ರಾಜರಾಜೇಶ್ವರಿನಗರ: ನಗರದ ಐತಿಹಾಸಿಕ ಶ್ರೀಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಬುಧವಾರ ನಡೆಯಲಿದೆ. ಜಾತ್ರೆಯ ಅಂಗವಾಗಿಸಂಕ್ರಾಂತಿ ಸಂತೆ, ಗಿರಿಜಾ ಕಲ್ಯಾಣೋತ್ಸವ, ಉಚಿತ ಕಡಲೆಕಾಯಿ ಪರಿಷೆಯನ್ನೂ ಹಮ್ಮಿಕೊಳ್ಳಲಾಗಿದೆ.ಸೋಂಪುರ, ಚನ್ನವೀರಯ್ಯನಪಾಳ್ಯ, ವರಾಹಸಂದ್ರದಲ್ಲಿ ಈ ಕಾರ್ಯಕ್ರಮಗಳು ನಡೆಯಲಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ.