ಸಂಪುಟದ ತೀರ್ಮಾನವೇ ಅಂತಿಮವಲ್ಲ. ಈಗಲೇ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು ಮಾತುಕತೆ ಮೂಲಕ ಗೊಂದಲ ಬಗೆಹರಿಸಿಕೊಳ್ಳದಿದ್ದರೆ ಮತ್ತಷ್ಟು ಅನ್ಯಾಯಕ್ಕೆ ಒಳಗಾಗಬೇಕಾಗುತ್ತದೆ.
ರಾಜಪ್ಪ ದಳವಾಯಿ ಸಾಹಿತಿ
ಅಲೆಮಾರಿಗಳಿಗೆ ಸೌಲಭ್ಯ ಸಿಗುವವರೆಗೂ ಸಂಭ್ರಮ ಆಚರಿಸುವುದಿಲ್ಲ ಎನ್ನುವ ಮಾದಿಗ ಸಮುದಾಯದ ನಿಲುವು ಸ್ವಾಗತಾರ್ಹ. ಭಾವನಾತ್ಮಕ ಹೋರಾಟಕ್ಕಿಂತ ಹಕ್ಕಿನ ಭಾಷೆಯಲ್ಲಿಯೇ ಇದನ್ನು ಕೇಳಬೇಕು
ಡಾ.ಎಚ್.ವಿ.ವಾಸು ಚಿಂತಕ
ತಮಿಳುನಾಡು ಆಂಧ್ರಪ್ರದೇಶ ತೆಲಂಗಾಣದಲ್ಲಿ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲು ನೀಡಿರುವಾಗ ಕರ್ನಾಟಕದಲ್ಲಿ ಇತರ ಸಮುದಾಯಗಳಲ್ಲಿಯೇ ಸೇರಿಸಬಾರದಿತ್ತು. ಮಾದಿಗ ಸಮುದಾಯ ಪಾಲು ಬಿಟ್ಟು ಕೊಡಲು ಸಿದ್ದವಿದ್ದು ಇತರರನ್ನು ಮನ ಒಲಿಸಲಿ.