ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘದ ಅಧ್ಯಕ್ಷೆ ಬಿ.ಟಿ. ಲಲಿತಾ ನಾಯಕ್, ‘ಭೋವಿ, ಲಂಬಾಣಿ, ಛಲವಾದಿ ಸೇರಿ ಅಲೆಮಾರಿ ಸಮುದಾಯಗಳು ಸ್ಪೃಶ್ಯ ಜಾತಿಗಳಾಗಿವೆ ಎಂದು ಕೆಲವರು ಅವುಗಳನ್ನು ಈ ಮೀಸಲಾತಿ ಸೌಲಭ್ಯದಿಂದ ತೆಗೆಯಬೇಕೆಂಬ ಮಾತುಗಳನ್ನಾಡುತ್ತಿದ್ದಾರೆ. ಆದರೆ, ಸರ್ಕಾರ 101 ಪರಿಶಿಷ್ಟ ಜಾತಿಗಳ ಜನಸಂಖ್ಯೆ ಆಧಾರಿತ ಅಂಕಿ–ಸಂಖ್ಯೆಗಳನ್ನು ನೀಡಬೇಕು. ನಂತರ ಒಳಮೀಸಲಾತಿಯ ನೀಡುವ ಕುರಿತು ಚರ್ಚಿಸಲಿ’ ಎಂದರು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎನ್. ಅನಂತನಾಯ್ಕ ಮಾತನಾಡಿದರು.