<p><strong>ಬೆಂಗಳೂರು: </strong>ಪಶ್ಚಿಮಘಟ್ಟದ ಸೂಕ್ಷ್ಮ ಪ್ರದೇಶದಲ್ಲಿ ಹಾದುಹೋಗಲಿರುವ ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗಕ್ಕೆ ರಾಜ್ಯ ವನ್ಯಜೀವಿ ಮಂಡಳಿಯ ಒಪ್ಪಿಗೆ ಪಡೆಯಲು ಶತಾಯಗತಾಯ ಪ್ರಯತ್ನ ಮುಂದುವರಿದಿದೆ.</p>.<p>ಮಂಡಳಿಯು ಮಾರ್ಚ್ 9 ರಂದು ನಡೆಸಿದ್ದ 13ನೇ ಸಭೆಯಲ್ಲಿ ಬಹುತೇಕ ಸದಸ್ಯರು ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹಾಗಾಗಿ ಈ ಪ್ರಸ್ತಾವಕ್ಕೆ ಮಂಡಳಿ ಅನುಮೋದನೆ ನೀಡಿರಲಿಲ್ಲ. ಇದರ ಹೊರತಾಗಿಯೂ ಮತ್ತೆ ಈ ವಿಷಯ ಚರ್ಚಿಸಲು ಮಂಡಳಿ ಇದೇ 20ರಂದು ಸಭೆ ಕರೆದಿದೆ.</p>.<p>ಸದಸ್ಯರ ಒಮ್ಮತದ ತೀರ್ಮಾನವನ್ನು ಕಡೆಗಣಿಸಿ, ರಾಜಕಿಯ ಒತ್ತಡಕ್ಕೆ ಮಣಿದು ಮತ್ತೆ ಸಭೆ ಕರೆದಿರುವುದು ಮಂಡಳಿ ಸದಸ್ಯರ ಹಾಗೂ ವನ್ಯಜೀವಿ ಕಾರ್ಯಕರ್ತರ ಹುಬ್ಬೇರಿಸಿದೆ.</p>.<p>‘ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ನಾಶಪಡಿಸುವ ಮೂಲಕ ಮೇಲೇ ಪದೇ ಪದೇ ಆಘಾತ ನೀಡಲಾಗುತ್ತಿದೆ. ಎರಡು ವರ್ಷಗಳಲ್ಲಿ ಪಶ್ಚಿಮ ಘಟ್ಟ ಸಾಲಿನಲ್ಲಿ ಸಂಭವಿಸಿರುವ ಸರಣಿ ಭೂಕುಸಿತ, ಪ್ರವಾಹಗಳಿಂದಲೂ ಸರ್ಕಾರ ಪಾಠ ಕಲಿತಿಲ್ಲ. ಮತ್ತೆ ಲಕ್ಷಗಟ್ಟಲೆ ಕಾಡು ನಾಶಕ್ಕೆ ಕಾರಣವಾಗುವ ಈ ರೈಲು ಮಾರ್ಗವನ್ನು ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿರುವುದು ಎಷ್ಟು ಸರಿ’ ಎಂದು ವನ್ಯಜೀವಿ ಕಾರ್ಯಕರ್ತರು ಪ್ರಶ್ನಿಸಿದ್ದಾರೆ.</p>.<p><strong>ಐಐಎಸ್ಸಿ ವರದಿಗೂ ಖಂಡನೆ: </strong>ಉಪಶಮನ ಕ್ರಮಗಳನ್ನು ಕೈಗೊಂಡು ಯೋಜನೆಯನ್ನು ಜಾರಿಗೊಳಿಸಬಹುದೆಂಬ ಭಾರತೀಯ ವಿಜ್ಞಾನ ಸಂಸ್ಥೆಯ ಸಲಹೆಗಳಿಗೂ ಅವರು ಕಿಡಿಕಾರಿದ್ದಾರೆ.</p>.<p>‘ವನ್ಯಜೀವಿಗಳಿಗೆ ಮೇವಿನ ಮೀಸಲು ತಾಣ ನಿರ್ಮಾಣ, ಜಲಮೂಲಗಳ ನಿರ್ಮಾಣ, ಪಕ್ಷಿಗಳಿಗಾಗಿ ಆಹಾರ ಸಸ್ಯಗಳ ಬೆಳೆಸುವಿಕೆ, ರೈಲ್ವೆ ನಿಲ್ದಾಣಗಳಲ್ಲಿ ಹಾಗೂ ರೈಲ್ವೆಗಳಲ್ಲಿ ತ್ಯಾಜ್ಯ ನಿರ್ವಹಣೆ ಕುರಿತ ಸಲಹೆಗಳು ಹಾಸ್ಯಾಸ್ಪದ. ಆಹಾರ ಹಾಗೂನೀರಿನ ಮೂಲಗಳನ್ನು ಹುಡುಕುವುದು ಹೇಗೆಂದುವನ್ಯಜೀವಿಗಳಿಗೆ ಗೊತ್ತಿದೆ’ ಎಂದು ಗುರುಪ್ರಸಾದ್ ಟೀಕಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಪಶ್ಚಿಮಘಟ್ಟದ ಸೂಕ್ಷ್ಮ ಪ್ರದೇಶದಲ್ಲಿ ಹಾದುಹೋಗಲಿರುವ ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗಕ್ಕೆ ರಾಜ್ಯ ವನ್ಯಜೀವಿ ಮಂಡಳಿಯ ಒಪ್ಪಿಗೆ ಪಡೆಯಲು ಶತಾಯಗತಾಯ ಪ್ರಯತ್ನ ಮುಂದುವರಿದಿದೆ.