<p><strong>ಬೆಂಗಳೂರು</strong>: ‘ಬದುಕಿನ ಸಂಕಷ್ಟದ ದಿನಗಳಲ್ಲಿ ಕವಿತೆಗಳು ಕೈಹಿಡಿದು, ಬದುಕಿಗೆ ಬೆಳಕಾದವು’ ಎಂದು ಲೇಖಕಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮನದಾಳ ಹಂಚಿಕೊಂಡರು. </p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಭಾಗವಹಿಸಿದ ಅವರು, ಬದುಕಿನ ವಿವಿಧ ಘಟನೆಗಳನ್ನು ಸ್ಮರಿಸಿಕೊಂಡರು. </p>.<p>‘ಮದುವೆಯಾಗಿ ಐದು ವರ್ಷಗಳು ಕಳೆಯುವಷ್ಟರಲ್ಲಿಯೇ ನನ್ನ ಬಾಳಿನಲ್ಲಿ ಬಿರುಗಾಳಿ ಎದ್ದು, ದಾಂಪತ್ಯ ಜೀವನ ಕೊನೆಗೊಂಡಿತು. ಆ ವೇಳೆ ಆಘಾತಕ್ಕೆ ಒಳಗಾಗಿದ್ದೆ. ಆದರೆ, ಎದೆಗುಂದಲಿಲ್ಲ. ಕೋರ್ಟ್, ಕಚೇರಿಗೆ ಅಲೆಯದೆ ಎರಡೂ ಮಕ್ಕಳನ್ನು ಸಾಕಿದೆ. ದುಃಖದಿಂದ ಹೊರಬರಲು ಕವಿತೆ ರಚನೆ ಮಾಡಿದೆ. ಹೀಗಾಗಿ, 32ನೇ ವಯಸ್ಸಿಗೆ ಕವಿತೆ ರಚನೆ ಮಾಡಲು ಪ್ರಾರಂಭಿಸಿದೆ. ಸಾಹಿತ್ಯ ರಚನೆ ನನ್ನ ಕೈಹಿಡಿದು ಬೆಳೆಸಿತು’ ಎಂದು ಹೇಳಿದರು. </p>.<p>‘ನನ್ನ ಬಾಲ್ಯ ಕೂಡ ಕಷ್ಟದಿಂದ ಕೂಡಿತ್ತು. ನಮ್ಮವ್ವ ನನಗೆ ಮೂರು ವರ್ಷಗಳು ಇದ್ದಾಗ ತೀರಿ ಹೋದರು. ತಂದೆ ಮತ್ತೊಂದು ಮದುವೆ ಆದರು. ನಾವು ಒಂಬತ್ತು ಜನ ಮಕ್ಕಳು. ನಾನು ಅಜ್ಜಿಯ ಆಸರೆಯಲ್ಲಿ ಬೆಳೆದೆ. ಚಂದಮಾಮ ಪುಸ್ತಕಗಳು ಓದಿನ ಆಸಕ್ತಿ ಬೆಳೆಸಿದವು’ ಎಂದರು.</p>.<p>‘ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಹುದ್ದೆಗೆ ಸರ್ಕಾರ ನನ್ನನ್ನು ನೇಮಕ ಮಾಡಿದಾಗ ಹಲವು ಪುರುಷ ಸಾಹಿತಿಗಳು ಇವಳು ಹೆಣ್ಣು, ಇವಳಿಂದ ಏನು ಸಾಧ್ಯ ಎಂಬ ರೀತಿಯಲ್ಲಿ ಮಾತನಾಡಿದ್ದರು. ಆದರೆ, ಎದೆಗುಂದದೆ ಇಡೀ ರಾಜ್ಯ ಸುತ್ತಿ ಕಾರ್ಯಕ್ರಮ ರೂಪಿಸಿದೆ’ ಎಂದು ಸ್ಮರಿಸಿಕೊಂಡರು. </p>.<p>‘ಮೋಸ, ದುಃಖಗಳನ್ನ ಮೀರಿ ಬೆಳೆದು ನಿಂತಿದ್ದೇನೆ. ಇದಕ್ಕೆ ನನ್ನಲ್ಲಿರುವ ಜೀವನೋತ್ಸಾಹ ಕಾರಣ. ಸಾಹಿತ್ಯ ರಚನೆ ಮಾಡಿದರೂ ಪುಸ್ತಕ ಪ್ರಕಾಶಕರು ಸಿಗುತ್ತಿರಲಿಲ್ಲ. ಹೀಗಾಗಿ, ಓದುಗರಿಗೆ ನಾನು ಹೆಚ್ಚು ತಲುಪಲು ಸಾಧ್ಯವಾಗಲಿಲ್ಲ’ ಎಂದು ಬೇಸರಪಟ್ಟರು.</p>.