<p><strong>ಬೆಂಗಳೂರು</strong>: ‘ರಾಜ್ಯದಲ್ಲಿ ಪ್ರಕಾಶಕರಿಗೆ ಸರ್ಕಾರದ ಪ್ರೋತ್ಸಾಹ ಸಿಗುತ್ತಿಲ್ಲ, ಗ್ರಂಥಾಲಯ ಇಲಾಖೆಯೂ ಕಣ್ಮುಚ್ಚಿ ಕುಳಿತಿದೆ. ಇದರಿಂದಾಗಿ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಸಾಹಿತಿ ಮಲ್ಲೇಪುರಂ ಜಿ.ವೆಂಕಟೇಶ್ ಬೇಸರ ವ್ಯಕ್ತಪಡಿಸಿದರು.</p><p>ಜಯನಗರದ ಚಂದ್ರಗುಪ್ತ ಮೌರ್ಯ ಮೈದಾನದಲ್ಲಿ ಆಯೋಜಿಸಿದ್ದ ಮೂರು ದಿನಗಳ ವೀರಲೋಕ ಪುಸ್ತಕ ಸಂತೆಯ ಸಮಾರೋಪ ಸಮಾರಂಭದಲ್ಲಿ ಅವರು ಭಾನುವಾರ ಮಾತನಾಡಿದರು.</p>.<p>‘ಯಾವುದೇ ವ್ಯಕ್ತಿಯ ವ್ಯಕ್ತಿತ್ವದಲ್ಲಿ ಬದಲಾವಣೆ ಕಾಣಬೇಕೆಂದರೆ ಆತನಿಗೆ ಪುಸ್ತಕಗಳು ಸಂಗಾತಿಯಾಗಿರಬೇಕು. ಪುಸ್ತಕಗಳ ಪ್ರಕಟಣೆಗೆ ಈಗ ಹೆಚ್ಚು ಅವಕಾಶವಂತೂ ಇದೆ. ಆದರೆ, ಪುಸ್ತಕೋದ್ಯಮಕ್ಕೆ ಬೆಂಬಲವಾಗಿ ನಿಲ್ಲಬೇಕಾದ ಗ್ರಂಥಾಲಯ ಇಲಾಖೆ ಕೈ ಕಟ್ಟಿ ಕುಳಿತುಕೊಂಡಿರುವುದು ದೌರ್ಭಾಗ್ಯ’ ಎಂದರು.</p>.<p>‘ಈಗ ಓದಲು ಡಿಜಿಟಲ್ ವೇದಿಕೆ ಕೂಡ ಅವಕಾಶ ನೀಡಿದೆ. ಐ ಪಾಡ್ಗಳನ್ನು ಹಿಡಿದು ಓದಬಹುದಾದರೂ ಕೈಯಲ್ಲಿ ಪುಸ್ತಕ ಹಿಡಿದುಕೊಂಡು ಓದುವುದರ ಖುಷಿಯೇ ಬೇರೆ. ಅಂತಹ ಓದುವ ಖುಷಿ ಹೆಚ್ಚಿಸುವ ಪ್ರಯತ್ನಗಳು ಸಂತೆಗಳಿಂದ ಆಗುತ್ತಿದೆ. ಪ್ರಕಾಶಕರಿಗೆ ವೇದಿಕೆ ಕಲ್ಪಿಸುವ ವೀರಲೋಕ ಸಂಸ್ಥೆಯ ಪ್ರಯತ್ನ ಶ್ಲಾಘನೀಯ’ ಎಂದು ತಿಳಿಸಿದರು.</p>.<p>ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ‘ಸಂತೆಗಳು ಬಗೆಬಗೆಯ ರೂಪದಲ್ಲಿ ಜನರ ಮುಂದೆ ಬರುತ್ತಿವೆ. ಇದರಲ್ಲಿ ಪುಸ್ತಕ ಸಂತೆಯ ಮೂಲಕ ಜನರಲ್ಲಿ ಓದುವ ಸಂಸ್ಕೃತಿ ಬೆಳೆಸುವ ಈ ಪ್ರಯತ್ನ ಸ್ತುತ್ಯರ್ಹವಾದದ್ದು. ಕನ್ನಡದ ಕವಿರಾಜ ಮಾರ್ಗ 8ನೇ ಶತಮಾನದಲ್ಲಿಯೇ ಪ್ರಕಟಗೊಂಡ ಕೃತಿ. ಅದಕ್ಕಿಂತ ಮೊದಲು ಕನ್ನಡ ಇತ್ತು ಎನ್ನುವ ಇತಿಹಾಸ ನೋಡಿದ್ದೇವೆ. ಪುಸ್ತಕಗಳನ್ನು ಜನರಿಗೆ ತಲುಪಿಸುವ ಇಂತಹ ಪ್ರಯತ್ನಗಳು ಹೆಚ್ಚಬೇಕು’ ಎಂದು ಸಲಹೆ ನೀಡಿದರು.</p>.<p>ಶಾಸಕ ಸಿ.ಕೆ.ರಾಮಮೂರ್ತಿ, ವೀರಕಪುತ್ರ ಶ್ರೀನಿವಾಸ್ ಉಪಸ್ಥಿತರಿದ್ದರು. ಲೇಖಕರಾದ ನಾಗರಾಜ ವಸ್ತಾರೆ ಅವರ ’ಹನ್ನೊಂದು ಮತ್ತೊಂದು‘, ಬಿ.ಯು. ಗೀತಾ ಅವರ ’ಹಾಲಲ್ಲಿ ಕೆನೆಯಾಗಿ‘, ರವಿಕೃಷ್ಣಾರೆಡ್ಡಿ ಅವರ ’ಅಮೆರಿಕದಿಂದ ರವಿ‘, ರಾಜು ಅಡಕಳ್ಳಿ ಅವರ ’ರಸಗುಲ್ಲಾ‘ ಕೃತಿಗಳನ್ನು ಜನಾರ್ಪಣೆಗೊಳಿಸಲಾಯಿತು. </p>.<p>ವಿವಿಧ ಪ್ರಕಾಶನಗಳಿಗೆ ಮುದ್ರಣ, ಒಳಪುಟ ವಿನ್ಯಾಸದ ಗೌರವಧನ ನೀಡಲಾಯಿತು. ನಂತರ ರೇವಾ ರಂಗ ಅಧ್ಯಯನ ಕೇಂದ್ರದವರು ನಂದಕುಮಾರ್ ಅನ್ನಕ್ಕನವರ್ ಅವರ ನಿರ್ದೇಶನದಲ್ಲಿ ದರ್ಶನಂ ನಾಟಕ ಪ್ರದರ್ಶನ ಮಾಡಿದರು.</p>.<p>ಬೀದರ್ನಲ್ಲಿ ಮುಂದಿನ ಪುಸ್ತಕ ಸಂತೆ: ಮುಂದಿನ ಪುಸ್ತಕ ಸಂತೆಯನ್ನು 2026ರ ಜನವರಿ 24, 25, 26ರಂದು ಬೀದರ್ನಲ್ಲಿ ಆಯೋಜಿಸಲಾಗುವುದು ಎಂದು ಪ್ರಕಾಶಕರ ಸಭೆಯಲ್ಲಿ ಬೀದರ್ನ ಭಾಲ್ಕಿ ಕನ್ನಡ ಮಠದ ಗುರು ಬಸವ ಪಟ್ಟದೇವರು ತಿಳಿಸಿದರು.</p>.<p><strong>₹4 ಕೋಟಿ ವಹಿವಾಟು</strong></p><p> ‘ವೀರಲೋಕ ಪುಸ್ತಕ ಸಂತೆಗೆ ಬೆಂಗಳೂರು ಮಾತ್ರವಲ್ಲದೇ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ 200ಕ್ಕೂ ಹೆಚ್ಚು ಪ್ರಕಾಶಕರು 2 ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ಇರಿಸಿದ್ದರು. ಇದಲ್ಲದೇ ಇತರೆ ಮಳಿಗೆಗಳೂ ಇದ್ದವು. ಹೆಚ್ಚಿನ ಪುಸ್ತಕ ಮಳಿಗೆಯವರು ₹5 ಲಕ್ಷದಿಂದ ₹11 ಲಕ್ಷದವರೆಗೂ ವಹಿವಾಟು ನಡೆಸಿದ್ದಾರೆ. ಒಟ್ಟಾರೆ ₹4 ಕೋಟಿವರೆಗೂ ವಹಿವಾಟು ಆಗಿರುವ ಅಂದಾಜಿದೆ’ ಎಂದು ವೀರಕಪುತ್ರ ಶ್ರೀನಿವಾಸ್ ತಿಳಿಸಿದರು.</p>.<p><strong>ಪ್ರಮುಖರ ಸಂವಾದ</strong></p><p> ಮೂರನೇ ದಿನವೂ ಪ್ರಮುಖ ಲೇಖಕರೊಂದಿಗೆ ಸಂವಾದವಿತ್ತು. ಅಬ್ದುಲ್ ರಶೀದ್ ಪಿ.ಚಂದ್ರಿಕಾ ಶತಾವಧಾನಿ ಗಣೇಶ್ ಶರಣು ಹುಲ್ಲೂರು ಸಂವಾದದಲ್ಲಿ ಭಾಗಿಯಾದರು. ಓದುಗರು ಲೇಖಕರ ವಿಭಾಗದಲ್ಲೂ ಲೇಖಕರು ಪಾಲ್ಗೊಂಡರು. ಕೊನೆ ದಿನವೂ ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕ ಪ್ರೇಮಿಗಳು ಮೇಳಕ್ಕೆ ಆಗಮಿಸಿ ಪುಸ್ತಕ ಖರೀದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ರಾಜ್ಯದಲ್ಲಿ ಪ್ರಕಾಶಕರಿಗೆ ಸರ್ಕಾರದ ಪ್ರೋತ್ಸಾಹ ಸಿಗುತ್ತಿಲ್ಲ, ಗ್ರಂಥಾಲಯ ಇಲಾಖೆಯೂ ಕಣ್ಮುಚ್ಚಿ ಕುಳಿತಿದೆ. ಇದರಿಂದಾಗಿ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಸಾಹಿತಿ ಮಲ್ಲೇಪುರಂ ಜಿ.ವೆಂಕಟೇಶ್ ಬೇಸರ ವ್ಯಕ್ತಪಡಿಸಿದರು.</p><p>ಜಯನಗರದ ಚಂದ್ರಗುಪ್ತ ಮೌರ್ಯ ಮೈದಾನದಲ್ಲಿ ಆಯೋಜಿಸಿದ್ದ ಮೂರು ದಿನಗಳ ವೀರಲೋಕ ಪುಸ್ತಕ ಸಂತೆಯ ಸಮಾರೋಪ ಸಮಾರಂಭದಲ್ಲಿ ಅವರು ಭಾನುವಾರ ಮಾತನಾಡಿದರು.</p>.<p>‘ಯಾವುದೇ ವ್ಯಕ್ತಿಯ ವ್ಯಕ್ತಿತ್ವದಲ್ಲಿ ಬದಲಾವಣೆ ಕಾಣಬೇಕೆಂದರೆ ಆತನಿಗೆ ಪುಸ್ತಕಗಳು ಸಂಗಾತಿಯಾಗಿರಬೇಕು. ಪುಸ್ತಕಗಳ ಪ್ರಕಟಣೆಗೆ ಈಗ ಹೆಚ್ಚು ಅವಕಾಶವಂತೂ ಇದೆ. ಆದರೆ, ಪುಸ್ತಕೋದ್ಯಮಕ್ಕೆ ಬೆಂಬಲವಾಗಿ ನಿಲ್ಲಬೇಕಾದ ಗ್ರಂಥಾಲಯ ಇಲಾಖೆ ಕೈ ಕಟ್ಟಿ ಕುಳಿತುಕೊಂಡಿರುವುದು ದೌರ್ಭಾಗ್ಯ’ ಎಂದರು.