‘ಶಸ್ತ್ರಚಿಕಿತ್ಸೆ ನಡೆಸಿದ್ದ ವೈದ್ಯರು ಹಾಗೂ ಸಿಬ್ಬಂದಿ ವೈಫಲ್ಯದಿಂದಲೇ ತಮ್ಮ ಪತಿ ರುದ್ರೇಶ್ ಸೇರಿದಂತೆ ಹಲವು ರೋಗಿಗಳಿಗೆ ದೃಷ್ಟಿ ಬಂದಿಲ್ಲ’ ಎಂದು ಆರೋಪಿಸಿ ಸುಜಾತ ಎಂಬುವರು ದೂರು ನೀಡಿದ್ದರು. ನಿರ್ಲಕ್ಷ್ಯ (ಐಪಿಸಿ 338) ಆರೋಪದಡಿ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು, ತಮ್ಮ ವ್ಯಾಪ್ತಿಯ ತನಿಖೆ ಮುಗಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸಿ ವರದಿ ನೀಡುವಂತೆ, ಸರ್ಕಾರ ರಚಿಸಿರುವ ಉನ್ನತಮಟ್ಟದ ವಿಚಾರಣಾ ಸಮಿತಿಯನ್ನು ಕೋರಿದ್ದಾರೆ.