<p><strong>ಬೆಂಗಳೂರು:</strong> ನಗರಕ್ಕೆ ದುಡಿಯಲು ಬಂದಿರುವ ಅಥವಾ ವಿವಿಧ ಕಾರಣಗಳಿಂದ ನಗರದಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರು ಮತ್ತು ಸಂತ್ರಸ್ತರಿಗೆ ಸ್ವಂತ ಊರುಗಳಿಗೆ ತೆರಳಲು ಸರ್ಕಾರದಿಂದ ಅನುಮತಿ ಸಿಕ್ಕಿದೆ. ಆದರೆ, ಸ್ವಂತ ಖರ್ಚಿನಲ್ಲಿಯೇ ಪ್ರಯಾಣಿಸಬೇಕಾಗಿದ್ದರಿಂದ ಹಣವಿಲ್ಲದೆ ಕಾರ್ಮಿಕರು ಪರದಾಡಬೇಕಾಯಿತು.</p>.<p>ಗುರುವಾರದವರೆಗೆ ಕಾರ್ಮಿಕ ಇಲಾಖೆಯೇ ಪ್ರಯಾಣ ದರವನ್ನು ಭರಿಸಿ, ಕಾರ್ಮಿಕರನ್ನು ತಮ್ಮ ಊರುಗಳಿಗೆ ಕಳುಹಿಸಿಕೊಟ್ಟಿತು. ಆದರೆ, ಸ್ವಂತ ಖರ್ಚಿನಲ್ಲಿಯೇ ಪ್ರಯಾಣ ಬೆಳೆಸಬೇಕು ಎಂದು ಶುಕ್ರವಾರ ಹೇಳಿದೆ.ಒಂದೂವರೆ ತಿಂಗಳಿಂದ ದುಡಿಮೆ ಇಲ್ಲದೆ ಕಂಗಾಲಾಗಿರುವ ಕಾರ್ಮಿಕರಿಗೆ ಟಿಕೆಟ್ ದರ ಭರಿಸುವುದೂ ಕಷ್ಟವಾಯಿತು.</p>.<p>ಲಾಕ್ಡೌನ್ ಹಿನ್ನೆಲೆಯಲ್ಲಿ ಬಸ್ಗಳಲ್ಲಿ ನಿಯಮದ ಪ್ರಕಾರ ಟಿಕೆಟ್ ವಿತರಣೆಗೆ ಅವಕಾಶ ಇರುವುದಿಲ್ಲ. ಒಪ್ಪಂದದ ಮೇರೆಗೆ ಬಸ್ ಒದಗಿಸಬಹುದು. ಹೀಗೆ ಗುತ್ತಿಗೆ ಪಡೆಯುವ ಬಸ್ ಬಾಡಿಗೆ ಕಿ.ಮೀ.ಗೆ ₹39. ಇದಕ್ಕಾಗಿ 25-30 ಕಾರ್ಮಿಕರು ಒಟ್ಟಾಗಿ ಹೊರಡಬೇಕಾಗುತ್ತದೆ. ಇನ್ನು ಅವರೆಲ್ಲರೂ ಹೆಚ್ಚು-ಕಡಿಮೆ ಒಂದೇ ಮಾರ್ಗದ ಪ್ರಯಾಣಿಕರಾಗಿರಬೇಕಾಗುತ್ತದೆ. ದೂರದ ಊರುಗಳಿಗೆ ಪ್ರಯಾಣಿಸುವ ಕಾರ್ಮಿಕರಿಗೆ ಈ ಕಾರಣಗಳಿಂದ ತುಂಬಾ ತೊಂದರೆಯಾಯಿತು.</p>.<p>‘ಬೇರೆ ಕಾರ್ಮಿಕರೊಂದಿಗೆ ಸೇರಿ ಟಿಕೆಟ್ ದರ ಹಂಚಿಕೊಳ್ಳಬೇಕು. ಇಲ್ಲದಿದ್ದರೆ, ನಿಗದಿಗಿಂತ ದುಪ್ಪಟ್ಟು ಹಣ ನೀಡಬೇಕಾಗುತ್ತದೆ. ದುಡಿಮೆಯಿಲ್ಲದೆ ಕಷ್ಟದಲ್ಲಿರುವ ನಮಗೆ ಇದು ದೊಡ್ಡ ಹೊರೆಯಾಗಿದೆ’ ಎಂದು ಕಾರ್ಮಿಕರೊಬ್ಬರು ಅಳಲು ತೋಡಿಕೊಂಡರು.</p>.<p>ನಗರದ ಕೆ.ಜಿ. ರಸ್ತೆಯಲ್ಲಿರುವ ಕಂದಾಯ ಭವನದ ಎದುರು ಬಸ್ ವ್ಯವಸ್ಥೆ ಮಾಡಲಾಗಿತ್ತು.</p>.