‘ಬೆಂಗಳೂರು ನಗರದಲ್ಲಿ ಕಂದಾಯ ನಿವೇಶನಗಳಲ್ಲಿ ಲಕ್ಷಾಂತರ ಮಂದಿ ಮನೆಗಳನ್ನು ಕಟ್ಟಿಕೊಂಡಿದ್ದು, ಅದಕ್ಕೆ ದುಪ್ಪಟ್ಟು ತೆರಿಗೆ ವಸೂಲಿ ಮಾಡಲಾಗುತ್ತಿತ್ತು. ಉದಾಹರಣೆಗೆ ‘ಎ’ ಖಾತಾದಲ್ಲಿರುವವರು ₹100 ತೆರಿಗೆ ಪಾವತಿಸುತ್ತಿದ್ದರೆ, ‘ಬಿ’ ಖಾತಾದಲ್ಲಿ ಮನೆ ಕಟ್ಟಿಕೊಂಡವರು ₹200 ಪಾವತಿಸುತ್ತಿದ್ದರು. ಇನ್ನು ಮುಂದೆ ‘ಎ’ ಮತ್ತು ‘ಬಿ’ ಖಾತಾದಾರರಿಂದ ಒಂದೇ ಪ್ರಕಾರ ತೆರಿಗೆ ವಸೂಲಿ ಮಾಡಲಾಗುವುದು. ಈ ಕ್ರಮದಿಂದ ಲಕ್ಷಾಂತರ ‘ಬಿ’ ಖಾತಾದಾರರಿಗೆ ಅನುಕೂಲವಾಗಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ ‘ಪ್ರಜಾವಾಣಿ’ಗೆ ತಿಳಿಸಿದರು.