<p><strong>ಬೆಂಗಳೂರು:</strong> ಹೊಸದಾಗಿ ಮದುವೆಯಾಗಿರುವ ಬೇಗೂರು ಕಾನ್ಸ್ಟೆಬಲ್ ಮಾರುತಿ ಎಂಬುವರು, ರಜೆ ಕೋರಿ ಇನ್ಸ್ಪೆಕ್ಟರ್ ಅವರಿಗೆ ವಿಶೇಷ ರೀತಿಯಲ್ಲಿ ಪತ್ರ ಬರೆದಿದ್ದಾರೆ. ಆ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.</p>.<p>‘ನನಗೆ ಹೊಸದಾಗಿ ಮದುವೆಯಾಗಿದ್ದು, ಹೊಸ ಹುರುಪು ಇದೆ’ ಎಂದು ಪತ್ರದಲ್ಲಿ ಕಾನ್ಸ್ಟೆಬಲ್ ಉಲ್ಲೇಖಿಸಿದ್ದಾರೆ. ಆ ಪತ್ರಕ್ಕೆ ಪ್ರತಿಕ್ರಿಯಿಸಿರುವ ಸಾರ್ವಜನಿಕರು, ‘ಹೊಸ ಮದುವೆ ಗಂಡಿಗೆ ರಜೆ ನೀಡಿ’ ಎಂದು ಇನ್ಸ್ಪೆಕ್ಟರ್ ಅವರನ್ನು ಕೋರಿದ್ದಾರೆ.</p>.<p>ಹತ್ತು ದಿನಗಳ ರಜೆ ಕೋರಿ ಜ. 16ರಂದು ಇನ್ಸ್ಪೆಕ್ಟರ್ ಹೆಸರಿಗೆ ಪತ್ರ ಬರೆದಿರುವ ಕಾನ್ಸ್ಟೆಬಲ್, ‘ನಮ್ಮ ಊರಿನಲ್ಲಿ ಮನೆ ದೇವರ ಪೂಜಾ ಕಾರ್ಯಕ್ರಮವಿದೆ. ಅದಕ್ಕೆ ಹೋಗಲು ರಜೆ ಮಂಜೂರು ಮಾಡಬೇಕೆಂದು ಕೋರುತ್ತೇನೆ’ ಎಂದು ಸಹ ವಿನಂತಿಸಿದ್ದಾರೆ.</p>.<p>ಆ ಬಗ್ಗೆ ಪ್ರತಿಕ್ರಿಯಿಸಿದ ಬೇಗೂರು ಠಾಣೆ ಇನ್ಸ್ಪೆಕ್ಟರ್, ‘ರಜೆ ಪತ್ರ ನನ್ನ ಕೈಸೇರಿಲ್ಲ’ ಎಂದು ಹೇಳಿದ್ದಾರೆ.</p>.<p class="Subhead"><strong>ಸ್ನೇಹಿತರಿಂದ ಅಪ್ಲೋಡ್:</strong> ಕಾನ್ಸ್ಟೆಬಲ್ ಮಾರುತಿ, ರಜೆ ಕೋರಿದ್ದ ಪತ್ರವನ್ನು ತಮ್ಮ ಸ್ನೇಹಿತರ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಹಂಚಿಕೊಂಡಿದ್ದರು. ಅದೆ ಗ್ರೂಪ್ನಲ್ಲಿದ್ದವರೇ ಆ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಕಾನ್ಸ್ಟೆಬಲ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಹೊಸದಾಗಿ ಮದುವೆಯಾಗಿರುವ ಬೇಗೂರು ಕಾನ್ಸ್ಟೆಬಲ್ ಮಾರುತಿ ಎಂಬುವರು, ರಜೆ ಕೋರಿ ಇನ್ಸ್ಪೆಕ್ಟರ್ ಅವರಿಗೆ ವಿಶೇಷ ರೀತಿಯಲ್ಲಿ ಪತ್ರ ಬರೆದಿದ್ದಾರೆ. ಆ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.</p>.<p>‘ನನಗೆ ಹೊಸದಾಗಿ ಮದುವೆಯಾಗಿದ್ದು, ಹೊಸ ಹುರುಪು ಇದೆ’ ಎಂದು ಪತ್ರದಲ್ಲಿ ಕಾನ್ಸ್ಟೆಬಲ್ ಉಲ್ಲೇಖಿಸಿದ್ದಾರೆ. ಆ ಪತ್ರಕ್ಕೆ ಪ್ರತಿಕ್ರಿಯಿಸಿರುವ ಸಾರ್ವಜನಿಕರು, ‘ಹೊಸ ಮದುವೆ ಗಂಡಿಗೆ ರಜೆ ನೀಡಿ’ ಎಂದು ಇನ್ಸ್ಪೆಕ್ಟರ್ ಅವರನ್ನು ಕೋರಿದ್ದಾರೆ.</p>.<p>ಹತ್ತು ದಿನಗಳ ರಜೆ ಕೋರಿ ಜ. 16ರಂದು ಇನ್ಸ್ಪೆಕ್ಟರ್ ಹೆಸರಿಗೆ ಪತ್ರ ಬರೆದಿರುವ ಕಾನ್ಸ್ಟೆಬಲ್, ‘ನಮ್ಮ ಊರಿನಲ್ಲಿ ಮನೆ ದೇವರ ಪೂಜಾ ಕಾರ್ಯಕ್ರಮವಿದೆ. ಅದಕ್ಕೆ ಹೋಗಲು ರಜೆ ಮಂಜೂರು ಮಾಡಬೇಕೆಂದು ಕೋರುತ್ತೇನೆ’ ಎಂದು ಸಹ ವಿನಂತಿಸಿದ್ದಾರೆ.</p>.<p>ಆ ಬಗ್ಗೆ ಪ್ರತಿಕ್ರಿಯಿಸಿದ ಬೇಗೂರು ಠಾಣೆ ಇನ್ಸ್ಪೆಕ್ಟರ್, ‘ರಜೆ ಪತ್ರ ನನ್ನ ಕೈಸೇರಿಲ್ಲ’ ಎಂದು ಹೇಳಿದ್ದಾರೆ.</p>.<p class="Subhead"><strong>ಸ್ನೇಹಿತರಿಂದ ಅಪ್ಲೋಡ್:</strong> ಕಾನ್ಸ್ಟೆಬಲ್ ಮಾರುತಿ, ರಜೆ ಕೋರಿದ್ದ ಪತ್ರವನ್ನು ತಮ್ಮ ಸ್ನೇಹಿತರ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಹಂಚಿಕೊಂಡಿದ್ದರು. ಅದೆ ಗ್ರೂಪ್ನಲ್ಲಿದ್ದವರೇ ಆ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಕಾನ್ಸ್ಟೆಬಲ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>