<p><strong>ಬೆಂಗಳೂರು: </strong>‘ರಾಮರಾಜ್ಯ ಪರಿಕಲ್ಪನೆ ಸಾಕಾರಗೊಳಿಸುವುದೆಂದರೆ ಯಾರಿಗೂನೋವು ಕೊಡದ ಆಡಳಿತ ನೀಡುವುದು. ರಾಮಾಯಣಕ್ಕೆ ಜೀವಗಳ ಪಾಪ ಕಳೆಯುವ ಅಪೂರ್ವ ಶಕ್ತಿ ಇದೆ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಅಭಿಪ್ರಾಯಪಟ್ಟರು.</p>.<p>ಗಿರಿನಗರದ ರಾಮಾಶ್ರಮದಲ್ಲಿಭಾನುವಾರ ನಡೆದ ಧಾರಾ ರಾಮಾಯಣಪ್ರವಚನದ ಮಹಾಮಂಗಲದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.</p>.<p>‘ರಾಮಾಯಣ ಕಲ್ಪನೆಯಲ್ಲ ಇತಿಹಾಸ. ಭಾರತೀಯ ವಿದ್ಯೆಯ ಸಮಗ್ರ ಚಿತ್ರಣ ಅದು ಒದಗಿಸುತ್ತದೆ. ಕರ್ತವ್ಯ<br />ದಲ್ಲಿ ಪೂರ್ಣತೆ ಕಾಣುವುದೇ ಶ್ರೀರಾಮ ನಮಗೆ ನೀಡಿದ ಆದರ್ಶ’ ಎಂದರು.</p>.<p>‘ಭರತ ಸಂಸ್ಕೃತಿಗೆ ರಾಮಾಯಣ, ಮಹಾಭಾರತ ಹಾಗೂ ಭಾಗವತವನ್ನು ಆಧಾರವಾಗಿಟ್ಟುಕೊಂಡು ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸ್ಥಾಪಿಸಲಾಗುತ್ತಿದೆ. ಇದು ತಕ್ಷಶಿಲೆಯ ಮಾದರಿಯಲ್ಲಿ ವಿಶ್ವಕ್ಕೆ ಬೆಳಕು ಹರಿಸಲಿದೆ’ ಎಂದರು.</p>.<p class="Subhead">ವೈಭವದ ಪಟ್ಟಾಭಿಷೇಕ:ರಾಘವೇಶ್ವರ ಭಾರತೀ ಸ್ವಾಮೀಜಿಆರು ತಿಂಗಳಿಂದ ನಡೆಸುತ್ತಿದ್ದ ಧಾರಾ ರಾಮಾಯಣದ ಮಹಾಮಂಗಲದ ಅಂಗವಾಗಿ ಶ್ರೀರಾಮ ಸಾಮ್ರಾಜ್ಯ ಪಟ್ಟಾಭಿಷೇಕ ನಡೆಯಿತು. ಪುರೋಹಿತರಾದ ಗಜಾನನ ಭಟ್ ನೇತೃತ್ವದಲ್ಲಿ ಶ್ರೀರಾಮ ಹಾಗೂ ಸೀತಾ ಮಾತೆಗೆ ನವರತ್ನಾಭಿಷೇಕ, ಸುವರ್ಣಾಭಿಷೇಕ ನೆರವೇರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>‘ರಾಮರಾಜ್ಯ ಪರಿಕಲ್ಪನೆ ಸಾಕಾರಗೊಳಿಸುವುದೆಂದರೆ ಯಾರಿಗೂನೋವು ಕೊಡದ ಆಡಳಿತ ನೀಡುವುದು. ರಾಮಾಯಣಕ್ಕೆ ಜೀವಗಳ ಪಾಪ ಕಳೆಯುವ ಅಪೂರ್ವ ಶಕ್ತಿ ಇದೆ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಅಭಿಪ್ರಾಯಪಟ್ಟರು.</p>.<p>ಗಿರಿನಗರದ ರಾಮಾಶ್ರಮದಲ್ಲಿಭಾನುವಾರ ನಡೆದ ಧಾರಾ ರಾಮಾಯಣಪ್ರವಚನದ ಮಹಾಮಂಗಲದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.</p>.<p>‘ರಾಮಾಯಣ ಕಲ್ಪನೆಯಲ್ಲ ಇತಿಹಾಸ. ಭಾರತೀಯ ವಿದ್ಯೆಯ ಸಮಗ್ರ ಚಿತ್ರಣ ಅದು ಒದಗಿಸುತ್ತದೆ. ಕರ್ತವ್ಯ<br />ದಲ್ಲಿ ಪೂರ್ಣತೆ ಕಾಣುವುದೇ ಶ್ರೀರಾಮ ನಮಗೆ ನೀಡಿದ ಆದರ್ಶ’ ಎಂದರು.</p>.<p>‘ಭರತ ಸಂಸ್ಕೃತಿಗೆ ರಾಮಾಯಣ, ಮಹಾಭಾರತ ಹಾಗೂ ಭಾಗವತವನ್ನು ಆಧಾರವಾಗಿಟ್ಟುಕೊಂಡು ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸ್ಥಾಪಿಸಲಾಗುತ್ತಿದೆ. ಇದು ತಕ್ಷಶಿಲೆಯ ಮಾದರಿಯಲ್ಲಿ ವಿಶ್ವಕ್ಕೆ ಬೆಳಕು ಹರಿಸಲಿದೆ’ ಎಂದರು.</p>.<p class="Subhead">ವೈಭವದ ಪಟ್ಟಾಭಿಷೇಕ:ರಾಘವೇಶ್ವರ ಭಾರತೀ ಸ್ವಾಮೀಜಿಆರು ತಿಂಗಳಿಂದ ನಡೆಸುತ್ತಿದ್ದ ಧಾರಾ ರಾಮಾಯಣದ ಮಹಾಮಂಗಲದ ಅಂಗವಾಗಿ ಶ್ರೀರಾಮ ಸಾಮ್ರಾಜ್ಯ ಪಟ್ಟಾಭಿಷೇಕ ನಡೆಯಿತು. ಪುರೋಹಿತರಾದ ಗಜಾನನ ಭಟ್ ನೇತೃತ್ವದಲ್ಲಿ ಶ್ರೀರಾಮ ಹಾಗೂ ಸೀತಾ ಮಾತೆಗೆ ನವರತ್ನಾಭಿಷೇಕ, ಸುವರ್ಣಾಭಿಷೇಕ ನೆರವೇರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>