<p><strong>ಬೆಂಗಳೂರು:</strong> ಕಬ್ಬನ್ ಉದ್ಯಾನದ ಬಾಲಭವನದ ಬಳಿ 10 ವರ್ಷಗಳಿಂದ ಹದಗೆಟ್ಟ ಸ್ಥಿತಿಯಲ್ಲಿರುವ ‘ಕಮಲದ ಕೊಳ’ ಶೀಘ್ರವೇ ಹೊಸ ರೂಪ ಪಡೆಯಲಿದ್ದು, ಸ್ಮಾರ್ಟ್ ಸಿಟಿ ಯೋಜನೆಯಡಿ ಇದರ ಅಭಿವೃದ್ಧಿ ಕಾಮಗಾರಿಗಳು ಆರಂಭಗೊಳ್ಳಲಿವೆ.</p>.<p>ಸ್ಮಾರ್ಟ್ ಸಿಟಿ ಯೋಜನೆಯಡಿ ಎರಡು ಹಂತಗಳಲ್ಲಿಉದ್ಯಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯಲಿದ್ದು, ಮೊದಲ ಹಂತದಲ್ಲಿ ಕಮಲದ ಕೊಳದ ಅಭಿವೃದ್ಧಿ ಆದ್ಯತೆ ಪಡೆದುಕೊಂಡಿದೆ.</p>.<p>ಕಮಲದ ಕೊಳ ಕಬ್ಬನ್ ಉದ್ಯಾನದ ಆಕರ್ಷಣೀಯ ಸ್ಥಳಗಳಲ್ಲಿ ಒಂದಾಗಿತ್ತು. ಉದ್ಯಾನಕ್ಕೆ ಭೇಟಿ ನೀಡುವ ಅನೇಕರು ಕೊಳದಲ್ಲಿ<br />ರುವ ಕಮಲದ ಹೂಗಳನ್ನು ವೀಕ್ಷಿಸುತ್ತಾ ಸಮಯ ಕಳೆಯುತ್ತಿದ್ದರು. ಇದರ ಸುತ್ತಲೂ ಬಿದಿರು ಮೆಳೆಗಳುಮುಗಿಲೆತ್ತರಕ್ಕೆ ಬೆಳೆದಿದ್ದವು.‘ದ್ರೋಣ’ ಹೆಸರಿನ ಆಮೆ, ಮೀನುಗಳು ಹಾಗೂ 250ಕ್ಕೂ ಬಗೆಯ ಪಕ್ಷಿಗಳ ಆವಾಸ ಸ್ಥಾನ ಇದಾಗಿತ್ತು. ಈ ಎಲ್ಲ ವಿಶೇಷತೆಗಳಿಂದಕೊಳ ಸಾರ್ವಜನಿಕರನ್ನು ಸೆಳೆಯುತ್ತಿತ್ತು.</p>.<p>ಆದರೆ, ದಿನ ಕಳೆದಂತೆ ಕೊಳದಲ್ಲಿ ಹೂಳು ಸಂಗ್ರಹವಾಗಿ, ಮೂಲ ಸ್ವರೂಪ ಕಳೆದುಕೊಳ್ಳುತ್ತಾ ಬಂತು. ಜನರು ಇತ್ತ ಸುಳಿಯಲು ಹಿಂದೇಟು ಹಾಕಿ, ಪಾಳು ಬಿದ್ದ ಸ್ಥಿತಿ ತಲುಪಿತು. ಕ್ರಮೇಣ ಕೊಳದ ಬಳಿಗೆ ಪ್ರವೇಶ ನಿರ್ಬಂಧಿಸಲಾಯಿತು. ಈ ಸ್ಥಿತಿಗೆ ತೋಟಗಾರಿಕೆ ಇಲಾಖೆಯ ಬೇಜವಾಬ್ದಾರಿಯೇ ಕಾರಣ ಎಂದು ಆರೋಪಿಸಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಎಫ್.ಸಲ್ಡಾನಾ ಅವರು2010ರಲ್ಲಿ ಧರಣಿ ಕುಳಿತಿದ್ದರು.</p>.<p>ಕೊಳದ ಸುತ್ತಲೂ ಬೆಳೆದಿದ್ದ ಒಣಬಿದಿರು ಮೆಳೆಗಳನ್ನು ಇಲಾಖೆ ಇತ್ತೀಚೆಗಷ್ಟೇ ತೆರವು ಮಾಡಿದೆ. ಆದರೂ ಕೊಳದ ನೀರು ಪಾಚಿ ಕಟ್ಟಿಕೊಂಡಿದೆ. ಕಳೆಗುಂದಿರುವ ಕೊಳದ ಸ್ಥಿತಿ ಬಗ್ಗೆ ಉದ್ಯಾನಕ್ಕೆ ಬರುವ ಜನ ಬೇಸರ ವ್ಯಕ್ತಪಡಿಸುತ್ತಾರೆ.