‘ಗೆಳೆಯರೊಂದಿಗೆ ಹೊಸೂರಿಗೆ ಹೋಗಿಪಟಾಕಿ ತೆಗೆದುಕೊಂಡು ಬರುವುದಾಗಿ ಹೇಳಿದ್ದ ತರುಣ್, ತಾಯಿಯ ಬಳಿ ಹಣ ಪಡೆದು ರಾಜ್ಯೋತ್ಸವದಂದು (ನ.1) ಮನೆಯಿಂದ ಹೋಗಿದ್ದ. ರಾತ್ರಿಯಾದರೂ ಮಗ ಮನೆಗೆ ಮರಳಿರಲಿಲ್ಲ. ಇದರಿಂದ ಗಾಬರಿಗೊಂಡಿದ್ದ ಪಾಲಕರು ಭಾರತಿನಗರ ಠಾಣೆಯಲ್ಲಿ ತರುಣ್ ಕಾಣೆಯಾಗಿರುವ ಕುರಿತು ದೂರು ದಾಖಲಿಸಿದ್ದರು’ ಎಂದು ರಾಜರಾಜೇಶ್ವರಿನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.