<p><strong>ಬೆಂಗಳೂರು:</strong> ‘ನಮಗೆ ಸಲ್ಲದ ಮತ್ತು ಒಗ್ಗದ ಜಗತ್ತನ್ನು ಮಕ್ಕಳಿಗೆ ತೋರಿಸಿ ಅದನ್ನೇ ಬದುಕಿನುದ್ದಕ್ಕೂ ಅನುಕರಿಸುವ ಚಾಳಿಯನ್ನು ಇನ್ನಾದರೂ ನಿಲ್ಲಿಸಿ; ನಮ್ಮ ದೇಶದ ಸಂಸ್ಕೃತಿ, ಸಂಪ್ರದಾಯ ಮತ್ತು ಭಾಷೆಗಳ ಉಳಿವಿಗೆ ಮುಂದಾಗುವ ಅವಶ್ಯಕತೆ ಇಂದು ತುರ್ತಾಗಿ ಆಗಬೇಕಿದೆ’ ಎಂದು ಸಾಮಾಜಿಕ ಚಿಂತಕ ರೋಹಿತ್ ಚಕ್ರತೀರ್ಥ ಪ್ರತಿಪಾದಿಸಿದರು.</p>.<p>ಲೇಖಕ ಅಭಿಷೇಕ್ ಅಯ್ಯಂಗಾರ್ ಅವರ, ‘ಬೈ2 ಕಾಫಿ ಮತ್ತು ಮಾಗಡಿ ಡೇಸ್’ ನಾಟಕ ಕೃತಿ ಬಿಡುಗಡೆ ಸಮಾರಂಭದಲ್ಲಿ ಭಾನುವಾರ ಮಾತನಾಡಿದ ಅವರು, ‘ಈ ನಿಟ್ಟಿನಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ರಂಗಶಿಕ್ಷಣ ಪ್ರಧಾನವಾಗಿ ಅಡಕವಾಗುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ನಮ್ಮ ಮೇಲಿದೆ’ ಎಂದರು.</p>.<p>‘ಯಯಾತಿಯನ್ನು ಲಂಪಟ ಎಂದು ನಾಟಕಗಳಲ್ಲಿ ಚಿತ್ರಿಸುವ ಬುದ್ಧಿಜೀವಿಗಳಿಂದಾಗಿ ನಾವು ಯಯಾತಿಯ ಅತ್ಯುತ್ತಮ ದಾರ್ಶನಿಕ ಗುಣಗಳನ್ನು ಕಡೆಗಣಿಸಿ ನೋಡುವಂತಾಗಿದೆ’ ಎಂದು ವ್ಯಥೆ ವ್ಯಕ್ತಪಡಿಸಿದರು.</p>.<p>‘ನಾಟಕಗಳು ನಮಗೆ ತನ್ಮಯತೆ ಮತ್ತು ಆಲಿಸುವಿಕೆಯನ್ನು ಕಲಿಸುವ ಮೂಲಕ ಸಮಾಜವನ್ನೂ ನಿರುಕಿಸಲು ಉತ್ತೇಜಿಸುತ್ತವೆ ಎಂಬ ಅಂಶಗಳನ್ನು ನಾವು ಮಕ್ಕಳ ಮನೋಕೋಶಕ್ಕೆ ತಲುಪಿಸಲು ಪ್ರಯತ್ನಿಸುವ ಮೂಲಕ ಸ್ವದೇಶಿ ಸಂಪ್ರದಾಯ ಚಿಂತನೆಯ ರಂಗಭೂಮಿಯನ್ನು ಹೆಚ್ಚೆಚ್ಚು ಪರಿಚಯಿಸುತ್ತಾ ಹೋಗಬೇಕು’ ಎಂದರು.</p>.<p>ಹಿರಿಯ ರಂಗಕರ್ಮಿ ಎಸ್.ಎನ್.