</p>.<p>‘ಸ್ಮಾರ್ಟ್ಸಿಟಿ ಯೋಜನೆಯಡಿ ಕೊಳದ ಅಭಿವೃದ್ಧಿಗಾಗಿ ವಿಶೇಷ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ. ಎಲ್ಲ ಅಂದುಕೊಂಡಂತೆಯೇ ಆದರೆ ಈ ಹಿಂದಿಗಿಂತಲೂ ಕೊಳ ಸೊಗಸಾಗಿ ಕಾಣಿಸಲಿದೆ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಜಿ.ಕುಸುಮಾ.</p>.<p>‘ಉದ್ಯಾನದ ಕೇಂದ್ರಬಿಂದು ಆಗಿರುವ ಕೊಳಕ್ಕೆ ಆಧುನಿಕ ಸ್ಪರ್ಶ ನೀಡಲಾಗುವುದು. ಕೊಳಕ್ಕೆ ಬಿದಿರು ಸಸಿಗಳ ನಡುವೆ ಮಳೆ ನೀರನ್ನು ನೇರವಾಗಿ ಹರಿಸಲು ಸಿದ್ಧತೆ ನಡೆಸಲಾಗಿದೆ. ಕಾಲುವೆ ಮಾದರಿಯ ಕಟ್ಟೆಗಳನ್ನು ನಿರ್ಮಿಸಿ ಕೊಳಕ್ಕೆ ನೀರು ಹರಿಸಲಾಗುವುದು. ಏಪ್ರಿಲ್ನಿಂದ ಕೊಳದ ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭವಾಗಲಿವೆ’ ಎಂದರು.</p>.<p><strong>ಕೊಳದ ಸುತ್ತ ಪಾದಚಾರಿ ಮಾರ್ಗ:</strong> ಕೊಳದ ಸುತ್ತ ಸದ್ಯ ರಕ್ಷಣಾ ಬೇಲಿ ಹಾಕಲಾಗಿದೆ. ಜನ ಅಲ್ಲಿ ಬಂದು ಒಂದೆಡೆ ನಿಂತು ಕೊಳ ವೀಕ್ಷಿಸುತ್ತಿದ್ದರು. ಕೊಳದ ಸುತ್ತಲೂ ಜನರ ಓಡಾಟಕ್ಕೆ ಪಾದಚಾರಿ ಮಾರ್ಗ ಸಿದ್ಧವಾಗಲಿದೆ. ಕೊಳದಲ್ಲಿ ವಿವಿಧ ತಳಿಯ ಕಮಲದ ಗಿಡಗಳನ್ನು ಬೆಳೆಸುವ ಚಿಂತನೆ ಇದೆ.ಇಲಾಖೆ ವತಿಯಿಂದ ಈ ಹಿಂದೆ ಇದ್ದ ಸ್ಥಳದಲ್ಲೇ ವಿವಿಧ ತಳಿಯ ಬಿದಿರು ಸಸಿಗಳನ್ನು ನೆಡಲಾಗುವುದು’ ಎಂದು ಹೇಳಿದರು.</p>.<p><strong>‘ಕ್ಯಾಸ್ಕೇಡ್’ ಶೈಲಿಯ ಕೃತಕ ಜಲಪಾತ</strong><br />‘ಸ್ಮಾರ್ಟ್ ಸಿಟಿ ಯೋಜನೆಯಡಿ ಕೊಳದ ಸಮೀಪದಲ್ಲಿ ವಿವಿಧ ಹಂತಗಳಲ್ಲಿ ನೀರು ಹರಿಯುವ ಕ್ಯಾಸ್ಕೇಡ್ ಶೈಲಿಯ ಕೃತಕ ಜಲಪಾತ ನಿರ್ಮಾಣವಾಗಲಿದೆ. ಹರಿಯುವ ನೀರು ಧುಮ್ಮಿಕ್ಕುವ ದೃಶ್ಯವನ್ನು ಜನ ಉದ್ಯಾನದಲ್ಲಿ ಕಣ್ತುಂಬಿಕೊಳ್ಳಬಹುದು’ ಎಂದುಕುಸುಮಾ ಮಾಹಿತಿ ನೀಡಿದರು.