ಟ್ವಿಟರ್ನಲ್ಲಿ ವಿಡಿಯೊ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದ ರಜನಿಕಾಂತ್, ‘ಭಾರತದಲ್ಲಿ ಕೊರೊನಾ ವೈರಸ್ ಎರಡನೇ ಹಂತದಲ್ಲಿದೆ. ಇದು ಜನರ ಮೂಲಕವೇ ಪ್ರಸಾರವಾಗುವುದರಿಂದ ಜನರು ಮನೆಯಲ್ಲೇ ಇದ್ದು ಅದು ಮೂರನೇ ಹಂತದ ಪ್ರಸರಣವನ್ನು ತಲುಪುವುದನ್ನು ತಡೆಯಬೇಕು. 12ರಿಂದ 14 ಗಂಟೆಗಳ ಕಾಲ ಎಲ್ಲರೂ ಮನೆಯಲ್ಲೇ ಉಳಿದರೆ ವೈರಸ್ನ ಪ್ರಸರಣ ಕೊಂಡಿ ಕಳಚುತ್ತದೆ’ ಎಂದು ಹೇಳಿದ್ದರು.