</p>.<p>‘ಈಗ ಓದಲು ಡಿಜಿಟಲ್ ವೇದಿಕೆ ಕೂಡ ಅವಕಾಶ ನೀಡಿದೆ. ಐ ಪಾಡ್ಗಳನ್ನು ಹಿಡಿದು ಓದಬಹುದಾದರೂ ಕೈಯಲ್ಲಿ ಪುಸ್ತಕ ಹಿಡಿದುಕೊಂಡು ಓದುವುದರ ಖುಷಿಯೇ ಬೇರೆ. ಅಂತಹ ಓದುವ ಖುಷಿ ಹೆಚ್ಚಿಸುವ ಪ್ರಯತ್ನಗಳು ಸಂತೆಗಳಿಂದ ಆಗುತ್ತಿದೆ. ಪ್ರಕಾಶಕರಿಗೆ ವೇದಿಕೆ ಕಲ್ಪಿಸುವ ವೀರಲೋಕ ಸಂಸ್ಥೆಯ ಪ್ರಯತ್ನ ಶ್ಲಾಘನೀಯ’ ಎಂದು ತಿಳಿಸಿದರು.</p>.<p>ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ‘ಸಂತೆಗಳು ಬಗೆಬಗೆಯ ರೂಪದಲ್ಲಿ ಜನರ ಮುಂದೆ ಬರುತ್ತಿವೆ. ಇದರಲ್ಲಿ ಪುಸ್ತಕ ಸಂತೆಯ ಮೂಲಕ ಜನರಲ್ಲಿ ಓದುವ ಸಂಸ್ಕೃತಿ ಬೆಳೆಸುವ ಈ ಪ್ರಯತ್ನ ಸ್ತುತ್ಯರ್ಹವಾದದ್ದು. ಕನ್ನಡದ ಕವಿರಾಜ ಮಾರ್ಗ 8ನೇ ಶತಮಾನದಲ್ಲಿಯೇ ಪ್ರಕಟಗೊಂಡ ಕೃತಿ. ಅದಕ್ಕಿಂತ ಮೊದಲು ಕನ್ನಡ ಇತ್ತು ಎನ್ನುವ ಇತಿಹಾಸ ನೋಡಿದ್ದೇವೆ. ಪುಸ್ತಕಗಳನ್ನು ಜನರಿಗೆ ತಲುಪಿಸುವ ಇಂತಹ ಪ್ರಯತ್ನಗಳು ಹೆಚ್ಚಬೇಕು’ ಎಂದು ಸಲಹೆ ನೀಡಿದರು.</p>.<p>ಶಾಸಕ ಸಿ.ಕೆ.ರಾಮಮೂರ್ತಿ, ವೀರಕಪುತ್ರ ಶ್ರೀನಿವಾಸ್ ಉಪಸ್ಥಿತರಿದ್ದರು. ಲೇಖಕರಾದ ನಾಗರಾಜ ವಸ್ತಾರೆ ಅವರ ’ಹನ್ನೊಂದು ಮತ್ತೊಂದು‘, ಬಿ.ಯು. ಗೀತಾ ಅವರ ’ಹಾಲಲ್ಲಿ ಕೆನೆಯಾಗಿ‘, ರವಿಕೃಷ್ಣಾರೆಡ್ಡಿ ಅವರ ’ಅಮೆರಿಕದಿಂದ ರವಿ‘, ರಾಜು ಅಡಕಳ್ಳಿ ಅವರ ’ರಸಗುಲ್ಲಾ‘ ಕೃತಿಗಳನ್ನು ಜನಾರ್ಪಣೆಗೊಳಿಸಲಾಯಿತು. </p>.<p>ವಿವಿಧ ಪ್ರಕಾಶನಗಳಿಗೆ ಮುದ್ರಣ, ಒಳಪುಟ ವಿನ್ಯಾಸದ ಗೌರವಧನ ನೀಡಲಾಯಿತು. ನಂತರ ರೇವಾ ರಂಗ ಅಧ್ಯಯನ ಕೇಂದ್ರದವರು ನಂದಕುಮಾರ್ ಅನ್ನಕ್ಕನವರ್ ಅವರ ನಿರ್ದೇಶನದಲ್ಲಿ ದರ್ಶನಂ ನಾಟಕ ಪ್ರದರ್ಶನ ಮಾಡಿದರು.