ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್.ಕಿರಣ್ ಕುಮಾರ್ ಮಾತನಾಡಿ,‘ಅನ್ನ, ಶಿಕ್ಷಣ, ಆಶ್ರಯವನ್ನು ಸಮಾಜಕ್ಕೆ ನೀಡಿದ ಮಹಾನ್ ಸಂತ ಎಂದರೆ ಶಿವಕುಮಾರ್ ಸ್ವಾಮೀಜಿ. ವಿಜ್ಞಾನ, ತಂತ್ರಜ್ಞಾನಗಳ ಫಲವಾಗಿ ವಿಶ್ವ ಅತಿವೇಗವಾಗಿ ಬೆಳೆಯುತ್ತಿದ್ದರೂ, ಮನುಷ್ಯ ನೆಮ್ಮದಿಯ ಜೀವನ ಸಾಗಿಸಲು ಕೆಲವು ಶಕ್ತಿಗಳ ಪ್ರೇರಣೆ ಅಗತ್ಯ’ ಎಂದರು.