<p>‘ಕಾರ್ಮಿಕ ಇಲಾಖೆಯೇ ಪ್ರಯಾಣ ವೆಚ್ಚವನ್ನು ಭರಿಸಿದರೆ ಅನುಕೂಲವಾಗುತ್ತದೆ’ ಎಂದು ಕಾರ್ಮಿಕರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಗರಕ್ಕೆ ದುಡಿಯಲು ಬಂದಿರುವ ಅಥವಾ ವಿವಿಧ ಕಾರಣಗಳಿಂದ ನಗರದಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರು ಮತ್ತು ಸಂತ್ರಸ್ತರಿಗೆ ಸ್ವಂತ ಊರುಗಳಿಗೆ ತೆರಳಲು ಸರ್ಕಾರದಿಂದ ಅನುಮತಿ ಸಿಕ್ಕಿದೆ. ಆದರೆ, ಸ್ವಂತ ಖರ್ಚಿನಲ್ಲಿಯೇ ಪ್ರಯಾಣಿಸಬೇಕಾಗಿದ್ದರಿಂದ ಹಣವಿಲ್ಲದೆ ಕಾರ್ಮಿಕರು ಪರದಾಡಬೇಕಾಯಿತು.</p>.<p>ಗುರುವಾರದವರೆಗೆ ಕಾರ್ಮಿಕ ಇಲಾಖೆಯೇ ಪ್ರಯಾಣ ದರವನ್ನು ಭರಿಸಿ, ಕಾರ್ಮಿಕರನ್ನು ತಮ್ಮ ಊರುಗಳಿಗೆ ಕಳುಹಿಸಿಕೊಟ್ಟಿತು. ಆದರೆ, ಸ್ವಂತ ಖರ್ಚಿನಲ್ಲಿಯೇ ಪ್ರಯಾಣ ಬೆಳೆಸಬೇಕು ಎಂದು ಶುಕ್ರವಾರ ಹೇಳಿದೆ.ಒಂದೂವರೆ ತಿಂಗಳಿಂದ ದುಡಿಮೆ ಇಲ್ಲದೆ ಕಂಗಾಲಾಗಿರುವ ಕಾರ್ಮಿಕರಿಗೆ ಟಿಕೆಟ್ ದರ ಭರಿಸುವುದೂ ಕಷ್ಟವಾಯಿತು.</p>.<p>ಲಾಕ್ಡೌನ್ ಹಿನ್ನೆಲೆಯಲ್ಲಿ ಬಸ್ಗಳಲ್ಲಿ ನಿಯಮದ ಪ್ರಕಾರ ಟಿಕೆಟ್ ವಿತರಣೆಗೆ ಅವಕಾಶ ಇರುವುದಿಲ್ಲ. ಒಪ್ಪಂದದ ಮೇರೆಗೆ ಬಸ್ ಒದಗಿಸಬಹುದು. ಹೀಗೆ ಗುತ್ತಿಗೆ ಪಡೆಯುವ ಬಸ್ ಬಾಡಿಗೆ ಕಿ.ಮೀ.ಗೆ ₹39. ಇದಕ್ಕಾಗಿ 25-30 ಕಾರ್ಮಿಕರು ಒಟ್ಟಾಗಿ ಹೊರಡಬೇಕಾಗುತ್ತದೆ. ಇನ್ನು ಅವರೆಲ್ಲರೂ ಹೆಚ್ಚು-ಕಡಿಮೆ ಒಂದೇ ಮಾರ್ಗದ ಪ್ರಯಾಣಿಕರಾಗಿರಬೇಕಾಗುತ್ತದೆ. ದೂರದ ಊರುಗಳಿಗೆ ಪ್ರಯಾಣಿಸುವ ಕಾರ್ಮಿಕರಿಗೆ ಈ ಕಾರಣಗಳಿಂದ ತುಂಬಾ ತೊಂದರೆಯಾಯಿತು.</p>.<p>‘ಬೇರೆ ಕಾರ್ಮಿಕರೊಂದಿಗೆ ಸೇರಿ ಟಿಕೆಟ್ ದರ ಹಂಚಿಕೊಳ್ಳಬೇಕು. ಇಲ್ಲದಿದ್ದರೆ, ನಿಗದಿಗಿಂತ ದುಪ್ಪಟ್ಟು ಹಣ ನೀಡಬೇಕಾಗುತ್ತದೆ. ದುಡಿಮೆಯಿಲ್ಲದೆ ಕಷ್ಟದಲ್ಲಿರುವ ನಮಗೆ ಇದು ದೊಡ್ಡ ಹೊರೆಯಾಗಿದೆ’ ಎಂದು ಕಾರ್ಮಿಕರೊಬ್ಬರು ಅಳಲು ತೋಡಿಕೊಂಡರು.</p>.<p>ನಗರದ ಕೆ.ಜಿ. ರಸ್ತೆಯಲ್ಲಿರುವ ಕಂದಾಯ ಭವನದ ಎದುರು ಬಸ್ ವ್ಯವಸ್ಥೆ ಮಾಡಲಾಗಿತ್ತು.</p>.<p>‘ಕಾರ್ಮಿಕ ಇಲಾಖೆಯೇ ಪ್ರಯಾಣ ವೆಚ್ಚವನ್ನು ಭರಿಸಿದರೆ ಅನುಕೂಲವಾಗುತ್ತದೆ’ ಎಂದು ಕಾರ್ಮಿಕರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>