<p><strong>ಬೆಂಗಳೂರು: </strong>ಜಲಮಂಡಳಿಯು ತೃತೀಯ ಹಂತದ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳಿಂದ (ಟಿಟಿಪಿ) ನೀರಿನ ಶುದ್ಧೀಕರಣದ ಕುರಿತ ನೈಜ ಮಾಹಿತಿ ಪಡೆಯಲು ಲಾಲ್ಬಾಗ್ ಹಾಗೂ ಕಬ್ಬನ್ ಉದ್ಯಾನಗಳಲ್ಲಿ ‘ಕೊಳಚೆ ನೀರು ಶುದ್ಧೀಕರಣಗುಣಮಟ್ಟ ನಿಗಾ ವ್ಯವಸ್ಥೆ’ಯನ್ನು ಜಾರಿಗೆತರಲು ಮುಂದಾಗಿದೆ.</p>.<p>ಈ ನಿಗಾ ವ್ಯವಸ್ಥೆಯು ನೀರಿನ ಮಾಲಿನ್ಯಕಾರಕ ಅಂಶಗಳ ಕುರಿತು ಮಾಹಿತಿ ನೀಡಲಿದೆ.</p>.<p>ಶುದ್ಧೀಕರಣಗೊಂಡ ಬಹುತೇಕ ನೀರು ಎರಡು ಉದ್ಯಾನಗಳಲ್ಲಿರುವ ಸಸ್ಯಗಳಿಗೆ ನೀರುಣಿಸಲು ಬಳಕೆಯಾಗುತ್ತಿದೆ. ಆದರೂ ಸಹ ಜಲಮಂಡಳಿಗೆ ಉದ್ಯಾನಗಳ ಬೇಡಿಕೆಗೆ ತಕ್ಕಂತೆ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಈ ಎರಡು ಉದ್ಯಾನಗಳು ಸುಧಾರಿತ ತಂತ್ರಜ್ಞಾನದ ಟಿಟಿಪಿಗಳನ್ನು ಹೊಂದಿವೆ.</p>.<p>ಲಾಲ್ಬಾಗ್ನಲ್ಲಿರುವ ಟಿಟಿಪಿ 40 ಲಕ್ಷ ಲೀಟರ್ ಸಾಮರ್ಥ್ಯವನ್ನು ಹೊಂದಿದ್ದರೆ, ಕಬ್ಬನ್ ಉದ್ಯಾನದಲ್ಲಿಯ ಟಿಟಿಪಿ 15 ಲಕ್ಷ ಲೀಟರ್ ಸಾಮರ್ಥ್ಯಹೊಂದಿದೆ. ಶುದ್ಧೀಕರಣಗೊಂಡ ನೀರು ಉದ್ಯಾನಗಳಿಗೆ ಹೋಗುವ ಸ್ಥಳದಲ್ಲಿ ಸೆನ್ಸರ್ಗಳನ್ನು ಅಳವಡಿಸಲಾಗಿದೆ. ಆ ಸೆನ್ಸರ್ಗಳು ನೀರು ಪರೀಕ್ಷೆಗೊಳಪಡಿಸುತ್ತವೆ. ಅದರ ಮಾಲಿನ್ಯಕಾರಗಳನ್ನು ಪತ್ತೆ ಹಚ್ಚಿ15 ನಿಮಿಷಕ್ಕೊಮ್ಮೆ ಮಾಹಿತಿಯನ್ನು ಜಲಮಂಡಳಿಯ ತಾಂತ್ರಿಕ ತಂಡಕ್ಕೆ ರವಾನೆ ಮಾಡುತ್ತವೆ.</p>.<p>ನೀರನ್ನು ಪರೀಕ್ಷೆಗೆ ಒಳಪಡಿಸುವಾಗ ಪಿಎಚ್ ಮೌಲ್ಯ, ತಾಪಮಾನ,ಜೀವರಾಸಾಯನಿಕ ಆಮ್ಲಜನಕ ಬೇಡಿಕೆ (ಬಿಒಡಿ), ರಾಸಾಯನಿಕ ಆಮ್ಲಜನಕ ಬೇಡಿಕೆ(ಸಿಒಡಿ), ಕರಗಿದ ಆಮ್ಲಜನಕ, ಅಮೋನಿಯಾ(NH-3) ಹಾಗೂ ಇತರ ಅಂಶಗಳನ್ನು ಸೆನ್ಸರ್ಗಳು ಪರಿಗಣಿಸುತ್ತವೆ. ನೀರಿನ ಮಾದರಿ ಸಂಗ್ರಹಿಸಿ ಅದನ್ನು ಪ್ರಯೋಗಾಲಯಕ್ಕೆ ತೆಗೆದುಕೊಂಡು ಹೋಗಿ ಪರೀಕ್ಷೆಗೊಳಪಡಿಸಿ ಅದರ ವರದಿ ಕೊಡಲು ಐದು ದಿನ ಬೇಕಾಗುತ್ತಿತ್ತು. ಅದನ್ನು ತಪ್ಪಿಸಲು ಈ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಈ ಸಂಬಂಧ ಜಲಮಂಡಳಿ ಟೆಂಡರ್ ಕರೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಜಲಮಂಡಳಿಯು ತೃತೀಯ ಹಂತದ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳಿಂದ (ಟಿಟಿಪಿ) ನೀರಿನ ಶುದ್ಧೀಕರಣದ ಕುರಿತ ನೈಜ ಮಾಹಿತಿ ಪಡೆಯಲು ಲಾಲ್ಬಾಗ್ ಹಾಗೂ ಕಬ್ಬನ್ ಉದ್ಯಾನಗಳಲ್ಲಿ ‘ಕೊಳಚೆ ನೀರು ಶುದ್ಧೀಕರಣಗುಣಮಟ್ಟ ನಿಗಾ ವ್ಯವಸ್ಥೆ’ಯನ್ನು ಜಾರಿಗೆತರಲು ಮುಂದಾಗಿದೆ.</p>.<p>ಈ ನಿಗಾ ವ್ಯವಸ್ಥೆಯು ನೀರಿನ ಮಾಲಿನ್ಯಕಾರಕ ಅಂಶಗಳ ಕುರಿತು ಮಾಹಿತಿ ನೀಡಲಿದೆ.</p>.<p>ಶುದ್ಧೀಕರಣಗೊಂಡ ಬಹುತೇಕ ನೀರು ಎರಡು ಉದ್ಯಾನಗಳಲ್ಲಿರುವ ಸಸ್ಯಗಳಿಗೆ ನೀರುಣಿಸಲು ಬಳಕೆಯಾಗುತ್ತಿದೆ. ಆದರೂ ಸಹ ಜಲಮಂಡಳಿಗೆ ಉದ್ಯಾನಗಳ ಬೇಡಿಕೆಗೆ ತಕ್ಕಂತೆ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಈ ಎರಡು ಉದ್ಯಾನಗಳು ಸುಧಾರಿತ ತಂತ್ರಜ್ಞಾನದ ಟಿಟಿಪಿಗಳನ್ನು ಹೊಂದಿವೆ.</p>.<p>ಲಾಲ್ಬಾಗ್ನಲ್ಲಿರುವ ಟಿಟಿಪಿ 40 ಲಕ್ಷ ಲೀಟರ್ ಸಾಮರ್ಥ್ಯವನ್ನು ಹೊಂದಿದ್ದರೆ, ಕಬ್ಬನ್ ಉದ್ಯಾನದಲ್ಲಿಯ ಟಿಟಿಪಿ 15 ಲಕ್ಷ ಲೀಟರ್ ಸಾಮರ್ಥ್ಯಹೊಂದಿದೆ. ಶುದ್ಧೀಕರಣಗೊಂಡ ನೀರು ಉದ್ಯಾನಗಳಿಗೆ ಹೋಗುವ ಸ್ಥಳದಲ್ಲಿ ಸೆನ್ಸರ್ಗಳನ್ನು ಅಳವಡಿಸಲಾಗಿದೆ. ಆ ಸೆನ್ಸರ್ಗಳು ನೀರು ಪರೀಕ್ಷೆಗೊಳಪಡಿಸುತ್ತವೆ. ಅದರ ಮಾಲಿನ್ಯಕಾರಗಳನ್ನು ಪತ್ತೆ ಹಚ್ಚಿ15 ನಿಮಿಷಕ್ಕೊಮ್ಮೆ ಮಾಹಿತಿಯನ್ನು ಜಲಮಂಡಳಿಯ ತಾಂತ್ರಿಕ ತಂಡಕ್ಕೆ ರವಾನೆ ಮಾಡುತ್ತವೆ.</p>.<p>ನೀರನ್ನು ಪರೀಕ್ಷೆಗೆ ಒಳಪಡಿಸುವಾಗ ಪಿಎಚ್ ಮೌಲ್ಯ, ತಾಪಮಾನ,ಜೀವರಾಸಾಯನಿಕ ಆಮ್ಲಜನಕ ಬೇಡಿಕೆ (ಬಿಒಡಿ), ರಾಸಾಯನಿಕ ಆಮ್ಲಜನಕ ಬೇಡಿಕೆ(ಸಿಒಡಿ), ಕರಗಿದ ಆಮ್ಲಜನಕ, ಅಮೋನಿಯಾ(NH-3) ಹಾಗೂ ಇತರ ಅಂಶಗಳನ್ನು ಸೆನ್ಸರ್ಗಳು ಪರಿಗಣಿಸುತ್ತವೆ. ನೀರಿನ ಮಾದರಿ ಸಂಗ್ರಹಿಸಿ ಅದನ್ನು ಪ್ರಯೋಗಾಲಯಕ್ಕೆ ತೆಗೆದುಕೊಂಡು ಹೋಗಿ ಪರೀಕ್ಷೆಗೊಳಪಡಿಸಿ ಅದರ ವರದಿ ಕೊಡಲು ಐದು ದಿನ ಬೇಕಾಗುತ್ತಿತ್ತು. ಅದನ್ನು ತಪ್ಪಿಸಲು ಈ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಈ ಸಂಬಂಧ ಜಲಮಂಡಳಿ ಟೆಂಡರ್ ಕರೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>