<p><strong>ನವದೆಹಲಿ</strong>: ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿಯ ಸೋಲಿಗೆ ಭಾರತ ತಂಡದ ಹಂಗಾಮಿ ನಾಯಕ ರಿಷಭ್ ಪಂತ್ ಅವರು ಕ್ಷಮೆ ಕೇಳಿದ್ದಾರೆ.</p>.<p>‘ಮತ್ತೆ ಒಗ್ಗೂಡಿ, ಮುಂದೆ ಸಾಗುವತ್ತ ಚಿತ್ತ ಹರಿಸುತ್ತೇವೆ’ ಎಂದು ಪಂತ್ ಹೇಳಿದ್ದಾರೆ. </p>.<p>‘ಕಳೆದೆರಡು ವಾರಗಳಲ್ಲಿ ನಾವು ಒಳ್ಳೆಯ ಕ್ರಿಕೆಟ್ ಆಡಿಲ್ಲವೆಂಬ ಸತ್ಯವನ್ನು ಒಪ್ಪಿಕೊಳ್ಳಲು ನನಗೆ ಹಿಂಜರಿಕೆ ಇಲ್ಲ. ತಂಡವಾಗಿ ಮತ್ತು ವೈಯಕ್ತಿಕವಾಗಿ ಉತ್ಕೃಷ್ಟ ದರ್ಜೆಯ ಕ್ರಿಕೆಟ್ ಆಡಿ ಲಕ್ಷಾಂತರ ಭಾರತೀಯರನ್ನು ಸಂತುಷ್ಟಗೊಳಿಸಲು ನಾವು ಪ್ರಯತ್ನಿಸುತ್ತೇವೆ. ಆದರೆ ಈ ಬಾರಿ ನಿರೀಕ್ಷೆಗಳಿಗೆ ತಕ್ಕಂತಹ ಫಲಿತಾಂಶ ನೀಡಲು ನಮ್ಮಿಂದ ಸಾಧ್ಯವಾಗಿಲ್ಲ. ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ. ಈ ತಂಡದಲ್ಲಿ ಪುಟಿದೇಳುವ ಸಾಮರ್ಥ್ಯ ಇದೆ. ಮತ್ತೆ ಎಲ್ಲ ಶಕ್ತಿ ಒಗ್ಗೂಡಿಸಿಕೊಂಡು ಕಣಕ್ಕೆ ಮರಳುತ್ತೇವೆ. ಕಠಿಣ ಪರಿಶ್ರಮದೊಂದಿಗೆ ಗೆಲುವಿನತ್ತ ಸಾಗುತ್ತೇವೆ’ ಎಂದು ಪಂತ್ ‘ಎಕ್ಸ್’ನಲ್ಲಿ ಸಂದೇಶ ಹಾಕಿದ್ದಾರೆ. </p>.<p>ದಕ್ಷಿಣ ಆಫ್ರಿಕಾದ ಸರಣಿಯಲ್ಲಿ ಶುಭಮನ್ ಗಿಲ್ ಗಾಯಗೊಂಡಿದ್ದರಿಂದ ಎರಡನೇ ಟೆಸ್ಟ್ನಲ್ಲಿ ಪಂತ್ ಅವರು ನಾಯಕತ್ವ ವಹಿಸಿದ್ದರು. </p>.ಟೆಸ್ಟ್ ಸರಣಿ: ತವರು ನೆಲದಲ್ಲಿ ಎಡವಿಬಿದ್ದ ಭಾರತ ತಂಡ!.ಒಂದೇ ಟೆಸ್ಟ್ ಪಂದ್ಯದಲ್ಲಿ 9 ಕ್ಯಾಚ್: ಭಾರತದ ಆಟಗಾರನ ವಿಶ್ವದಾಖಲೆ ಮುರಿದ ಮರ್ಕರಂ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿಯ ಸೋಲಿಗೆ ಭಾರತ ತಂಡದ ಹಂಗಾಮಿ ನಾಯಕ ರಿಷಭ್ ಪಂತ್ ಅವರು ಕ್ಷಮೆ ಕೇಳಿದ್ದಾರೆ.</p>.<p>‘ಮತ್ತೆ ಒಗ್ಗೂಡಿ, ಮುಂದೆ ಸಾಗುವತ್ತ ಚಿತ್ತ ಹರಿಸುತ್ತೇವೆ’ ಎಂದು ಪಂತ್ ಹೇಳಿದ್ದಾರೆ. </p>.<p>‘ಕಳೆದೆರಡು ವಾರಗಳಲ್ಲಿ ನಾವು ಒಳ್ಳೆಯ ಕ್ರಿಕೆಟ್ ಆಡಿಲ್ಲವೆಂಬ ಸತ್ಯವನ್ನು ಒಪ್ಪಿಕೊಳ್ಳಲು ನನಗೆ ಹಿಂಜರಿಕೆ ಇಲ್ಲ. ತಂಡವಾಗಿ ಮತ್ತು ವೈಯಕ್ತಿಕವಾಗಿ ಉತ್ಕೃಷ್ಟ ದರ್ಜೆಯ ಕ್ರಿಕೆಟ್ ಆಡಿ ಲಕ್ಷಾಂತರ ಭಾರತೀಯರನ್ನು ಸಂತುಷ್ಟಗೊಳಿಸಲು ನಾವು ಪ್ರಯತ್ನಿಸುತ್ತೇವೆ. ಆದರೆ ಈ ಬಾರಿ ನಿರೀಕ್ಷೆಗಳಿಗೆ ತಕ್ಕಂತಹ ಫಲಿತಾಂಶ ನೀಡಲು ನಮ್ಮಿಂದ ಸಾಧ್ಯವಾಗಿಲ್ಲ. ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ. ಈ ತಂಡದಲ್ಲಿ ಪುಟಿದೇಳುವ ಸಾಮರ್ಥ್ಯ ಇದೆ. ಮತ್ತೆ ಎಲ್ಲ ಶಕ್ತಿ ಒಗ್ಗೂಡಿಸಿಕೊಂಡು ಕಣಕ್ಕೆ ಮರಳುತ್ತೇವೆ. ಕಠಿಣ ಪರಿಶ್ರಮದೊಂದಿಗೆ ಗೆಲುವಿನತ್ತ ಸಾಗುತ್ತೇವೆ’ ಎಂದು ಪಂತ್ ‘ಎಕ್ಸ್’ನಲ್ಲಿ ಸಂದೇಶ ಹಾಕಿದ್ದಾರೆ. </p>.<p>ದಕ್ಷಿಣ ಆಫ್ರಿಕಾದ ಸರಣಿಯಲ್ಲಿ ಶುಭಮನ್ ಗಿಲ್ ಗಾಯಗೊಂಡಿದ್ದರಿಂದ ಎರಡನೇ ಟೆಸ್ಟ್ನಲ್ಲಿ ಪಂತ್ ಅವರು ನಾಯಕತ್ವ ವಹಿಸಿದ್ದರು. </p>.ಟೆಸ್ಟ್ ಸರಣಿ: ತವರು ನೆಲದಲ್ಲಿ ಎಡವಿಬಿದ್ದ ಭಾರತ ತಂಡ!.ಒಂದೇ ಟೆಸ್ಟ್ ಪಂದ್ಯದಲ್ಲಿ 9 ಕ್ಯಾಚ್: ಭಾರತದ ಆಟಗಾರನ ವಿಶ್ವದಾಖಲೆ ಮುರಿದ ಮರ್ಕರಂ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>