‘ಬಿಬಿಎಂಪಿಯಿಂದ ಕೆಲಸ ಮಾಡುವಾಗ ದುರಸ್ತಿ ಸರಿ ಮಾಡಿರುವುದಿಲ್ಲ. ಗುಂಡಿಗಳನ್ನೂ ಸರಿಯಾಗಿ ಮುಚ್ಚುವುದಿಲ್ಲ. ರಸ್ತೆ ಹಳ್ಳದಂತಾಗಿತ್ತು. ಮಳೆ ಬಂದಾಗ ವಾಹನಗಳು ಕೆಸರಿನಲ್ಲಿ ಸಿಕ್ಕಿಕೊಳ್ಳುತ್ತಿದ್ದವು. ಬಿಬಿಎಂಪಿ ಎಂಜಿನಿಯರ್ಗಳು ಸ್ಪಂದಿಸಿದರೂ, ಕೆಲಸ ಮಾತ್ರ ಬೇಗ ಪ್ರಾರಂಭವಾಗಲಿಲ್ಲ. ಅದಕ್ಕೆ ನಾವೇ ದುರಸ್ತಿ ಮಾಡುವ ನಿರ್ಧಾರ ಮಾಡಿದೆವು’ ಎಂದು ಶ್ರೀ ಕನಕಗಿರಿ ನಿವಾಸಿಗಳ ಸಂಘದ ಅಧ್ಯಕ್ಷ ಸತೀಶ್ಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.