‘ಬೃಹತ್ ಪ್ರಮಾಣದ ತ್ಯಾಜ್ಯ ಉತ್ಪಾದಕ’ ವ್ಯಾಪ್ತಿಗೆ ಜ್ಞಾನಭಾರತಿ ಒಳಪಡುವುದರಿಂದ, ಸರ್ಕಾರದ ಆದೇಶ ಹಾಗೂ ಸುತ್ತೋಲೆಗಳಲ್ಲಿ ‘ಬೃಹತ್ ಪ್ರಮಾಣದ ತ್ಯಾಜ್ಯ ಉತ್ಪಾದಕರ ಕರ್ತವ್ಯಗಳು’ ಹಾಗೂ ಘನತ್ಯಾಜ್ಯ ನಿರ್ವಹಣೆ ಉಪನಿಯಮಗಳನ್ನು ಪಾಲಿಸಲು ವಿವಿಗೆ 2021ರ ಏಪ್ರಿಲ್ನಿಂದ ಸೂಚನೆ, ಪತ್ರಗಳ ಮೂಲಕ ತಿಳಿಸಲಾಗಿತ್ತು. ಇದನ್ನು ಪಾಲಿಸದ್ದರಿಂದ 2023ರ ಜನವರಿ ತಿಂಗಳಿಂದ ಜ್ಞಾನಭಾರತಿ ಆವರಣದಿಂದ ಘನತ್ಯಾಜ್ಯ ಸಂಗ್ರಹ ಮಾಡುವುದನ್ನು ಬಿಬಿಎಂಪಿ ನಿಲ್ಲಿಸಿದೆ. ಹೀಗಾಗಿ ವಿವಿ ಆವರಣದಲ್ಲೇ ತ್ಯಾಜ್ಯಕ್ಕೆ ಬೆಂಕಿ ಹಚ್ಚಲಾಗುತ್ತಿದೆ.