ಗುರುವಾರ, 27 ನವೆಂಬರ್ 2025
×
ADVERTISEMENT
ADVERTISEMENT

ನಮ್ಮ ಮೆಟ್ರೊಗೆ ಕೆಂಪೇಗೌಡರ ಹೆಸರಿಡಿ: ನಂಜಾವಧೂತ ಸ್ವಾಮೀಜಿ ಆಗ್ರಹ

ರಾಜ್ಯ ಒಕ್ಕಲಿಗರ ಸಂಘ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರದಲ್ಲಿ ನಂಜಾವಧೂತ ಸ್ವಾಮೀಜಿ ಆಗ್ರಹ
Published : 12 ಅಕ್ಟೋಬರ್ 2025, 15:56 IST
Last Updated : 12 ಅಕ್ಟೋಬರ್ 2025, 15:56 IST
ಫಾಲೋ ಮಾಡಿ
Comments
ಯುವಜನರು ಯಂತ್ರಮಾನವರಾಗದೆ ಭಾವನೆಗಳಿಗೆ ಬೆಲೆ ಕೊಡಬೇಕು. ಹಣದ ಹಿಂದೆ ಹೋಗಿ ಹೆತ್ತವರನ್ನು ಮರೆಯಬಾರದು. ಸಮಾಜಕ್ಕೆ ಆಸ್ತಿಯಾಗಿ ಜಗತ್ತಿಗೆ ಕೊಡುಗೆ ನೀಡಬೇಕು
-ನಂಜಾವಧೂತ ಸ್ವಾಮೀಜಿ ಸ್ಪಟಿಕಪುರಿ ಮಠ
ಶೈಕ್ಷಣಿಕ ಆಡಳಿತ ಸೇರಿ ವಿವಿಧ ಕ್ಷೇತ್ರಗಳಲ್ಲಿ ಒಕ್ಕಲಿಗ ಸಮುದಾಯದವರು ಅತ್ಯುತ್ತಮ ಸಾಧನೆ ಮಾಡುತ್ತಿದ್ದಾರೆ. ಸಾಂಸ್ಕೃತಿಕ ಕ್ಷೇತ್ರದಲ್ಲಿ ಹಿಂದೆ ಉಳಿದಿದ್ದು ಈ ಕ್ಷೇತ್ರದಲ್ಲಿಯೂ ಮುಂದೆ ಬರಬೇಕು
-ಜಯಪ್ರಕಾಶ್ ಗೌಡ ನಿವೃತ್ತ ಪ್ರಾಧ್ಯಾಪಕ
‘ಎಚ್‌ಡಿಡಿ ಹೆಸರಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಿ
‘ಒಕ್ಕಲಿಗರ ಸಂಘವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ₹ 700 ಕೋಟಿ ನಿಧಿ ಹೊಂದಿದೆ. ಈ ಹಣದಲ್ಲಿ ಸಂಘವು ಜಮೀನು ಖರೀದಿಸಿ ಇನ್ನೊಂದು ವೈದ್ಯಕೀಯ ಕಾಲೇಜನ್ನು ನಿರ್ಮಿಸಬೇಕು. ಆ ಕಾಲೇಜಿಗೆ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಹೆಸರನ್ನು ಇಡಬೇಕು. ಅವರ ಹೆಸರಿಡುವುದಕ್ಕೆ ಸಮುದಾಯ ಕೂಡ ಒಪ್ಪಲಿದೆ. ಎಂಜಿನಿಯರಿಂಗ್ ಕಾಲೇಜು ಕೂಡ ಸ್ಥಾಪಿಸಿ ಸಮುದಾಯದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಸೀಟು ಒದಗಿಸಬೇಕು’ ಎಂದು ಸಂಘದ ಪದಾಧಿಕಾರಿಗಳಿಗೆ ಆಗ್ರಹಿಸಿದ ನಂಜಾವಧೂತ ಸ್ವಾಮೀಜಿ ಇದಕ್ಕೆ ಸಮ್ಮತಿ ಇದ್ದವರು ಕೈ ಎತ್ತುವಂತೆ ಸೂಚಿಸಿದರು. ಅಧ್ಯಕ್ಷ ಕೆಂಚಪ್ಪಗೌಡ ಸೇರಿ ವೇದಿಕೆ ಮೇಲಿದ್ದ ಪದಾಧಿಕಾರಿಗಳು ಕೈ ಎತ್ತಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT