<p><strong>ಬೆಂಗಳೂರು</strong>: ಎಚ್ಎಎಲ್ ಫ್ಯಾಮಿಲೀಸ್ ವೆಲ್ಫೇರ್ ಅಸೋಸಿಯೇಷನ್ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ತೇಜಸ್ವಿ’ ಪ್ರಥಮ ರಾಷ್ಟ್ರೀಯ ಮಹಿಳಾ ಸಮ್ಮೇಳನದಲ್ಲಿ ನಾರಿಯರ ಶಕ್ತಿ ಅನಾವರಣವಾಯಿತು. </p>.<p>‘ಮನೆ ಹಾಗೂ ಕೆಲಸದ ಸ್ಥಳದಲ್ಲಿ ಪ್ರಕಾಶಿಸುವ ಮಹಿಳೆಯರು’ ಎಂಬ ಶೀರ್ಷಿಕೆಯಡಿ ಈ ಸಮ್ಮೇಳನ ನಡೆಯಿತು. ವೃತ್ತಿಪರ ವಲಯಗಳಲ್ಲಿ ಮಹಿಳೆಯ ಬಹುಮುಖ ಪಾತ್ರಗಳ ಬಗ್ಗೆ ತಿಳಿಸಲಾಯಿತು. </p>.<p>ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಕ್ಷಣಾ ಸಚಿವಾಲಯದ ರಕ್ಷಣಾ ಉತ್ಪಾದನಾ ವಿಭಾಗದ ಜಂಟಿ ಕಾರ್ಯದರ್ಶಿ ಮನೀಷಾ ಚಂದ್ರ, ದೇಶದ ಪ್ರಗತಿಯಲ್ಲಿ ಎಚ್ಎಎಲ್ನ ಪಾತ್ರವನ್ನು ಶ್ಲಾಘಿಸಿದರು. ಮನೆ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರು ನಿರ್ವಹಿಸುತ್ತಿರುವ ವಿವಿಧ ಪಾತ್ರಗಳ ಬಗ್ಗೆ ವಿವರಿಸಿದರು. </p>.<p>ಇದೇ ಸಂದರ್ಭದಲ್ಲಿ ಎಚ್ಎಎಲ್ ಫ್ಯಾಮಿಲೀಸ್ ವೆಲ್ಫೇರ್ ಅಸೋಸಿಯೇಷನ್ನ 50 ವರ್ಷಗಳ ಸೇವೆಯ ಸ್ಮರಣಾರ್ಥ ವಿಶೇಷ ಸುವರ್ಣ ಮಹೋತ್ಸವ ಅಂಚೆ ಲಕೋಟೆ ಬಿಡುಗಡೆ ಮಾಡಲಾಯಿತು. ಅಸೋಸಿಯೇಷನ್ನ ಮುಖ್ಯ ಪೋಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಶುಭಾ ಸುನಿಲ್ ಉಪಸ್ಥಿತರಿದ್ದರು.</p>.<p>ಕ್ಯಾನ್ಸರ್ ತಜ್ಞೆ ವಿಜಯಲಕ್ಷ್ಮಿ ದೇಶಮಾನೆ, ಅಮೃತ ವಿಶ್ವಪೀಠಂನ ಡೀನ್ ಭವಾನಿ ರಾವ್ ಮತ್ತು ‘ಗುಪ್ತಾ ನಾಯರ್ ಆ್ಯಂಡ್ ಕೋ ಕಂಪನಿ’ಯ ಪಾಲುದಾರೆ ಸತ್ಯಭಾಮಾ ಗುಪ್ತಾ ಅವರು ತಮ್ಮ ವೈಯಕ್ತಿಕ ಅನುಭವಗಳು ಹಾಗೂ ವೃತ್ತಿಪರ ಜೀವನಯಾನದ ಹಾದಿಯನ್ನು ಹಂಚಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಎಚ್ಎಎಲ್ ಫ್ಯಾಮಿಲೀಸ್ ವೆಲ್ಫೇರ್ ಅಸೋಸಿಯೇಷನ್ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ತೇಜಸ್ವಿ’ ಪ್ರಥಮ ರಾಷ್ಟ್ರೀಯ ಮಹಿಳಾ ಸಮ್ಮೇಳನದಲ್ಲಿ ನಾರಿಯರ ಶಕ್ತಿ ಅನಾವರಣವಾಯಿತು. </p>.<p>‘ಮನೆ ಹಾಗೂ ಕೆಲಸದ ಸ್ಥಳದಲ್ಲಿ ಪ್ರಕಾಶಿಸುವ ಮಹಿಳೆಯರು’ ಎಂಬ ಶೀರ್ಷಿಕೆಯಡಿ ಈ ಸಮ್ಮೇಳನ ನಡೆಯಿತು. ವೃತ್ತಿಪರ ವಲಯಗಳಲ್ಲಿ ಮಹಿಳೆಯ ಬಹುಮುಖ ಪಾತ್ರಗಳ ಬಗ್ಗೆ ತಿಳಿಸಲಾಯಿತು. </p>.<p>ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಕ್ಷಣಾ ಸಚಿವಾಲಯದ ರಕ್ಷಣಾ ಉತ್ಪಾದನಾ ವಿಭಾಗದ ಜಂಟಿ ಕಾರ್ಯದರ್ಶಿ ಮನೀಷಾ ಚಂದ್ರ, ದೇಶದ ಪ್ರಗತಿಯಲ್ಲಿ ಎಚ್ಎಎಲ್ನ ಪಾತ್ರವನ್ನು ಶ್ಲಾಘಿಸಿದರು. ಮನೆ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರು ನಿರ್ವಹಿಸುತ್ತಿರುವ ವಿವಿಧ ಪಾತ್ರಗಳ ಬಗ್ಗೆ ವಿವರಿಸಿದರು. </p>.<p>ಇದೇ ಸಂದರ್ಭದಲ್ಲಿ ಎಚ್ಎಎಲ್ ಫ್ಯಾಮಿಲೀಸ್ ವೆಲ್ಫೇರ್ ಅಸೋಸಿಯೇಷನ್ನ 50 ವರ್ಷಗಳ ಸೇವೆಯ ಸ್ಮರಣಾರ್ಥ ವಿಶೇಷ ಸುವರ್ಣ ಮಹೋತ್ಸವ ಅಂಚೆ ಲಕೋಟೆ ಬಿಡುಗಡೆ ಮಾಡಲಾಯಿತು. ಅಸೋಸಿಯೇಷನ್ನ ಮುಖ್ಯ ಪೋಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಶುಭಾ ಸುನಿಲ್ ಉಪಸ್ಥಿತರಿದ್ದರು.</p>.<p>ಕ್ಯಾನ್ಸರ್ ತಜ್ಞೆ ವಿಜಯಲಕ್ಷ್ಮಿ ದೇಶಮಾನೆ, ಅಮೃತ ವಿಶ್ವಪೀಠಂನ ಡೀನ್ ಭವಾನಿ ರಾವ್ ಮತ್ತು ‘ಗುಪ್ತಾ ನಾಯರ್ ಆ್ಯಂಡ್ ಕೋ ಕಂಪನಿ’ಯ ಪಾಲುದಾರೆ ಸತ್ಯಭಾಮಾ ಗುಪ್ತಾ ಅವರು ತಮ್ಮ ವೈಯಕ್ತಿಕ ಅನುಭವಗಳು ಹಾಗೂ ವೃತ್ತಿಪರ ಜೀವನಯಾನದ ಹಾದಿಯನ್ನು ಹಂಚಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>