<p>ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರಾದ ಬಲವಂತರಾವ್ ಪಾಟೀಲ, ಬನಶಂಕರಿ ವಿ. ಅಂಗಡಿ ಉಪಸ್ಥಿತರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಬದುಕಿನ ಸಂಕಷ್ಟದ ದಿನಗಳಲ್ಲಿ ಕವಿತೆಗಳು ಕೈಹಿಡಿದು, ಬದುಕಿಗೆ ಬೆಳಕಾದವು’ ಎಂದು ಲೇಖಕಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮನದಾಳ ಹಂಚಿಕೊಂಡರು. </p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಭಾಗವಹಿಸಿದ ಅವರು, ಬದುಕಿನ ವಿವಿಧ ಘಟನೆಗಳನ್ನು ಸ್ಮರಿಸಿಕೊಂಡರು. </p>.<p>‘ಮದುವೆಯಾಗಿ ಐದು ವರ್ಷಗಳು ಕಳೆಯುವಷ್ಟರಲ್ಲಿಯೇ ನನ್ನ ಬಾಳಿನಲ್ಲಿ ಬಿರುಗಾಳಿ ಎದ್ದು, ದಾಂಪತ್ಯ ಜೀವನ ಕೊನೆಗೊಂಡಿತು. ಆ ವೇಳೆ ಆಘಾತಕ್ಕೆ ಒಳಗಾಗಿದ್ದೆ. ಆದರೆ, ಎದೆಗುಂದಲಿಲ್ಲ. ಕೋರ್ಟ್, ಕಚೇರಿಗೆ ಅಲೆಯದೆ ಎರಡೂ ಮಕ್ಕಳನ್ನು ಸಾಕಿದೆ. ದುಃಖದಿಂದ ಹೊರಬರಲು ಕವಿತೆ ರಚನೆ ಮಾಡಿದೆ. ಹೀಗಾಗಿ, 32ನೇ ವಯಸ್ಸಿಗೆ ಕವಿತೆ ರಚನೆ ಮಾಡಲು ಪ್ರಾರಂಭಿಸಿದೆ. ಸಾಹಿತ್ಯ ರಚನೆ ನನ್ನ ಕೈಹಿಡಿದು ಬೆಳೆಸಿತು’ ಎಂದು ಹೇಳಿದರು. </p>.<p>‘ನನ್ನ ಬಾಲ್ಯ ಕೂಡ ಕಷ್ಟದಿಂದ ಕೂಡಿತ್ತು. ನಮ್ಮವ್ವ ನನಗೆ ಮೂರು ವರ್ಷಗಳು ಇದ್ದಾಗ ತೀರಿ ಹೋದರು. ತಂದೆ ಮತ್ತೊಂದು ಮದುವೆ ಆದರು. ನಾವು ಒಂಬತ್ತು ಜನ ಮಕ್ಕಳು. ನಾನು ಅಜ್ಜಿಯ ಆಸರೆಯಲ್ಲಿ ಬೆಳೆದೆ. ಚಂದಮಾಮ ಪುಸ್ತಕಗಳು ಓದಿನ ಆಸಕ್ತಿ ಬೆಳೆಸಿದವು’ ಎಂದರು.</p>.<p>‘ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಹುದ್ದೆಗೆ ಸರ್ಕಾರ ನನ್ನನ್ನು ನೇಮಕ ಮಾಡಿದಾಗ ಹಲವು ಪುರುಷ ಸಾಹಿತಿಗಳು ಇವಳು ಹೆಣ್ಣು, ಇವಳಿಂದ ಏನು ಸಾಧ್ಯ ಎಂಬ ರೀತಿಯಲ್ಲಿ ಮಾತನಾಡಿದ್ದರು. ಆದರೆ, ಎದೆಗುಂದದೆ ಇಡೀ ರಾಜ್ಯ ಸುತ್ತಿ ಕಾರ್ಯಕ್ರಮ ರೂಪಿಸಿದೆ’ ಎಂದು ಸ್ಮರಿಸಿಕೊಂಡರು. </p>.<p>‘ಮೋಸ, ದುಃಖಗಳನ್ನ ಮೀರಿ ಬೆಳೆದು ನಿಂತಿದ್ದೇನೆ. ಇದಕ್ಕೆ ನನ್ನಲ್ಲಿರುವ ಜೀವನೋತ್ಸಾಹ ಕಾರಣ. ಸಾಹಿತ್ಯ ರಚನೆ ಮಾಡಿದರೂ ಪುಸ್ತಕ ಪ್ರಕಾಶಕರು ಸಿಗುತ್ತಿರಲಿಲ್ಲ. ಹೀಗಾಗಿ, ಓದುಗರಿಗೆ ನಾನು ಹೆಚ್ಚು ತಲುಪಲು ಸಾಧ್ಯವಾಗಲಿಲ್ಲ’ ಎಂದು ಬೇಸರಪಟ್ಟರು.</p>.<p>ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರಾದ ಬಲವಂತರಾವ್ ಪಾಟೀಲ, ಬನಶಂಕರಿ ವಿ. ಅಂಗಡಿ ಉಪಸ್ಥಿತರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>