ಸೇತೂರಾಮ್ ಮಾತನಾಡಿ, ‘ರಾಮನನ್ನು ಬೈಯುತ್ತಾ, ರಾವಣನನ್ನು ವಿಜೃಂಭಿಸುವ ನಾಟಕಗಳನ್ನು ಬರೆದು ಆಡಿಸುವ ಪ್ರವೃತ್ತಿ ಕೊನೆಯಾಗಲಿ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ನಮಗೆ ಸಲ್ಲದ ಮತ್ತು ಒಗ್ಗದ ಜಗತ್ತನ್ನು ಮಕ್ಕಳಿಗೆ ತೋರಿಸಿ ಅದನ್ನೇ ಬದುಕಿನುದ್ದಕ್ಕೂ ಅನುಕರಿಸುವ ಚಾಳಿಯನ್ನು ಇನ್ನಾದರೂ ನಿಲ್ಲಿಸಿ; ನಮ್ಮ ದೇಶದ ಸಂಸ್ಕೃತಿ, ಸಂಪ್ರದಾಯ ಮತ್ತು ಭಾಷೆಗಳ ಉಳಿವಿಗೆ ಮುಂದಾಗುವ ಅವಶ್ಯಕತೆ ಇಂದು ತುರ್ತಾಗಿ ಆಗಬೇಕಿದೆ’ ಎಂದು ಸಾಮಾಜಿಕ ಚಿಂತಕ ರೋಹಿತ್ ಚಕ್ರತೀರ್ಥ ಪ್ರತಿಪಾದಿಸಿದರು.</p>.<p>ಲೇಖಕ ಅಭಿಷೇಕ್ ಅಯ್ಯಂಗಾರ್ ಅವರ, ‘ಬೈ2 ಕಾಫಿ ಮತ್ತು ಮಾಗಡಿ ಡೇಸ್’ ನಾಟಕ ಕೃತಿ ಬಿಡುಗಡೆ ಸಮಾರಂಭದಲ್ಲಿ ಭಾನುವಾರ ಮಾತನಾಡಿದ ಅವರು, ‘ಈ ನಿಟ್ಟಿನಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ರಂಗಶಿಕ್ಷಣ ಪ್ರಧಾನವಾಗಿ ಅಡಕವಾಗುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ನಮ್ಮ ಮೇಲಿದೆ’ ಎಂದರು.</p>.<p>‘ಯಯಾತಿಯನ್ನು ಲಂಪಟ ಎಂದು ನಾಟಕಗಳಲ್ಲಿ ಚಿತ್ರಿಸುವ ಬುದ್ಧಿಜೀವಿಗಳಿಂದಾಗಿ ನಾವು ಯಯಾತಿಯ ಅತ್ಯುತ್ತಮ ದಾರ್ಶನಿಕ ಗುಣಗಳನ್ನು ಕಡೆಗಣಿಸಿ ನೋಡುವಂತಾಗಿದೆ’ ಎಂದು ವ್ಯಥೆ ವ್ಯಕ್ತಪಡಿಸಿದರು.</p>.<p>‘ನಾಟಕಗಳು ನಮಗೆ ತನ್ಮಯತೆ ಮತ್ತು ಆಲಿಸುವಿಕೆಯನ್ನು ಕಲಿಸುವ ಮೂಲಕ ಸಮಾಜವನ್ನೂ ನಿರುಕಿಸಲು ಉತ್ತೇಜಿಸುತ್ತವೆ ಎಂಬ ಅಂಶಗಳನ್ನು ನಾವು ಮಕ್ಕಳ ಮನೋಕೋಶಕ್ಕೆ ತಲುಪಿಸಲು ಪ್ರಯತ್ನಿಸುವ ಮೂಲಕ ಸ್ವದೇಶಿ ಸಂಪ್ರದಾಯ ಚಿಂತನೆಯ ರಂಗಭೂಮಿಯನ್ನು ಹೆಚ್ಚೆಚ್ಚು ಪರಿಚಯಿಸುತ್ತಾ ಹೋಗಬೇಕು’ ಎಂದರು.</p>.<p>ಹಿರಿಯ ರಂಗಕರ್ಮಿ ಎಸ್.ಎನ್.ಸೇತೂರಾಮ್ ಮಾತನಾಡಿ, ‘ರಾಮನನ್ನು ಬೈಯುತ್ತಾ, ರಾವಣನನ್ನು ವಿಜೃಂಭಿಸುವ ನಾಟಕಗಳನ್ನು ಬರೆದು ಆಡಿಸುವ ಪ್ರವೃತ್ತಿ ಕೊನೆಯಾಗಲಿ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>