</p>.<p>ಮಂಡಳಿಯು ಮಾರ್ಚ್ 9 ರಂದು ನಡೆಸಿದ್ದ 13ನೇ ಸಭೆಯಲ್ಲಿ ಬಹುತೇಕ ಸದಸ್ಯರು ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹಾಗಾಗಿ ಈ ಪ್ರಸ್ತಾವಕ್ಕೆ ಮಂಡಳಿ ಅನುಮೋದನೆ ನೀಡಿರಲಿಲ್ಲ. ಇದರ ಹೊರತಾಗಿಯೂ ಮತ್ತೆ ಈ ವಿಷಯ ಚರ್ಚಿಸಲು ಮಂಡಳಿ ಇದೇ 20ರಂದು ಸಭೆ ಕರೆದಿದೆ.</p>.<p>ಸದಸ್ಯರ ಒಮ್ಮತದ ತೀರ್ಮಾನವನ್ನು ಕಡೆಗಣಿಸಿ, ರಾಜಕಿಯ ಒತ್ತಡಕ್ಕೆ ಮಣಿದು ಮತ್ತೆ ಸಭೆ ಕರೆದಿರುವುದು ಮಂಡಳಿ ಸದಸ್ಯರ ಹಾಗೂ ವನ್ಯಜೀವಿ ಕಾರ್ಯಕರ್ತರ ಹುಬ್ಬೇರಿಸಿದೆ.</p>.<p>‘ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ನಾಶಪಡಿಸುವ ಮೂಲಕ ಮೇಲೇ ಪದೇ ಪದೇ ಆಘಾತ ನೀಡಲಾಗುತ್ತಿದೆ. ಎರಡು ವರ್ಷಗಳಲ್ಲಿ ಪಶ್ಚಿಮ ಘಟ್ಟ ಸಾಲಿನಲ್ಲಿ ಸಂಭವಿಸಿರುವ ಸರಣಿ ಭೂಕುಸಿತ, ಪ್ರವಾಹಗಳಿಂದಲೂ ಸರ್ಕಾರ ಪಾಠ ಕಲಿತಿಲ್ಲ. ಮತ್ತೆ ಲಕ್ಷಗಟ್ಟಲೆ ಕಾಡು ನಾಶಕ್ಕೆ ಕಾರಣವಾಗುವ ಈ ರೈಲು ಮಾರ್ಗವನ್ನು ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿರುವುದು ಎಷ್ಟು ಸರಿ’ ಎಂದು ವನ್ಯಜೀವಿ ಕಾರ್ಯಕರ್ತರು ಪ್ರಶ್ನಿಸಿದ್ದಾರೆ.</p>.<p><strong>ಐಐಎಸ್ಸಿ ವರದಿಗೂ ಖಂಡನೆ: </strong>ಉಪಶಮನ ಕ್ರಮಗಳನ್ನು ಕೈಗೊಂಡು ಯೋಜನೆಯನ್ನು ಜಾರಿಗೊಳಿಸಬಹುದೆಂಬ ಭಾರತೀಯ ವಿಜ್ಞಾನ ಸಂಸ್ಥೆಯ ಸಲಹೆಗಳಿಗೂ ಅವರು ಕಿಡಿಕಾರಿದ್ದಾರೆ.</p>.<p>‘ವನ್ಯಜೀವಿಗಳಿಗೆ ಮೇವಿನ ಮೀಸಲು ತಾಣ ನಿರ್ಮಾಣ, ಜಲಮೂಲಗಳ ನಿರ್ಮಾಣ, ಪಕ್ಷಿಗಳಿಗಾಗಿ ಆಹಾರ ಸಸ್ಯಗಳ ಬೆಳೆಸುವಿಕೆ, ರೈಲ್ವೆ ನಿಲ್ದಾಣಗಳಲ್ಲಿ ಹಾಗೂ ರೈಲ್ವೆಗಳಲ್ಲಿ ತ್ಯಾಜ್ಯ ನಿರ್ವಹಣೆ ಕುರಿತ ಸಲಹೆಗಳು ಹಾಸ್ಯಾಸ್ಪದ. ಆಹಾರ ಹಾಗೂನೀರಿನ ಮೂಲಗಳನ್ನು ಹುಡುಕುವುದು ಹೇಗೆಂದುವನ್ಯಜೀವಿಗಳಿಗೆ ಗೊತ್ತಿದೆ’ ಎಂದು ಗುರುಪ್ರಸಾದ್ ಟೀಕಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>