‘ಮಸೀದ್–ಒ–ಮದರಸಾ ನೂರ್–ಇಲಾಹಿ ಟ್ರಸ್ಟ್ ಅಧ್ಯಕ್ಷರು, ನಕ್ಷೆ ಇಲ್ಲದೇ ಮಸೀದಿ ಕಟ್ಟಡವನ್ನು ಅನಧಿಕೃತವಾಗಿ ನಿರ್ಮಾಣ ಮಾಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಬಿಬಿಎಂಪಿ ರಾಜರಾಜೇಶ್ವರಿನಗರದ ಸಹಾಯಕ ಎಂಜಿನಿಯರ್, ಕೆಎಂಸಿ ಕಾಯ್ದೆ ಪ್ರಕಾರ ಮಸೀದಿ ಕಟ್ಟಡವನ್ನು ತೆರವುಗೊಳಿಸುವಂತೆ ಆದೇಶ ಹೊರಡಿಸಿದ್ದರು. ಈ ಸಂಗತಿಯನ್ನು ಉಮೇಶ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ’ ಎಂದು ತಿಳಿಸಿದರು.