<p><strong>ಬೆಂಗಳೂರು:</strong> ನಗರದಲ್ಲಿ ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್ಸಿ) ಹಾವಳಿಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಓಎಫ್ಸಿ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ಕೇಬಲ್ ಕಾಟದಿಂದ ಮುಕ್ತಿ ನೀಡುವಂತೆ ಒತ್ತಾಯಿಸಿದ್ದಾರೆ.</p>.<p>ನಗರದ ಸಮಸ್ಯೆಗಳನ್ನು ಸವಿಸ್ತಾರವಾಗಿ ಬಿಂಬಿಸಲು ‘ಪ್ರಜಾವಾಣಿ’ ಆರಂಭಿಸಿರುವ ‘ನಮ್ಮ ನಗರ, ನಮ್ಮ ಧ್ವನಿ’ ಮಾಲಿಕೆಯ ಮೂರನೇ ಕಂತಿನಲ್ಲಿ ಒಎಫ್ಸಿ ಕುರಿತ ವಿಸ್ತೃತ ವರದಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.</p>.<p>ಭಾನುವಾರದ ಸಂಚಿಕೆಯಲ್ಲಿ ಪ್ರಕಟವಾದ ‘ಅಯ್ಯಯ್ಯೋ ಇದೇನಪ್ಪ ಕೇಬಲ್ ಕಾಟ!’ ವರದಿಯ ಕುರಿತು ಓದುಗರು ಕಳುಹಿಸಿರುವ ಪ್ರತಿಕ್ರಿಯೆಗಳಲ್ಲಿ ಆಯ್ದ ಕೆಲವು ಅಭಿಪ್ರಾಯಗಳು ಇಲ್ಲಿವೆ.</p>.<p><strong>‘ಕೇಬಲ್ ಕಾಟದಿಂದ ಮುಕ್ತಿ ನೀಡಿ’</strong><br />ಬೆಂಗಳೂರು ದಟ್ಟಣೆಯ ನಗರವಾದ್ದರಿಂದ ಸಾರ್ವಜನಿಕರಿಗೆ ನಡೆಯಲು ಪಾದಚಾರಿ ಮಾರ್ಗಗಳು ಬೇಕೆಬೇಕು. ಆದರೆ ಸುಸ್ಥಿತಿಯಲ್ಲಿರುವ ಅಲ್ಪಸ್ವಲ್ಪ ಪಾದಚಾರಿಮಾರ್ಗಗಳನ್ನು ಸಹ ಒಎಫ್ಸಿ ಅಕ್ರಮಿಸಿಕೊಂಡಿದೆ. ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳು ಇತ್ತಗಮನಹರಿಸಿ ಕೇಬಲ್ ಕಾಟದಿಂದ ಜನರಿಗೆ ಮುಕ್ತಿ ನೀಡಬೇಕು.<br /><strong>–<em>ಎಚ್.ಕೆ.ಹೆಣ್ಣುರ್ ಗಂಗಾಧರ,ಬೆಂಗಳೂರು</em></strong></p>.<p>*<br /><strong>‘ಭ್ರಷ್ಟರ ವಿರುದ್ಧ ದೂರು ದಾಖಲಿಸಬೇಕು’</strong><br />ನಮ್ಮ ನಗರ, ನಮ್ಮ ಧ್ವನಿ ಸಮಗ್ರ ವರದಿಯು ಭ್ರಷ್ಟ ಅಧಿಕಾರಿಗಳ ಮುಖವಾಡವನ್ನು ಕಳಚಿದೆ. ಈ ಸಂದರ್ಭದಲ್ಲಿ ಎಲ್ಲರೂ ಒಗ್ಗೂಡಿ ಭ್ರಷ್ಟಾಚಾರದ ವಿರುದ್ಧ ದನಿ ಎತ್ತಬೇಕಾದ ಅಗತ್ಯವಿದೆ. ಜನರು ಭ್ರಷ್ಟ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಬೇಕು. ಆಗ ಮಾತ್ರ ಇತರೆ ಅಧಿಕಾರಿಗಳೂ ಬುದ್ಧಿ ಕಲಿಯುತ್ತಾರೆ.<br />–<em><strong>ಎ.ವಿ.ಶಾಮರಾವ್, ರಾಮಮೂರ್ತಿ ನಗರ</strong></em></p>.<p>*</p>.<p><strong>‘ಹಣ ಅಧಿಕಾರಿಗಳನ್ನು ಕುರುಡಾಗಿಸುತ್ತದೆ’</strong><br />ಪಾಲಿಕೆ ಅಧಿಕಾರಿಗಳಿಗೆ ನಗರದ ಸಮಸ್ಯೆಗಳ ಅರಿವಿರುತ್ತದೆ. ಆದರೆ ಹಣ ಅವರನ್ನು ಕುರುಡಾಗಿ ವರ್ತಿಸುವಂತೆ ಮಾಡುತ್ತದೆ. ಜನರು ಎಲ್ಲಿಯವರೆಗೂ ಒಳ್ಳೆ ನಾಯಕರನ್ನೂ ಚುನಾಯಿಸುವುದಿಲ್ಲವೋ ಅಲ್ಲಿಯವರೆಗೂ ಸಮಸ್ಯೆಗಳು ಸಹ ಜೊತೆಗಿರುತ್ತವೆ.