</p>.<p>ಬೀದರ್ನಲ್ಲಿ ಮುಂದಿನ ಪುಸ್ತಕ ಸಂತೆ: ಮುಂದಿನ ಪುಸ್ತಕ ಸಂತೆಯನ್ನು 2026ರ ಜನವರಿ 24, 25, 26ರಂದು ಬೀದರ್ನಲ್ಲಿ ಆಯೋಜಿಸಲಾಗುವುದು ಎಂದು ಪ್ರಕಾಶಕರ ಸಭೆಯಲ್ಲಿ ಬೀದರ್ನ ಭಾಲ್ಕಿ ಕನ್ನಡ ಮಠದ ಗುರು ಬಸವ ಪಟ್ಟದೇವರು ತಿಳಿಸಿದರು.</p>.<p><strong>₹4 ಕೋಟಿ ವಹಿವಾಟು</strong></p><p> ‘ವೀರಲೋಕ ಪುಸ್ತಕ ಸಂತೆಗೆ ಬೆಂಗಳೂರು ಮಾತ್ರವಲ್ಲದೇ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ 200ಕ್ಕೂ ಹೆಚ್ಚು ಪ್ರಕಾಶಕರು 2 ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ಇರಿಸಿದ್ದರು. ಇದಲ್ಲದೇ ಇತರೆ ಮಳಿಗೆಗಳೂ ಇದ್ದವು. ಹೆಚ್ಚಿನ ಪುಸ್ತಕ ಮಳಿಗೆಯವರು ₹5 ಲಕ್ಷದಿಂದ ₹11 ಲಕ್ಷದವರೆಗೂ ವಹಿವಾಟು ನಡೆಸಿದ್ದಾರೆ. ಒಟ್ಟಾರೆ ₹4 ಕೋಟಿವರೆಗೂ ವಹಿವಾಟು ಆಗಿರುವ ಅಂದಾಜಿದೆ’ ಎಂದು ವೀರಕಪುತ್ರ ಶ್ರೀನಿವಾಸ್ ತಿಳಿಸಿದರು.</p>.<p><strong>ಪ್ರಮುಖರ ಸಂವಾದ</strong></p><p> ಮೂರನೇ ದಿನವೂ ಪ್ರಮುಖ ಲೇಖಕರೊಂದಿಗೆ ಸಂವಾದವಿತ್ತು. ಅಬ್ದುಲ್ ರಶೀದ್ ಪಿ.ಚಂದ್ರಿಕಾ ಶತಾವಧಾನಿ ಗಣೇಶ್ ಶರಣು ಹುಲ್ಲೂರು ಸಂವಾದದಲ್ಲಿ ಭಾಗಿಯಾದರು. ಓದುಗರು ಲೇಖಕರ ವಿಭಾಗದಲ್ಲೂ ಲೇಖಕರು ಪಾಲ್ಗೊಂಡರು. ಕೊನೆ ದಿನವೂ ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕ ಪ್ರೇಮಿಗಳು ಮೇಳಕ್ಕೆ ಆಗಮಿಸಿ ಪುಸ್ತಕ ಖರೀದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>