‘ತರಕಾರಿ ಮೂಟೆಗಳಲ್ಲಿ ತಂಬಾಕು ಉತ್ಪನ್ನ ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ಬಂದಿತ್ತು. ಫೆ. 23ರಂದು ರಾತ್ರಿ ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ಹೊರಟಿದ್ದ ಲಾರಿ ತಡೆದು ಪರಿಶೀಲಿಸಲಾಯಿತು. ಲಾರಿಯಲ್ಲಿ ತರಕಾರಿ ಮೂಟೆಗಳಿದ್ದವು. ಅವುಗಳನ್ನು ಬಿಚ್ಚಿ ನೋಡಿದಾಗ, ತರಕಾರಿಗಳ ನಡುವೆ ತಂಬಾಕು ಉತ್ಪನ್ನದ ಪೊಟ್ಟಣಗಳಿದ್ದವು.’