<br /><strong>–<em>ಪ್ರಶಾಂತ್ ಕೊಡ್ನಾಡ್, ವಿದ್ಯಾರಣ್ಯಪುರ</em></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಗರದಲ್ಲಿ ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್ಸಿ) ಹಾವಳಿಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಓಎಫ್ಸಿ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ಕೇಬಲ್ ಕಾಟದಿಂದ ಮುಕ್ತಿ ನೀಡುವಂತೆ ಒತ್ತಾಯಿಸಿದ್ದಾರೆ.</p>.<p>ನಗರದ ಸಮಸ್ಯೆಗಳನ್ನು ಸವಿಸ್ತಾರವಾಗಿ ಬಿಂಬಿಸಲು ‘ಪ್ರಜಾವಾಣಿ’ ಆರಂಭಿಸಿರುವ ‘ನಮ್ಮ ನಗರ, ನಮ್ಮ ಧ್ವನಿ’ ಮಾಲಿಕೆಯ ಮೂರನೇ ಕಂತಿನಲ್ಲಿ ಒಎಫ್ಸಿ ಕುರಿತ ವಿಸ್ತೃತ ವರದಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.</p>.<p>ಭಾನುವಾರದ ಸಂಚಿಕೆಯಲ್ಲಿ ಪ್ರಕಟವಾದ ‘ಅಯ್ಯಯ್ಯೋ ಇದೇನಪ್ಪ ಕೇಬಲ್ ಕಾಟ!’ ವರದಿಯ ಕುರಿತು ಓದುಗರು ಕಳುಹಿಸಿರುವ ಪ್ರತಿಕ್ರಿಯೆಗಳಲ್ಲಿ ಆಯ್ದ ಕೆಲವು ಅಭಿಪ್ರಾಯಗಳು ಇಲ್ಲಿವೆ.</p>.<p><strong>‘ಕೇಬಲ್ ಕಾಟದಿಂದ ಮುಕ್ತಿ ನೀಡಿ’</strong><br />ಬೆಂಗಳೂರು ದಟ್ಟಣೆಯ ನಗರವಾದ್ದರಿಂದ ಸಾರ್ವಜನಿಕರಿಗೆ ನಡೆಯಲು ಪಾದಚಾರಿ ಮಾರ್ಗಗಳು ಬೇಕೆಬೇಕು. ಆದರೆ ಸುಸ್ಥಿತಿಯಲ್ಲಿರುವ ಅಲ್ಪಸ್ವಲ್ಪ ಪಾದಚಾರಿಮಾರ್ಗಗಳನ್ನು ಸಹ ಒಎಫ್ಸಿ ಅಕ್ರಮಿಸಿಕೊಂಡಿದೆ. ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳು ಇತ್ತಗಮನಹರಿಸಿ ಕೇಬಲ್ ಕಾಟದಿಂದ ಜನರಿಗೆ ಮುಕ್ತಿ ನೀಡಬೇಕು.<br /><strong>–<em>ಎಚ್.ಕೆ.ಹೆಣ್ಣುರ್ ಗಂಗಾಧರ,ಬೆಂಗಳೂರು</em></strong></p>.<p>*<br /><strong>‘ಭ್ರಷ್ಟರ ವಿರುದ್ಧ ದೂರು ದಾಖಲಿಸಬೇಕು’</strong><br />ನಮ್ಮ ನಗರ, ನಮ್ಮ ಧ್ವನಿ ಸಮಗ್ರ ವರದಿಯು ಭ್ರಷ್ಟ ಅಧಿಕಾರಿಗಳ ಮುಖವಾಡವನ್ನು ಕಳಚಿದೆ. ಈ ಸಂದರ್ಭದಲ್ಲಿ ಎಲ್ಲರೂ ಒಗ್ಗೂಡಿ ಭ್ರಷ್ಟಾಚಾರದ ವಿರುದ್ಧ ದನಿ ಎತ್ತಬೇಕಾದ ಅಗತ್ಯವಿದೆ. ಜನರು ಭ್ರಷ್ಟ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಬೇಕು. ಆಗ ಮಾತ್ರ ಇತರೆ ಅಧಿಕಾರಿಗಳೂ ಬುದ್ಧಿ ಕಲಿಯುತ್ತಾರೆ.<br />–<em><strong>ಎ.ವಿ.ಶಾಮರಾವ್, ರಾಮಮೂರ್ತಿ ನಗರ</strong></em></p>.<p>*</p>.<p><strong>‘ಹಣ ಅಧಿಕಾರಿಗಳನ್ನು ಕುರುಡಾಗಿಸುತ್ತದೆ’</strong><br />ಪಾಲಿಕೆ ಅಧಿಕಾರಿಗಳಿಗೆ ನಗರದ ಸಮಸ್ಯೆಗಳ ಅರಿವಿರುತ್ತದೆ. ಆದರೆ ಹಣ ಅವರನ್ನು ಕುರುಡಾಗಿ ವರ್ತಿಸುವಂತೆ ಮಾಡುತ್ತದೆ. ಜನರು ಎಲ್ಲಿಯವರೆಗೂ ಒಳ್ಳೆ ನಾಯಕರನ್ನೂ ಚುನಾಯಿಸುವುದಿಲ್ಲವೋ ಅಲ್ಲಿಯವರೆಗೂ ಸಮಸ್ಯೆಗಳು ಸಹ ಜೊತೆಗಿರುತ್ತವೆ.<br /><strong>–<em>ಪ್ರಶಾಂತ್ ಕೊಡ್ನಾಡ್, ವಿದ್ಯಾರಣ್ಯಪುರ</em></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>