಅವರೇ, ನಿಮ್ಮ ಬಗ್ಗೆಯೂ ನಾನು ಪ್ರಶ್ನಿಸುತ್ತೇನೆ. ದಾಖಲೆ ಸಮೇತ’ ಎಂದೂ ಹೇಳಿದರು.</p>.<p>ನಕಲಿ ಸ್ಟಾಂಪ್: ವಕೀಲ ಮಂಜುನಾಥ್, ‘ನ್ಯಾಯಾಲಯದಲ್ಲಿ ನಕಲಿ ಸ್ಟಾಂಪ್ಗಳೂ ಸಿಗುತ್ತಿವೆ. ಅದು ಎಲ್ಲ ಸದಸ್ಯರಿಗೂ ಗೊತ್ತಿದೆ. ತೆಲಗಿ ರೀತಿಯಲ್ಲೇ ಈ ಹಗರಣವಿದೆ’ ಎಂದು ಆರೋಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>