</p>.<p>‘ನೈಸರ್ಗಿಕವಾಗಿ ಹಾಗೂ ಕಾಂಕ್ರೀಟ್ಮುಕ್ತವಾಗಿ ಕೊಳ ಗತವೈಭವವನ್ನು ಪಡೆಯಲಿದೆ. ಅದರ ಅಂದ ಹೆಚ್ಚಿಸುವ ಉದ್ದೇಶದಿಂದಬೆಣಚುಕಲ್ಲು ಬಳಸಿ ಸೇತುವೆಗಳನ್ನು ನಿರ್ಮಿಸಲಾಗುವುದು. ಜನರು ಸೇತುವೆ ಮೂಲಕ ಸಂಚರಿಸುವಂತೆ ವ್ಯವಸ್ಥೆ ಮಾಡಲಾಗುವುದು’ ಎಂದು ಅವರು ವಿವರಿಸಿದರು.</p>.<p>*<br />ಕಾಮಗಾರಿಗೆ ಬಳಸಿರುವುದು ಜನರ ತೆರಿಗೆ ಹಣ. ಕಮಲ ಕೊಳದ ನಿರ್ವಹಣೆಯನ್ನು ತೋಟಗಾರಿಕೆ ಇಲಾಖೆ ಸಮರ್ಪಕವಾಗಿ ಮಾಡಬೇಕು.<br /><em><strong>-ನಿಖಿತಾ, ಬೆಂಗಳೂರು ನಿವಾಸಿ</strong></em></p>.<p>*<br />ಉದ್ಯಾನದ ನಕ್ಷೆಯಲ್ಲಿ ಕಮಲದ ಕೊಳ ಇರುವ ಮಾಹಿತಿ ಇದೆ. ಆದರೆ, ಕೊಳದ ಬಳಿ ತೆರಳಿದಾಗ ಅಲ್ಲಿನ ಸ್ಥಿತಿ ಕಂಡು ಬೇಸರವಾಯಿತು.<br /><em><strong>-ಶ್ರೀನಿವಾಸ್, ಪ್ರವಾಸಿಗ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕಬ್ಬನ್ ಉದ್ಯಾನದ ಬಾಲಭವನದ ಬಳಿ 10 ವರ್ಷಗಳಿಂದ ಹದಗೆಟ್ಟ ಸ್ಥಿತಿಯಲ್ಲಿರುವ ‘ಕಮಲದ ಕೊಳ’ ಶೀಘ್ರವೇ ಹೊಸ ರೂಪ ಪಡೆಯಲಿದ್ದು, ಸ್ಮಾರ್ಟ್ ಸಿಟಿ ಯೋಜನೆಯಡಿ ಇದರ ಅಭಿವೃದ್ಧಿ ಕಾಮಗಾರಿಗಳು ಆರಂಭಗೊಳ್ಳಲಿವೆ.</p>.<p>ಸ್ಮಾರ್ಟ್ ಸಿಟಿ ಯೋಜನೆಯಡಿ ಎರಡು ಹಂತಗಳಲ್ಲಿಉದ್ಯಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯಲಿದ್ದು, ಮೊದಲ ಹಂತದಲ್ಲಿ ಕಮಲದ ಕೊಳದ ಅಭಿವೃದ್ಧಿ ಆದ್ಯತೆ ಪಡೆದುಕೊಂಡಿದೆ.</p>.<p>ಕಮಲದ ಕೊಳ ಕಬ್ಬನ್ ಉದ್ಯಾನದ ಆಕರ್ಷಣೀಯ ಸ್ಥಳಗಳಲ್ಲಿ ಒಂದಾಗಿತ್ತು. ಉದ್ಯಾನಕ್ಕೆ ಭೇಟಿ ನೀಡುವ ಅನೇಕರು ಕೊಳದಲ್ಲಿ<br />ರುವ ಕಮಲದ ಹೂಗಳನ್ನು ವೀಕ್ಷಿಸುತ್ತಾ ಸಮಯ ಕಳೆಯುತ್ತಿದ್ದರು. ಇದರ ಸುತ್ತಲೂ ಬಿದಿರು ಮೆಳೆಗಳುಮುಗಿಲೆತ್ತರಕ್ಕೆ ಬೆಳೆದಿದ್ದವು.