<p><strong>ಬೆಂಗಳೂರು:</strong> ‘ಅಯೋಧ್ಯೆಯ ಪ್ರತಿ ಕಣದಲ್ಲೂ ರಾಮನಿರುವಂತೆ ಬೆಂಗಳೂರಿನ ಕಣ ಕಣದಲ್ಲಿ ತಂತ್ರಜ್ಞಾನ ಅಡಗಿದೆ. ಇದು ತಂತ್ರಜ್ಞಾನದ ನಗರ’ ಎಂದು ಕೇಂದ್ರ ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.</p>.<p>ಇಂಡಿಯಾ ಫೌಂಡೇಷನ್ ವತಿಯಿಂದ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಇಂಡಿಯಾ ಐಡಿಯಾಸ್’ ಸಮಾವೇಶದಲ್ಲಿ ಮಾತನಾಡಿದರು.</p>.<p>‘ಬೆಂಗಳೂರಿನ ಜನರು ತಜ್ಞರಾಗಿದ್ದಾರೆ. ನಾನು ಅವರಿಗಿಂತ ಹೆಚ್ಚಾಗಿ ಅರಿತಿಲ್ಲ’ ಎಂದು ಬೆಂಗಳೂರಿನ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ದೇಶ ಮತ್ತು ಸಮಾಜದ ಅಭಿವೃದ್ಧಿಗೆ ನಾವೇನು ಮಾಡಬೇಕು? ಡಿಜಿಟಲ್ ತಂತ್ರಜ್ಞಾನ, ತಾಂತ್ರಿಕತೆಯನ್ನು ಯಾವ ರೀತಿ ಬಳಸಿಕೊಳ್ಳಬಹುದು ಎಂದು ವಿವರಿಸಿದರು.</p>.<p>ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ,‘ನಮ್ಮ ಪೂರ್ವಜರು ಹೇಳಿದ ಅಂಶಗಳೇ ಈಗ ವಿಜ್ಞಾನದ ಹೆಸರಿನಲ್ಲಿ ಮುಂಚೂಣಿಗೆ ಬರುತ್ತಿವೆ. ತಂತ್ರಜ್ಞಾನ ಅಳವಡಿಕೆ ತಪ್ಪಲ್ಲ. ಆದರೆ, ನಮ್ಮತನ ಕಳೆದುಕೊಳ್ಳಬಾರದು’ ಎಂದರು.</p>.<p>‘ಭಾರತವನ್ನು ನಾಗರಿಕತೆಯ ತೊಟ್ಟಿಲು ಹಾಗೂ ಗಣಿತ ಮತ್ತು ವಿಜ್ಞಾನದ ತವರು ಎಂದು ಕರೆಯಲಾಗಿದೆ. ಈಗ ತಂತ್ರಜ್ಞಾನದಲ್ಲೂ ನಾವು ಮುಂದಿದ್ದೇವೆ. ಆಧುನಿಕ ತಂತ್ರಜ್ಞಾನಗಳಿಂದ ಸಮಾಜಕ್ಕೆ ಅನುಕೂಲವಾಗುತ್ತಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಅಯೋಧ್ಯೆಯ ಪ್ರತಿ ಕಣದಲ್ಲೂ ರಾಮನಿರುವಂತೆ ಬೆಂಗಳೂರಿನ ಕಣ ಕಣದಲ್ಲಿ ತಂತ್ರಜ್ಞಾನ ಅಡಗಿದೆ. ಇದು ತಂತ್ರಜ್ಞಾನದ ನಗರ’ ಎಂದು ಕೇಂದ್ರ ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.</p>.<p>ಇಂಡಿಯಾ ಫೌಂಡೇಷನ್ ವತಿಯಿಂದ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಇಂಡಿಯಾ ಐಡಿಯಾಸ್’ ಸಮಾವೇಶದಲ್ಲಿ ಮಾತನಾಡಿದರು.</p>.<p>‘ಬೆಂಗಳೂರಿನ ಜನರು ತಜ್ಞರಾಗಿದ್ದಾರೆ. ನಾನು ಅವರಿಗಿಂತ ಹೆಚ್ಚಾಗಿ ಅರಿತಿಲ್ಲ’ ಎಂದು ಬೆಂಗಳೂರಿನ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ದೇಶ ಮತ್ತು ಸಮಾಜದ ಅಭಿವೃದ್ಧಿಗೆ ನಾವೇನು ಮಾಡಬೇಕು? ಡಿಜಿಟಲ್ ತಂತ್ರಜ್ಞಾನ, ತಾಂತ್ರಿಕತೆಯನ್ನು ಯಾವ ರೀತಿ ಬಳಸಿಕೊಳ್ಳಬಹುದು ಎಂದು ವಿವರಿಸಿದರು.</p>.<p>ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ,‘ನಮ್ಮ ಪೂರ್ವಜರು ಹೇಳಿದ ಅಂಶಗಳೇ ಈಗ ವಿಜ್ಞಾನದ ಹೆಸರಿನಲ್ಲಿ ಮುಂಚೂಣಿಗೆ ಬರುತ್ತಿವೆ. ತಂತ್ರಜ್ಞಾನ ಅಳವಡಿಕೆ ತಪ್ಪಲ್ಲ. ಆದರೆ, ನಮ್ಮತನ ಕಳೆದುಕೊಳ್ಳಬಾರದು’ ಎಂದರು.</p>.<p>‘ಭಾರತವನ್ನು ನಾಗರಿಕತೆಯ ತೊಟ್ಟಿಲು ಹಾಗೂ ಗಣಿತ ಮತ್ತು ವಿಜ್ಞಾನದ ತವರು ಎಂದು ಕರೆಯಲಾಗಿದೆ. ಈಗ ತಂತ್ರಜ್ಞಾನದಲ್ಲೂ ನಾವು ಮುಂದಿದ್ದೇವೆ. ಆಧುನಿಕ ತಂತ್ರಜ್ಞಾನಗಳಿಂದ ಸಮಾಜಕ್ಕೆ ಅನುಕೂಲವಾಗುತ್ತಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>