ಜ. 14ರಂದು ಹಿಂದೂಸ್ಥಾನಿ ಸಂಗೀತ ಗಾಯಕ ವೆಂಕಟೇಶ್ ಕುಮಾರ್ ಅವರ ಸಂಗೀತ ಕಛೇರಿಗೆ ರವೀಂದ್ರ ಯಾವಗಲ್ (ತಬಲಾ), ರವೀಂದ್ರ ಕಾಟೋಟಿ (ಹಾರ್ಮೋನಿಯಂ) ಸಾಥ್ ನೀಡಲಿದ್ದಾರೆ. ಸಿತಾರ್ ವಾದಕ ಪುರ್ಬಯನ್ ಚಟರ್ಜಿ, ಕರ್ನಾಟಕ ಕೊಳಲು ವಾದಕ ಶಶಾಂಕ್ ಸುಬ್ರಮಣ್ಯಂ, ತಬಲಾ ವಾದಕ ಓಜಸ್ ಅಧಿಯಾ ಮತ್ತು ಮೃದಂಗ ವಾದಕ ಪರುಪಳ್ಳಿ ಫಲ್ಗುಣ್ ನಡುವೆ ಜುಗಲ್ಬಂದಿ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ಸಂಗೀತ ಗಾಯಕ ಅಭಿಷೇಕ್ ರಘುರಾಮ್ ಅವರ ಸಂಗೀತ ಕಾರ್ಯಕ್ರಮಕ್ಕೆ ಸರೋದ್ ವಾದಕ ಸೌಗತ ರಾಯ್ ಚೌಧರಿ, ತಬಲಾ ವಾದಕ ಇಂದ್ರನಿಲ್ ಮಲ್ಲಿಕ್ ಸಾಥ್ ನೀಡಲಿದ್ದಾರೆ.