‘ದ್ರೋಣ’ ಹೆಸರಿನ ಆಮೆ, ಮೀನುಗಳು ಹಾಗೂ 250ಕ್ಕೂ ಬಗೆಯ ಪಕ್ಷಿಗಳ ಆವಾಸ ಸ್ಥಾನ ಇದಾಗಿತ್ತು. ಈ ಎಲ್ಲ ವಿಶೇಷತೆಗಳಿಂದಕೊಳ ಸಾರ್ವಜನಿಕರನ್ನು ಸೆಳೆಯುತ್ತಿತ್ತು.</p>.<p>ಆದರೆ, ದಿನ ಕಳೆದಂತೆ ಕೊಳದಲ್ಲಿ ಹೂಳು ಸಂಗ್ರಹವಾಗಿ, ಮೂಲ ಸ್ವರೂಪ ಕಳೆದುಕೊಳ್ಳುತ್ತಾ ಬಂತು. ಜನರು ಇತ್ತ ಸುಳಿಯಲು ಹಿಂದೇಟು ಹಾಕಿ, ಪಾಳು ಬಿದ್ದ ಸ್ಥಿತಿ ತಲುಪಿತು. ಕ್ರಮೇಣ ಕೊಳದ ಬಳಿಗೆ ಪ್ರವೇಶ ನಿರ್ಬಂಧಿಸಲಾಯಿತು. ಈ ಸ್ಥಿತಿಗೆ ತೋಟಗಾರಿಕೆ ಇಲಾಖೆಯ ಬೇಜವಾಬ್ದಾರಿಯೇ ಕಾರಣ ಎಂದು ಆರೋಪಿಸಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಎಫ್.ಸಲ್ಡಾನಾ ಅವರು2010ರಲ್ಲಿ ಧರಣಿ ಕುಳಿತಿದ್ದರು.</p>.<p>ಕೊಳದ ಸುತ್ತಲೂ ಬೆಳೆದಿದ್ದ ಒಣಬಿದಿರು ಮೆಳೆಗಳನ್ನು ಇಲಾಖೆ ಇತ್ತೀಚೆಗಷ್ಟೇ ತೆರವು ಮಾಡಿದೆ. ಆದರೂ ಕೊಳದ ನೀರು ಪಾಚಿ ಕಟ್ಟಿಕೊಂಡಿದೆ. ಕಳೆಗುಂದಿರುವ ಕೊಳದ ಸ್ಥಿತಿ ಬಗ್ಗೆ ಉದ್ಯಾನಕ್ಕೆ ಬರುವ ಜನ ಬೇಸರ ವ್ಯಕ್ತಪಡಿಸುತ್ತಾರೆ.</p>.<p>‘ಸ್ಮಾರ್ಟ್ಸಿಟಿ ಯೋಜನೆಯಡಿ ಕೊಳದ ಅಭಿವೃದ್ಧಿಗಾಗಿ ವಿಶೇಷ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ. ಎಲ್ಲ ಅಂದುಕೊಂಡಂತೆಯೇ ಆದರೆ ಈ ಹಿಂದಿಗಿಂತಲೂ ಕೊಳ ಸೊಗಸಾಗಿ ಕಾಣಿಸಲಿದೆ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಜಿ.ಕುಸುಮಾ.</p>.<p>‘ಉದ್ಯಾನದ ಕೇಂದ್ರಬಿಂದು ಆಗಿರುವ ಕೊಳಕ್ಕೆ ಆಧುನಿಕ ಸ್ಪರ್ಶ ನೀಡಲಾಗುವುದು. ಕೊಳಕ್ಕೆ ಬಿದಿರು ಸಸಿಗಳ ನಡುವೆ ಮಳೆ ನೀರನ್ನು ನೇರವಾಗಿ ಹರಿಸಲು ಸಿದ್ಧತೆ ನಡೆಸಲಾಗಿದೆ. ಕಾಲುವೆ ಮಾದರಿಯ ಕಟ್ಟೆಗಳನ್ನು ನಿರ್ಮಿಸಿ ಕೊಳಕ್ಕೆ ನೀರು ಹರಿಸಲಾಗುವುದು. ಏಪ್ರಿಲ್ನಿಂದ ಕೊಳದ ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭವಾಗಲಿವೆ’ ಎಂದರು.</p>.<p><strong>ಕೊಳದ ಸುತ್ತ ಪಾದಚಾರಿ ಮಾರ್ಗ:</strong> ಕೊಳದ ಸುತ್ತ ಸದ್ಯ ರಕ್ಷಣಾ ಬೇಲಿ ಹಾಕಲಾಗಿದೆ. ಜನ ಅಲ್ಲಿ ಬಂದು ಒಂದೆಡೆ ನಿಂತು ಕೊಳ ವೀಕ್ಷಿಸುತ್ತಿದ್ದರು. ಕೊಳದ ಸುತ್ತಲೂ ಜನರ ಓಡಾಟಕ್ಕೆ ಪಾದಚಾರಿ ಮಾರ್ಗ ಸಿದ್ಧವಾಗಲಿದೆ. ಕೊಳದಲ್ಲಿ ವಿವಿಧ ತಳಿಯ ಕಮಲದ ಗಿಡಗಳನ್ನು ಬೆಳೆಸುವ ಚಿಂತನೆ ಇದೆ.ಇಲಾಖೆ ವತಿಯಿಂದ ಈ ಹಿಂದೆ ಇದ್ದ ಸ್ಥಳದಲ್ಲೇ ವಿವಿಧ ತಳಿಯ ಬಿದಿರು ಸಸಿಗಳನ್ನು ನೆಡಲಾಗುವುದು’ ಎಂದು ಹೇಳಿದರು.</p>.<p><strong>‘ಕ್ಯಾಸ್ಕೇಡ್’ ಶೈಲಿಯ ಕೃತಕ ಜಲಪಾತ</strong><br />‘ಸ್ಮಾರ್ಟ್ ಸಿಟಿ ಯೋಜನೆಯಡಿ ಕೊಳದ ಸಮೀಪದಲ್ಲಿ ವಿವಿಧ ಹಂತಗಳಲ್ಲಿ ನೀರು ಹರಿಯುವ ಕ್ಯಾಸ್ಕೇಡ್ ಶೈಲಿಯ ಕೃತಕ ಜಲಪಾತ ನಿರ್ಮಾಣವಾಗಲಿದೆ. ಹರಿಯುವ ನೀರು ಧುಮ್ಮಿಕ್ಕುವ ದೃಶ್ಯವನ್ನು ಜನ ಉದ್ಯಾನದಲ್ಲಿ ಕಣ್ತುಂಬಿಕೊಳ್ಳಬಹುದು’ ಎಂದುಕುಸುಮಾ ಮಾಹಿತಿ ನೀಡಿದರು.</p>.<p>‘ನೈಸರ್ಗಿಕವಾಗಿ ಹಾಗೂ ಕಾಂಕ್ರೀಟ್ಮುಕ್ತವಾಗಿ ಕೊಳ ಗತವೈಭವವನ್ನು ಪಡೆಯಲಿದೆ. ಅದರ ಅಂದ ಹೆಚ್ಚಿಸುವ ಉದ್ದೇಶದಿಂದಬೆಣಚುಕಲ್ಲು ಬಳಸಿ ಸೇತುವೆಗಳನ್ನು ನಿರ್ಮಿಸಲಾಗುವುದು. ಜನರು ಸೇತುವೆ ಮೂಲಕ ಸಂಚರಿಸುವಂತೆ ವ್ಯವಸ್ಥೆ ಮಾಡಲಾಗುವುದು’ ಎಂದು ಅವರು ವಿವರಿಸಿದರು.</p>.<p>*<br />ಕಾಮಗಾರಿಗೆ ಬಳಸಿರುವುದು ಜನರ ತೆರಿಗೆ ಹಣ. ಕಮಲ ಕೊಳದ ನಿರ್ವಹಣೆಯನ್ನು ತೋಟಗಾರಿಕೆ ಇಲಾಖೆ ಸಮರ್ಪಕವಾಗಿ ಮಾಡಬೇಕು.<br /><em><strong>-ನಿಖಿತಾ, ಬೆಂಗಳೂರು ನಿವಾಸಿ</strong></em></p>.<p>*<br />ಉದ್ಯಾನದ ನಕ್ಷೆಯಲ್ಲಿ ಕಮಲದ ಕೊಳ ಇರುವ ಮಾಹಿತಿ ಇದೆ. ಆದರೆ, ಕೊಳದ ಬಳಿ ತೆರಳಿದಾಗ ಅಲ್ಲಿನ ಸ್ಥಿತಿ ಕಂಡು ಬೇಸರವಾಯಿತು.<br /><em><strong>-ಶ್ರೀನಿವಾಸ್, ಪ್ರವಾಸಿಗ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>